ಖಾಸಗಿ ನಿವೇಶನಗಳಲ್ಲಿ ಕೊಳಚೆ ನೀರು, ಕಳೆ ಗಿಡಗಳು, ತ್ಯಾಜ್ಯಗಳ ಶೀಘ್ರ ತೆರವುಗೊಳಿಸಿ

KannadaprabhaNewsNetwork |  
Published : Jul 27, 2024, 12:56 AM IST
ಹೊನ್ನಾಳಿ ಫೋಟೋ 25ಎಚ್.ಎಲ್.ಐ3. ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ. | Kannada Prabha

ಸಾರಾಂಶ

ಹೊನ್ನಾಳಿ ನಗರದ ಎಲ್ಲ ಖಾಲಿ ನಿವೇಶನಗಳಲ್ಲಿ ಬೆಳದಿರುವ ಗಿಡಗಳನ್ನು, ತ್ಯಾಜ್ಯವನ್ನು ಮಾಲೀಕರು ಶೀಘ್ರ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಸೂಚನೆ ನೀಡಿದ್ದಾರೆ.

- ಡೆಂಘೀಜ್ವರ ಹಿನ್ನೆಲೆ ಮಾಲೀಕರು ಸ್ಪಂದಿಸಲಿ: ಮುಖ್ಯಾಧಿಕಾರಿ - - - ಹೊನ್ನಾಳಿ: ನಗರದ ಎಲ್ಲ ಖಾಲಿ ನಿವೇಶನಗಳಲ್ಲಿ ಬೆಳದಿರುವ ಗಿಡಗಳನ್ನು, ತ್ಯಾಜ್ಯವನ್ನು ಮಾಲೀಕರು ಶೀಘ್ರ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಸೂಚನೆ ನೀಡಿದರು.

ಪುರಸಭಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ಪಟ್ಟಣ ಹಾಗೂ ತಾಲೂಕಿನಲ್ಲಿ ಡೆಂಘೀಜ್ವರ ಪ್ರಕರಣಗಳು ಕಂಡುಬರುತ್ತಿವೆ. ಈ ಹಿನ್ನೆಲೆ ಡೆಂಘೀ ನಿಯಂತ್ರಣಕ್ಕೆ ಖಾಲಿ ಜಾಗದಲ್ಲಿ ಕಳೆ ಗಿಡಗಳು ಬೆಳೆದಿರುವುದು, ಕೊಳಚೆ ನೀರು ಸಂಗ್ರಹ, ಕಸ-ಕಡ್ಡಿಗಳಂತಹ ತ್ಯಾಜ್ಯ ವಸ್ತುಗಳ ತೆರವು ಮುಖ್ಯವಾಗಿದೆ. ಸ್ವಚ್ಛತೆ ನಿರ್ಲಕ್ಷಿಸಿದರೆ ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಆಗುವುದರಿಂದ ಡೆಂಘೀಜ್ವರ ಹರಡಲು ಆಸ್ಪದ ಕೊಟ್ಟಂತ್ತಾಗುತ್ತದೆ ಎಂದಿದ್ದಾರೆ.

ಈ ಹಿನ್ನೆಲೆ ಕೂಡಲೇ ಮಾಲೀಕರು ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಪುರಸಭೆ ವತಿಯಿಂದಲೇ ಸ್ವಚ್ಛತೆ ಮಾಡಿಸಿ, ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಆಸ್ತಿ ಮಾಲೀಕರ ಖಾತೆಗೆ ಸೇರಿಸಿ, ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಹೊನ್ನಾಳಿ ಪಟ್ಟಣದ ಅಗಳ ಮೈದಾನದ ಸಮೀಪ ಇರುವ ವಾಣಿಜ್ಯ ಕಟ್ಟಡಗಳಿಂದ ಅನಗತ್ಯ ತ್ಯಾಜ್ಯ ನೀರನ್ನು ಮೈದಾನಕ್ಕೆ ಹರಿಸುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಶೀಘ್ರ ಸಂಬಂಧಪಟ್ಟ ವಾಣಿಜ್ಯ ಕಟ್ಟಡದ ಮಾಲೀಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.

ನಗರದಲ್ಲಿ ಮನೆಗಳ ಆಸುಪಾಸಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೆಸರು ನೀರಲ್ಲಿ ಲಾರ್ವಗಳು ಉತ್ಪತ್ತಿಯಾಗಿ, ನಂತರ ಅವು ಸೊಳ್ಳೆಗಳಾಗಿ ಡೆಂಘೀಜ್ವರ, ಚಿಕೂನ್‌ ಗುನ್ಯಾ, ಮಲೇರಿಯಾದಂಥ ಕಾಯಿಲೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇಂತಹ ಪ್ರಕರಣಗಳಿಗೆ ಅವಕಾಶ ನೀಡದೇ ಮನೆ ಮುಂದೆ ನೀರು ನಿಂತರೆ ಕೂಡಲೇ ತೆರವುಗೊಳಿಸಲು ತಿಳಿಸಿದರು.

ಪುರಸಭೆ ವ್ಯಾಪ್ತಿಯ ಅನೇಕ ವಾರ್ಡ್‌ಗಳ ಮನೆಗಳ ಮುಂದಿನ ನಳಗಳಿಗೆ ಟ್ಯಾಪ್‌ ಅಳವಡಿಸಿಲ್ಲ. ಇದರಿಂದಾಗಿ ಪ್ರತಿನಿತ್ಯ ಹೆಚ್ಚಿನ ನೀರು ಪೋಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರ ವಹಿಸಬೇಕು. ಕೂಡಲೇ ನಳಗಳ ಟ್ಯಾಪ್ ಅಳವಡಿಸಿ, ನೀರು ಹಿತಮಿತವಾಗಿ ಬಳಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಪುರಸಭೆ ಕಾಯ್ದೆ ಅನ್ವಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

- - - -ಫೋಟೋ:

ಲೀಲಾವತಿ, ಮುಖ್ಯಾಧಿಕಾರಿ, ಪುರಸಭೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ