₹8.86 ಲಕ್ಷ ಲಾಭದಲ್ಲಿ ಶಹಾಬಂದರ ಪಿಕೆಪಿಎಸ್

KannadaprabhaNewsNetwork |  
Published : Sep 25, 2024, 12:53 AM IST
ಶಹಾಬಂದರ ಪಿಕೆಪಿಎಸ್ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಹಗೇದಾಳ ಮಾತನಾಡಿದರು. | Kannada Prabha

ಸಾರಾಂಶ

ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಈಚೆಗೆ ಜರುಗಿತು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಈಚೆಗೆ ಜರುಗಿತು. ಮುಖ್ಯ ಕಾರ್ಯನಿರ್ವಾಹಕ ಎ.ಜೆ. ಕೊತವಾಲ ವರದಿ ಮಂಡಿಸಿ ಮಾತನಾಡಿ, ಸಂಘ 2120 ಸದಸ್ಯರನ್ನು ಹೊಂದಿದ್ದು, ₹46.70 ಲಕ್ಷ ಷೇರು ಬಂಡವಾಳ, ।₹68.48 ಲಕ್ಷ ಠೇವಣಿ ಹೊಂದಿದೆ. 2023ರ ಆರ್ಥಿಕ ಸಾಲಿನಲ್ಲಿ ಸಂಘಕ್ಕೆ ₹8.86 ಲಕ್ಷ ಲಾಭವಾಗಿದ್ದು, ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸಪ್ಪ ಪಾಟೀಲ, ನಿರ್ದೇಶಕರಾದ ಕರೆಪ್ಪ ಬಿರನೊಳಿ, ಹಣಮಂತ ದಾಸ, ಬಸಪ್ಪ ಪೂಜೇರಿ, ಮಾರುತಿ ಹಂಚಿನಮನಿ, ಸತ್ತೆಪ್ಪಹಾಲಾಯಿ, ಬಸವ್ವ ಹರಗಾಪುರಿ, ಮಲಗಂಗವ್ವ ಗಡಕರಿ, ಮಹ್ಮದಮಝರ ಖತೀಬ, ಪರಶುರಾಮ ಸೂರ್ಯವಂಶಿ, ಬಸಪ್ಪ ಪಾಟೀಲ, ದಸ್ತಗಿರ ಮದಾರಸಾಬ ವಂಟಿಗಾರ, ಶಿವಪ್ಪ ಡೊಣಪಾಟೀಲ ಹಾಗೂ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ