ಓಣಂ ಹಬ್ಬದಲ್ಲಿ ಭರವಸೆ । 9 ದಿನಕ್ಕೆ ಚೆಕ್ ನೀಡಿದ ಎಸ್ಎಸ್
ಕೇರಳ ಸಮಾಜದಿಂದ ಅ.27ರಂದು ಹಮ್ಮಿಕೊಂಡಿದ್ದ ಓಣಂ ಹಬ್ಬದಲ್ಲಿ ಕೇರಳ ಭವನ ನಿರ್ಮಾಣಕ್ಕೆ 5 ಲಕ್ಷ ರು.ಕೊಡುವ ಆಶ್ವಾಸನೆ ನೀಡಿದ್ದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಕೇರಳ ಸಮಾಜದ ಮುಖಂಡರನ್ನು ತಮ್ಮಶಿವ ಪಾರ್ವತಿ ನಿವಾಸಕ್ಕೆ ಕರೆಸಿ ಕೊಟ್ಟ ಮಾತಿನಂತೆ ₹5 ಲಕ್ಷ ರು. ದೇಣಿಗೆ ನೀಡಿ, ಶೀಘ್ರದಲ್ಲಿ ಭವನ ನಿರ್ಮಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಿ.ಪವಿತ್ರನ್, ಕಾರ್ಯದರ್ಶಿ ಪಿ.ಜಿ.ಮಣಿಕುಟ್ಟನ್, ಜಂಟಿ ಕಾರ್ಯದರ್ಶಿ ಸೈಂದರಜಿತ್, ಖಜಾಂಚಿ ಅನೀಸ್ ಅಪ್ಪು, ನಿರ್ದೇಶಕರಾದ ಜಯಕುಮಾರ, ಮಣಿ, ಸುರೇಶ ಕುಮಾರ, ಪ್ರಕಾಶ, ಶ್ರೀಜಿತ್, ಮಹಿಳಾ ಘಟಕದ ಅಧ್ಯಕ್ಷೆ ಬಿ.ಪ್ರಸನ್ನ, ಉಪಾಧ್ಯಕ್ಷೆ ಮಂಜುಶಾ ಸೈಮನ್, ಕಾರ್ಯದರ್ಶಿ ಓ.ಜೆ.ಸೀಮಾಪ್ರಿಯಾ, ನಿರ್ದೇಶಕರಾದ ಅಮೃತಾ ರತೀಶ, ರೀಜಾ ಜಯಂತ್, ನಮಿತಾ ಶ್ರೀಜಿತ್ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಈ ವೇಳೆ ವೇಳೆ ಕೇರಳ ಸಮಾಜದಿಂದ ಶಾಸಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.