ಕೇರ‍‍‍ಳ ಭವನಕ್ಕೆ ಶಾಮನೂರು 5 ಲಕ್ಷ ದೇಣಿಗೆ

KannadaprabhaNewsNetwork |  
Published : Nov 08, 2024, 12:42 AM IST
7ಕೆಡಿವಿಜಿ4-ದಾವಣಗೆರೆಯಲ್ಲಿ ಕೇರಳ ಭವನ ನಿರ್ಮಾಣಕ್ಕೆ ಕೇರಳಂ ಸಮಾಜಂಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ 5 ಲಕ್ಷ ರು. ದೇಣಿಗೆ ನೀಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಕೇರಳ ಭವನ ನಿರ್ಮಾಣಕ್ಕೆ ಕೇರಳಂ ಸಮಾಜಂಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ 5 ಲಕ್ಷ ರು. ದೇಣಿಗೆ ನೀಡಿದರು.

ಓಣಂ ಹಬ್ಬದಲ್ಲಿ ಭರವಸೆ । 9 ದಿನಕ್ಕೆ ಚೆಕ್ ನೀಡಿದ ಎಸ್‌ಎಸ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇರಳ ಸಮಾಜದಿಂದ ಅ.27ರಂದು ಹಮ್ಮಿಕೊಂಡಿದ್ದ ಓಣಂ ಹಬ್ಬದಲ್ಲಿ ಕೇರಳ ಭವನ ನಿರ್ಮಾಣಕ್ಕೆ 5 ಲಕ್ಷ ರು.ಕೊಡುವ ಆಶ್ವಾಸನೆ ನೀಡಿದ್ದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಕೇರಳ ಸಮಾಜದ ಮುಖಂಡರನ್ನು ತಮ್ಮಶಿವ ಪಾರ್ವತಿ ನಿವಾಸಕ್ಕೆ ಕರೆಸಿ ಕೊಟ್ಟ ಮಾತಿನಂತೆ ₹5 ಲಕ್ಷ ರು. ದೇಣಿಗೆ ನೀಡಿ, ಶೀಘ್ರದಲ್ಲಿ ಭವನ ನಿರ್ಮಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಿ.ಪವಿತ್ರನ್‌, ಕಾರ್ಯದರ್ಶಿ ಪಿ.ಜಿ.ಮಣಿಕುಟ್ಟನ್‌, ಜಂಟಿ ಕಾರ್ಯದರ್ಶಿ ಸೈಂದರಜಿತ್, ಖಜಾಂಚಿ ಅನೀಸ್ ಅಪ್ಪು, ನಿರ್ದೇಶಕರಾದ ಜಯಕುಮಾರ, ಮಣಿ, ಸುರೇಶ ಕುಮಾರ, ಪ್ರಕಾಶ, ಶ್ರೀಜಿತ್‌, ಮಹಿಳಾ ಘಟಕದ ಅಧ್ಯಕ್ಷೆ ಬಿ.ಪ್ರಸನ್ನ, ಉಪಾಧ್ಯಕ್ಷೆ ಮಂಜುಶಾ ಸೈಮನ್‌, ಕಾರ್ಯದರ್ಶಿ ಓ.ಜೆ.ಸೀಮಾಪ್ರಿಯಾ, ನಿರ್ದೇಶಕರಾದ ಅಮೃತಾ ರತೀಶ, ರೀಜಾ ಜಯಂತ್, ನಮಿತಾ ಶ್ರೀಜಿತ್‌ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಈ ವೇಳೆ ವೇಳೆ ಕೇರಳ ಸಮಾಜದಿಂದ ಶಾಸಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ