ಸನಾತನ ಧರ್ಮ ಉಳಿಸಲು ಶ್ರಮಿಸಿದ ಶಂಕರಾಚಾರ್ಯರು: ಮಾಯನ್ನವರ

KannadaprabhaNewsNetwork |  
Published : May 13, 2024, 01:01 AM IST
ಫೋಟೊ-೧೨ಆರ್‌ಬಿಕೆ೩/ತಹಶೀಲ್ದಾರ ಕಚೇರಿಯಲ್ಲಿ ಭಾನುವಾರ ಶಂಕರಾಚಾರ್ಯ ಜಯಂತಿ ಅಂಗವಾಗಿ ಭಾವಚಿತ್ರ ಪೂಜೆ ಸಲ್ಲಿಸಿ ಶ್ರೀಕಾಂತ ಮಾಯನ್ನವರ ಮಾತನಾಡಿದರು. | Kannada Prabha

ಸಾರಾಂಶ

ಅದ್ವೈತ ಸಿದ್ಧಾಂತ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ, ಸನಾತನ ಧರ್ಮವನ್ನು ಶಾಶ್ವತವಾಗಿ ಉಳಿಸುವಲ್ಲಿ ಶಂಕರಾಚಾರ್ಯರ ಜೀವನ ಸಾಧನೆ ಇಂದಿನ ಯುವಪೀಳಿಗೆಗೆ ದಿಗ್ಧರ್ಶಿಯಾಗಿದೆ ಎಂದು ಉಪತಹಸೀಲ್ದಾರ್‌ ಶ್ರೀಕಾಂತ ಮಾಯನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಅದ್ವೈತ ಸಿದ್ಧಾಂತ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ, ಸನಾತನ ಧರ್ಮವನ್ನು ಶಾಶ್ವತವಾಗಿ ಉಳಿಸುವಲ್ಲಿ ಶಂಕರಾಚಾರ್ಯರ ಜೀವನ ಸಾಧನೆ ಇಂದಿನ ಯುವಪೀಳಿಗೆಗೆ ದಿಗ್ಧರ್ಶಿಯಾಗಿದೆ ಎಂದು ಉಪತಹಸೀಲ್ದಾರ್‌ ಶ್ರೀಕಾಂತ ಮಾಯನ್ನವರ ಹೇಳಿದರು.

ಪಟ್ಟಣದ ವಿಶೇಷ ತಹಸೀಲ್ದಾರ್‌ ಕಚೇರಿಯಲ್ಲಿ ಭಾನುವಾರ ಶಂಕರಾಚಾರ್ಯ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿದ ವಿವಿಧ ಧರ್ಮಗಳನ್ನೊಳಗೊಂಡ ಬೃಹತ್ ದೇಶವಾಗಿದ್ದು, ದೇಶದ ಸಂಪ್ರದಾಯ ಉಳಿಸುವಲ್ಲಿ ಅನೇಕ ಸಂತ ಮಹಾಂತರು ಆಯಾ ಕಾಲಕ್ಕೆ ನಿರಂತರವಾಗಿ ಪರಿಶ್ರಮಿಸಿರುವುದು ದೇಶದ ಹಿರಿಮೆಯಾಗಿದೆ ಎಂದು ಹೇಳಿದರು.

ಅತುಲ್ ದೇಶಪಾಂಡೆ ಮಾತನಾಡಿ, ಸನಾತನ ಧರ್ಮ ಪ್ರತಿಪಾದಕರಾದ ಶಂಕರಾಚಾರ್ಯರು ದೇಶದ ಪೂರ್ವ ದಿಕ್ಕಿಗೆ ದ್ವಾರಕಾ, ದಕ್ಷಿಣಕ್ಕೆ ಕಂಚಿ, ಉತ್ತರಕ್ಕೆ ಬದರಿನಾಥ, ಪಶ್ಚಿಮಕ್ಕೆ ಜಗನ್ನಾಥಪುರಿ ಪೀಠಗಳನ್ನು ಸ್ಥಾಪಿಸಿ, ಅದ್ವೈತ ಸಿದ್ಧಾಂತವನ್ನು ದೇಶದ ಮೂಲೆಮೂಲೆಗಳಲ್ಲಿಯೂ ಪಸರಿಸಿದ ಮಹಾತ್ಮ ಎಂದರು. ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿ ಮಹಾದೇವ ಯಲ್ಲಟ್ಟಿ, ಶಂಕರ ಕಡಕೋಳ ಹಾಗೂ ಹಿರಿಯರಾದ ಗಿರೀಶ ದೇಶಪಾಂಡೆ, ರಮೇಶ ಬೆಳಗಲಿ, ರಾಮ ಜೋಶಿ, ತಿರುಪತಿ ಜೋಶಿ, ಉದಯ ಬೆಳಗಲಿ, ಗಿರೀಶ ಕುಲಕರ್ಣಿ, ಅಮಿತ ಪಾರಗಾಂವಕರ ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ