ಹೂವಿನಹಡಗಲಿ: ಶರಣ ಸಾಹಿತ್ಯ, ಸೂಫಿ- ಸಂತರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಮಕ್ಕಳಿಗೆ ಇಂತಹ ಸಾಹಿತ್ಯ ಕುರಿತು ಅಭಿರುಚಿ ಬೆಳೆಸುವ ಅಗತ್ಯವಿದೆ ಎಂದು ಹೊಸಪೇಟೆಯ ಕವಯತ್ರಿ ಡಾ.ಭಾರತಿ ಮೂಲಿಮನಿ ಹೇಳಿದರು.ಇಲ್ಲಿನ ಶಾಖಾ ಗವಿಸಿದ್ದೇಶ್ವರ ಮಠದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ, ಕದಳಿ ಮಹಿಳಾ ವೇದಿಕೆ ತಾಲೂಕ ಘಟಕ, ಶರಣ ಸಾಹಿತ್ಯ ಪರಿಷತ್ ಯುವ ಘಟಕಇವರ ಸಹಯೋಗದಲ್ಲಿ, ಕಾಯಕ ದೀಕ್ಷೆ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಮತ್ತು ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ಮುಖಂಡ ಚಂದ್ರಕಾಂತ ಎಸ್.ಪಾಟೀಲ್ ಕಾಯಕ ದೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರಲ್ಲಿ ಶರಣ ಸಾಹಿತ್ಯದ ಓದಿನ ಅಭಿರುಚಿ ಬೆಳೆಸಬೇಕಿದೆ.
ಬಸವಾದಿ ಶರಣರ, ಸೂಫಿ ಸಂತರ ವಚನಗಳು ವಿಚಾರಗಳನ್ನು ಗ್ರಂಥಗಳ ರೂಪದಲ್ಲಿ ಪ್ರಕಟಿಸುವ, ಮೂಲಕ ಓದುಗರಿಗೆ ಒದಗಿಸುವ ಕೆಲಸ ಆಗಬೇಕಾಗಿದೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ರವೀಂದ್ರನಾಥ ಅಧ್ಯಕ್ಷತೆ ವಹಿಸಿ, ಜಿಲ್ಲೆ ಮತ್ತು ತಾಲೂಕ ಶಸಾಪ ಚಟುವಟಿಕೆಗಳು ಕುರಿತು ಮಾಹಿತಿ ನೀಡಿದರು.
ಶಸಾಪ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರವಿಕುಮಾರ, ಸಾಹಿತಿ ತೋ.ಮ.ಶಂಕ್ರಯ್ಯ,
ಶಸಾಪ ತಾಲೂಕ ಘಟಕದ ಅಧ್ಯಕ್ಷ ಟಿ.ಎಂ.ನಾಗಭೂಷಣ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಶೈಲಜಾ ಪವಾಡಶೆಟ್ರು, ಯುವ ಘಟಕದ ಅಧ್ಯಕ್ಷ ಎಂ.ದಯಾನಂದ ರವರಿಗೆ ಶಸಾಪ ಜಿಲ್ಲಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ನೆರೆವೇರಿಸಲಾಯಿತು.
ಯುವರಾಜ್ ಗೌಡ್ರು, ಜಯಮಾಲ, ಎ.ವೀಣಾ, ಮೇಘನಾ, ಯಶಸ್ವಿನಿ, ಸಿಂಚನಾ, ಬಸವರಾಜ ಭಂಡಾರಿ ವಚನ ಗಾಯನ ಪ್ರಸ್ತುತ ಪಡಿಸಿದರು.