ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಷಷ್ಠಿ ಪೂಜೆ

KannadaprabhaNewsNetwork |  
Published : Nov 27, 2025, 01:30 AM IST
26ಎಚ್ಎಸ್ಎನ್14 : ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ದೇವಾಲಯದ ಪ್ರಹಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು.  | Kannada Prabha

ಸಾರಾಂಶ

ಶ್ರೀಸ್ವಾಮಿಯ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿಯ ಪ್ರಯುಕ್ತ ಶ್ರಾವಣ ನಕ್ಷತ್ರದಲ್ಲಿ ಶ್ರೀವಲ್ಲಿ ಸಮೇತ ಸುಬ್ರಮಣ್ಯ ಸ್ವಾಮಿಯ ಮೂರ್ತಿಗೆ ಸಂಪ್ರದಾಯದ ಆಚರಣೆಯಂತೆ ಪುಣ್ಯಹಃ, ಪಂಚಾಮೃತ ಹಾಗೂ ಪಂಚಫಲ ಅಭಿಷೇಕ, ಪುಷ್ಪಾರ್ಚನೆ ನಡೆಸಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ವೇದ ಪಾರಾಯಣ, ಸ್ತೋತ್ರಪಾಠ ಪಠಣ, ಮಹಾನಿವೇದನ, ತದಿಯಾರಾಧನೆ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಟಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಶ್ರೀಸ್ವಾಮಿಯ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿಯ ಪ್ರಯುಕ್ತ ಶ್ರಾವಣ ನಕ್ಷತ್ರದಲ್ಲಿ ಶ್ರೀವಲ್ಲಿ ಸಮೇತ ಸುಬ್ರಮಣ್ಯ ಸ್ವಾಮಿಯ ಮೂರ್ತಿಗೆ ಸಂಪ್ರದಾಯದ ಆಚರಣೆಯಂತೆ ಪುಣ್ಯಹಃ, ಪಂಚಾಮೃತ ಹಾಗೂ ಪಂಚಫಲ ಅಭಿಷೇಕ, ಪುಷ್ಪಾರ್ಚನೆ ನಡೆಸಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ವೇದ ಪಾರಾಯಣ, ಸ್ತೋತ್ರಪಾಠ ಪಠಣ, ಮಹಾನಿವೇದನ, ತದಿಯಾರಾಧನೆ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಟಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಿದ ನಂತರ ಶ್ರೀ ಸ್ವಾಮಿಯ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಹಿರಿಯ ಅರ್ಚಕ ರಾಮಸ್ವಾಮಿಭಟ್ಟರ ನೇತೃತ್ವದಲ್ಲಿ ವೆಂಕಟನರಸಿಂಹನ್, ನಾರಾಯಣಭಟ್ಟರು ಹಾಗೂ ರಾಮಪ್ರಸನ್ನ, ಹಳೇಬೀಡು ಪ್ರಸಾದ್, ವಿಜಯ್ ಕುಮಾರ್, ನಾಗರಾಜು, ಇತರರು ಪೂಜಾ ಕೈಂಕರ್ಯ ನೆರವೇರಿಸಿದರು. ಪುರಸಭಾ ಮಾಜಿ ಅಧ್ಯಕ್ಷೆ ಲಕ್ಷ್ಮೀ, ಮಾಜಿ ಸದಸ್ಯರಾದ ಬಾ.ರಾ.ಸುಬ್ಬರಾಯ, ಶಿವಣ್ಣ, ಕುಮಾರಸ್ವಾಮಿ, ಉದ್ಯಮಿ ಮಾಯಣ್ಣ, ಭಗವಾನ್, ಕಡುವಿನಕೋಟೆ ವೆಂಕಟೇಶ್, ಡಿಶ್ ಬಾಸ್ಕರ, ರೇಖಾ, ಸತೀಶ್, ಮೂರ್ತಿ, ಕುಮಾರ್, ರಾಜು, ಚಲುವ, ಮುತ್ತುರಾಜ್, ಪ್ರದೀಪ್ ರಾಜ್, ವಸಂತಲಕ್ಷ್ಮಿ ಮಂಜುನಾಥ್, ಬಾಬು, ರೋಹಿತ್, ಪ್ರವೀಣ್, ಪ್ರದೀಪ್ ಕುಮಾರ್, ಶಿವಕುಮಾರ್, ಬಾಸ್ಕರ ನಾಯ್ಡು, ಅಭಿಲಾಷ್, ರವೀಶ್, ಮಂಜು ಆಚಾರ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ