ಕನ್ನಡಪ್ರಭ ವಾರ್ತೆ ಕಲಘಟಗಿ
ತಹಸೀಲ್ದಾರ ಕಚೇರಿ ಶಿರಸ್ತೇದಾರ್ ಸುರೇಶ ಅಡವಿ ಎಂಬುವವರು ಕಲಘಟಗಿ ತಾಲೂಕಿನ ಕೂಡಲಗಿ ಗ್ರಾಮದ ರೈತರಾದ ಮಲ್ಲಿಕಾರ್ಜುನ ಮಹದೇವಪ್ಪ ಕುರುಬರ ಅವರ ಹೊಲದ ಸರ್ವೇ ನಂಬರ್ 186 ಮತ್ತು 160ರ ಭೂ ನ್ಯಾಯ ಮಂಡಳಿಯ ಆದೇಶದ ಖಾತೆ ಬದಲಾವಣೆ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು.
ಈ ಕುರಿತು ನೀಡಿದ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಎಸ್ಪಿ ಶಂಕರ್ ಎಂ. ರಾಗಿ ಮಾರ್ಗದರ್ಶನದಲ್ಲಿ ಸಿಪಿಐ ಬಸಗೌಡ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ. ಸೊಪ್ಪಿ, ವಿ.ಎಸ್. ದೇಸಾಯಿಗೌಡ್ರ, ಎಸ್.ಇ. ಲಕ್ಕಮ್ಮನವರ, ಎಂ.ಎಂ. ಶಿವನಾಯ್ಕರ ಕಾರ್ಯಚಾರಣೆಯಲ್ಲಿ ಇದ್ದರು.