ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದೇಶಪ್ರೇಮ ಬೋಧಿಸಿದ ತಾಯಿ
ಶಿವಾಜಿಗೆ ತಾಯಿ ಜೀಜಾಬಾಯಿ ಬಾಲ್ಯದಿಂದಲೇ ದೇಶ ಪ್ರೇಮ ಮತ್ತು ಹೋರಾಟ ಮನೋಭಾವ ತುಂಬುವ ಜತೆಗೆ ಅನೇಕ ಮಹನೀಯರ ಕಥೆಗಳನ್ನು ಹೇಳಿದ ಪರಿಣಾಮ ೧೬ನೇ ವಯಸ್ಸಿನಲ್ಲಿಯೇ ಶಿವಾಜಿ ಬಿಜಾಪುರದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡಿದ್ದರು. ಅವರ ದೇಶಪ್ರೇಮವನ್ನು ಕಂಡು ೧೬೭೪ ರಲ್ಲಿ ಛತ್ರಪತಿ ಎಂಬ ಬಿರುದನ್ನು ಜನ ನೀಡಿದರು ಎಂದರು.ಶಿವಾಜಿ ಮಹಾರಾಜ ಕರ್ನಾಟಕದ ಅಳಿಯನಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅವಿನಾಭಾವ ಸಂಬಂಧವನ್ನು ಕಲ್ಪಿಸಿದೆ. ಸುಮಾರು ೪೦೦೦ ಜನಕ್ಕೂ ಮೇಲ್ಪಟ್ಟು ಬಂಗಾರಪೇಟೆ ಕ್ಷೇತ್ರದಲ್ಲಿ ಮರಾಠ ಸಮುದಾಯದ ಜನ ಇದ್ದರೂ ಒಗ್ಗಟ್ಟಿನ ಕೊರತೆ ಇದೆ. ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ ಸಮುದಾಯದ ಜನ ವಾಸವಿರುವ ಕಾರಣ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಪಿ ಹಳ್ಳಿ ಗ್ರಾಮದ ಬಳಿ ೨೫ ಕೋಟಿ ರು. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆಯಲಾಗಿದೆ. ಹಾಗೂ ಮರಾಠರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.ಸಮುದಾಯ ಭವನಕ್ಕೆ ಜಾಗ ನೀಡಿ
ಈ ಸಂದರ್ಭದಲ್ಲಿ ಮರಾಠ ಪರಿಷತ್ನ ಪ್ರಧಾನ ಕಾರ್ಯದರ್ಶಿ ಸುನೀಲ್ ಚೌವಾನ್, ಗ್ರಾಮಾಂತರ ಅಧ್ಯಕ್ಷ ಗಿರಿಪ್ರಸಾದ್, ಕಾರ್ಯದರ್ಶಿ ಕಾಶಿನಾಥ್ ಶಿಂದೆ, ತಾ.ಪಂ ಮಾಜಿ ಸದಸ್ಯೆ ಅಂಬೂಬಾಯಿ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ರಾಮಶೆಟ್ಟಿ, ಪಿಡಿಒ ಮಧುಚಂದ್ರ, ಡಿಇಓ ಎಂ. ಕೇದಾರ್ರಾವ್ ಖರಾಡೆ, ಮುಖಂಡರಾದ ನಾಗೇಶ್ ರಾವ್, ಶ್ರೀನಿವಾಸ್ ರಾವ್ ಕದಂಬ, ಶ್ರೀನಿವಾಸರಾವ್, ರಾಜಪ್ಪ ಮುಂತಾದವರು ಹಾಜರಿದ್ದರು.