ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಕುಸ್ತಿಯಲ್ಲಿ ಕೊನೆಯ ಕುಸ್ತಿ ವಿಜೇತರಾಗಿ ಕಾಕಾ ಪವರ್ ತಾಲಿಮ್ ಡಬಲ್ ಮಹಾರಾಷ್ಟ್ರ ಕೇಸರಿ ಪುಣೆಯ ಶಿವರಾಜ ರಾಕ್ಷೆಯವರು ಸುಮಾರು 1 ಲಕ್ಷ 51 ಸಾವಿರ ರು. ನಗದು ಬಹುಮಾನ ಗೆದ್ದರು.
ಹರಿಯಾಣಾದ ರವೀಂದ್ರ ಕುಮಾರ ಹರಿಯಾಣ ತಾಲಿಮ್ ಭಾರತ ಕೇಸರಿ ಹರಿಯಾಣ ಇವರು ಕೊನೆಯ ಕುಸ್ತಿಯಲ್ಲಿ ಪರಾಜಿತರಾದರು.ವಿಜೇತರಿಗೆ ಹಾರಕೂಡದ ಶ್ರೀಗಳು 1.51 ಲಕ್ಷ ರು. ನೀಡಿ ಸತ್ಕರಿಸಿ ಗೌರವಿಸಿದರು. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ನವದೆಹಲಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮಿ, ಅಭಿನವ ಗುರುಲಿಂಗೇಶ್ವರ ಸ್ವಾಮಿ, ಚೆನ್ನಮಲ್ಲ ಸ್ವಾಮಿ ಗಳು ಸಮ್ಮುಖ ವಹಿಸಿದ್ದರು.
ಈ ಸಂದರ್ಭದಲ್ಲಿ ಪೃಥ್ವಿರಾಜ ದೇಗಾಂವ, ಪ್ರಕಾಶ ಬೆಳಮಗೆ, ಸಿದ್ಧಾರೂಡ ಪಾಟಿಲ ಗಿಲಕಿ, ಹುಸೇನ್ ಪಟೇಲ, ಪಂಡಿತರಾವ ಡಾವರೆ, ವಿಜಯಕುಮಾರ ಸಂಗೋಳಗೆ, ಆನಂದರಾವ ಝಳಕೆ, ಖಾಜೆಸಾಬ್ ಮುಲ್ಲಾ, ಸುಭಾಷ ದೇಗಾಂವ, ಪಂಡಿತರಾವ ದೇಗಾಂವ, ರವಿ ರಾಯಜಿ, ಮಹಾಂತಪ್ಪ ಸಿರಗಾಪೂರ, ನಾಗಣ್ಣ ಪಾಟೀಲ, ಗುರು ದೇಗಾಂವ ಗದಲೇಗಾಂವ, ಸಿದ್ರಾಮ ಹೆಗಡೆ, ಶಾಸ್ತ್ರಿ ಝಾಪೂರವಾಡಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ 18ಬಿಡಿಆರ್53