ಚರ್ಚೆಗೆ ಗ್ರಾಸವಾದ ಬ್ಯಾಂಕ್ ನಡೆ । ಡಿಸಿ, ಎಸ್ಪಿ ಮಧ್ಯ ಪ್ರವೇಶಕ್ಕೆ ಆಗ್ರಹ । ₹20 ಲಕ್ಷ ಸಾಲಕ್ಕೆ ₹73 ಲಕ್ಷ ನೀಡುವಂತೆ ಹೇಳಿದ್ದ ಬ್ಯಾಂಕ್
ಹಳೇ ಮಾಲೀಕರ ಸಾಲಕ್ಕೆ ಹೊಸ ಮಾಲೀಕರ ಅಂಗಡಿಗಳಿಗೆ ಬೀಗ ಜಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕರೂರು ವೈಶ್ಯ ಬ್ಯಾಂಕ್ ಸಿಬ್ಬಂದಿ ಏಕಾಏಕಿ ಸಾಲ ವಸೂಲಾತಿಗೆ ಆಗಮಿಸಿ 2014ರಲ್ಲಿ ಅಂಗಡಿ ಮೂಲ ಮಾಲೀಕರು ಮಾಡಿದ್ದ 20 ಲಕ್ಷ ರು. ಸಾಲಕ್ಕೆ ಬಡ್ಡಿ ಸೇರಿಸಿ 73 ಲಕ್ಷ ರು. ಪಾವತಿಸುವಂತೆ ಹೊಸ ಮಾಲೀಕರಿಗೆ ಸೂಚಿಸಿದ್ದು ಈಗ ಬ್ಯಾಂಕ್ ನಡೆ ಸಾರ್ವಜನಿಕರು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಆಗಿದ್ದೇನು?:
ಆದರೆ ಈಗ ಹಳೇ ಸಾಲ ವಸೂಲಾತಿಗೆ ಇಳಿದಿರುವ ಕರೂರು ವೈಶ್ಯ ಬ್ಯಾಂಕ್ ಅಧಿಕಾರಿಗಳು ಅಂಗಡಿಗಳ ಮೇಲೆ ಸಾಲ ಇದೆ ಎಂದು ಹೇಳಿ 2014ರ 20 ಲಕ್ಷ ರುಪಾಯಿಗೆ 10 ವರ್ಷದ ಬಡ್ಡಿ ಸೇರಿಸಿ ಬರೋಬ್ಬರಿ 73 ಲಕ್ಷ ರು. ಪಾವತಿಸುವಂತೆ ಈಗಿನ ಅಂಗಡಿ ಮಾಲೀಕರಿಗೆ ತಿಳಿಸಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೇ ಇದ್ದಾಗ ಅಂಗಡಿಗಳನ್ನು ಸೀಜ್ ಮಾಡಿದ್ದು ಪ್ರಕರಣ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅಂಗಳಕ್ಕೆ ಬಂದು ನಿಂತಿದೆ.
ಸೋಮವಾರ ಮಳಿಗೆಗಳಲ್ಲಿ ಇದ್ದ ಸಾಮಾನುಗಳನ್ನು ಜಪ್ತಿ ಮಾಡಲು ಮುಂದಾದ ವೇಳೆ ವಿಷಯ ತಿಳಿದು ಅಂಗಡಿ ಮಾಲೀಕರ ಪರವಾಗಿ ಪ್ರತಿಭಟನೆ ನಡೆಸಿದ ಛಲವಾದಿ ಮಹಾಸಭೆ, ರಕ್ಷಣಾ ವೇದಿಕೆ, ರೈತ ಸಂಘದ ಕಾರ್ಯಕರ್ತರು ಬ್ಯಾಂಕ್ ಸಿಬ್ಬಂದಿ ನಡೆಯನ್ನು ಖಂಡಿಸಿದ್ದಾರೆ.ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಅಯಾಬ್ ಕನ್ನಡಿಗ, ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಬಿಸಿಲಯ್ಯ, ಅಫ್ಜಲ್, ರಾಮಕೖಷ್ಣ, ಅಯೂಜ್, ಮಹಿಳಾ ಸಂಘಗಳ ಪದಾಧಿಕಾರಿಗಳು ಇದ್ದರು.