ಕುಷ್ಟಗಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Aug 26, 2026, 02:30 AM IST
ಪೋಟೊ25ಕೆಎಸಟಿ1: ಕುಷ್ಟಗಿ ತಾಲೂಕಿನ ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಚುಟುಕು ಸಾಹಿತಿ ಚಂದಪ್ಪ ಹಕ್ಕಿ ಅವರನ್ನು ಕುಷ್ಟಗಿ ತಾಲೂಕು ಚುಸಾಪ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಚುಟುಕು ಸಾಹಿತ್ಯ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕಡಿಮೆ ಪದಗಳಲ್ಲಿ ಗಂಭೀರ ವಿಚಾರ ಆರ್ಥಿಕ ಕಟ್ಟಿಕೊಡುವ ಶಕ್ತಿ ಹೊಂದಿದೆ.

ಕುಷ್ಟಗಿ: ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕುಷ್ಟಗಿ ತಾಲೂಕು ಇದೀಗ ಚುಟುಕು ಸಾಹಿತ್ಯಕ್ಕೂ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ.

ತಾಲೂಕಿನ ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಸೆ. 26ರಂದು ಪರಿಷತ್ತು ಚುಟುಕು ಸಾಹಿತ್ಯ ತಾಲೂಕು ಘಟಕ ನಿರ್ಧರಿಸಿದ್ದು, ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಚುಟುಕು ಸಾಹಿತಿ ಚಂದಪ್ಪ ಹಕ್ಕಿ ಅವರನ್ನು ತಾಲೂಕಿನ ಹನುಮಸಾಗರದ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಚಂದಪ್ಪ ಹಕ್ಕಿ ಅವರನ್ನು ಸನ್ಮಾನಿಸಿ ಸಮ್ಮೇಳನದ ಸಿದ್ಧತೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಿದರು.

ಹಿರಿಯ ಸಾಹಿತಿ ಹನುಮೇಶ ಗುಮಗೇರಿ ಮಾತನಾಡಿ, ಚುಟುಕು ಸಾಹಿತ್ಯ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕಡಿಮೆ ಪದಗಳಲ್ಲಿ ಗಂಭೀರ ವಿಚಾರ ಆರ್ಥಿಕ ಕಟ್ಟಿಕೊಡುವ ಶಕ್ತಿ ಹೊಂದಿದೆ. ಚುಟುಕು ಸಾಹಿತ್ಯದತ್ತ ಯುವ ಬರಹಗಾರರು ಹೆಚ್ಚಿನ ಆಸಕ್ತಿ ತೋರಬೇಕು. ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದೊಂದಿಗೆ ಮಾದರಿಯಾಗಿ ನಡೆಸಬೇಕು. ಸಮ್ಮೇಳನವು ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ತಾಲೂಕಿನ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಬೇಕಾಗಿದೆ.

ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿ, ಚಂದಪ್ಪ ಹಕ್ಕಿ ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೂರು ಸಾಹಿತ್ಯ ಸಮ್ಮೇಳನ ನಡೆಸಿದರು ನಡೆಸಿದ ಅನುಭವ. ಎರಡು ಚುಟುಕು ಸಂಕಲನಗಳನ್ನು ರಚಿಸಿರುವ ಅವರು ಚುಟುಕು ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಇಂತಹ ಅನುಭವ ಹೊಂದಿರುವ ಸೂಕ್ತ ವ್ಯಕ್ತಿ ಸರ್ವಾಧ್ಯಕ್ಷ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಹೇಶ್ ಹಡಪದ್ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಚುಟುಕು ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸಂತಸದ ಸಂಗತಿ. ಸಮ್ಮೇಳನ ಯಶಸ್ವಿಗೊಳಿಸುವುದು ಒಬ್ಬರ ಜವಾಬ್ದಾರಿಯಲ್ಲ. ಸಾಹಿತಿಗಳು, ಕವಿಗಳು, ಸಾಹಿತ್ಯಾಸಕ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ತಾಲೂಕಿನ ಸಾಹಿತ್ಯ ಪರಂಪರೆಗೆ ಮತ್ತಷ್ಟು ಬಲ ನೀಡುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ರೀತಿಯ ಸಮ್ಮೇಳನಗಳು ಹಾಗೂ ಡಾ ಕಾರ್ಯಕ್ರಮಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಚುಟುಕು ಸಾಹಿತ್ಯ ಸಮ್ಮೇಳನವು ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ವೇದಿಕೆಯಾಗಬೇಕು. ಸಮ್ಮೇಳನ ಯಶಸ್ವಿಗೆ ಅಗತ್ಯ ಸಹಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಚುಸಾಪ ಪದಾಧಿಕಾರಿ ಮಾಜಿ ಸೈನಿಕ ಶಿವಾಜಿ ಹಡಪದ್, ಪರಶಿವಮೂರ್ತಿ ಮಾತಲದಿನ್ನಿ, ಚುಸಾಪ ಕಾರ್ಯದರ್ಶಿ ವಿಶ್ವನಾಥ ಅಂಬಲಿಕೊಪ್ಪಮಠ, ಶ್ರೀನಿವಾಸ ಜಹಗೀರದಾರ, ಬೀರಪ್ಪ ಕಡ್ಲಿಮಟ್ಟಿ, ರಾಜುಕುಮಾರ ನಾಯಕ್, ಈರಣ್ಣ ಅಂಗಡಿ, ರಾಮನಗೌಡ ಗೌಡಪ್ಪನವರ, ಬಸವರಾಜ, ಹುಲೇಂದ್ರ, ಶಿವರಾಜ ಬಂಡಿಹಾಳ, ಏಕನಾಥ ಮೆದಿಕೇರಿ, ವಸಂತಕುಮಾರ ಸಿನ್ನೂರು ಸೇರಿದಂತೆ ಅನೇಕರು.

ಕುಷ್ಟಗಿ ತಾಲೂಕಿನ ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸುವ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಪದಾಧಿಕಾರಿಗಳಿಗೆ ಕೃತಜ್ಞತೆ. ನೀಡಿರುವ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಎಲ್ಲರೊಂದಿಗೆ ಕೈಜೋಡಿಸಲಾಗುವುದು. ಈ ಚುಟುಕು ಸಾಹಿತ್ಯದ ಬೆಳವಣಿಗೆಗೆ ಸಮ್ಮೇಳನ ಹೊಸ ವೇದಿಕೆಯಾಗಲಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಚಂದಪ್ಪ ಹಕ್ಕಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
೨೫ ದಿನಕ್ಕೊಮ್ಮೆ ಸಿಗುತ್ತಿದ್ದ ಸಿಲಿಂಡರ್‌ಗೆ ಈಗ ೪೫ ದಿನ ಕಾಯಬೇಕು