ವಿಜೃಂಭಣೆಯಿಂದ ನಡೆದ ಶ್ರೀದೊಡ್ಡಮ್ಮತಾಯಿ ಹಬ್ಬ

KannadaprabhaNewsNetwork |  
Published : Mar 12, 2026, 12:45 AM IST
11ಕೆಎಂಎನ್ ಡಿ29 | Kannada Prabha

ಸಾರಾಂಶ

ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ಮಡಿವಾಳ ಮಾಚಿದೇವರ ಸಮುದಾಯದವರು ಬಾಯಿ ಬೀಗ ಧರಿಸಿ ಹರಕೆ ಹೊತ್ತ ಮಹಿಳೆಯರಿಗೆ (ಕಾಲ್ನಡಿಗೆಯಲ್ಲಿ ಬರುವ ಮಹಿಳೆಯರಿಗೆ) ನೆಲಕ್ಕೆ ಮಡಿ ಸೀರೆ ಹಾಸಿ ಸೇವೆ ನೆರವೇರಿಸಿಕೊಟ್ಟರು.

ಮಂಡ್ಯ:

ತಾಲೂಕು ಹೊಳಲು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮತಾಯಿ ಹಬ್ಬವು ಬಹಳ ವಿಜೃಂಭಣೆಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಗ್ರಾಮದ ಮಾರಮ್ಮನ ದೇವಸ್ಥಾನಗಳಾದ ಮುದ್ದಮ್ಮ ದೇವಿ, ಮಾರಮ್ಮ ದೇವಿ, ಶ್ರೀ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಮೊದಲು ಬಾಯಿ ಬೀಗ ಹಾಕಿಕೊಂಡು ತಮಟೆ ನಗಾರಿ ಯೊಂದಿಗೆ ಗ್ರಾಮದ ದೇವಾಲಯಗಳಿಗೆ ತಂಬಿಟ್ಟಿನ ಆರತಿ ಬೆಳಗಿಸಿ ನಂತರ ಗ್ರಾಮ ದೇವತೆಯಾದ

ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಎಲ್ಲಾ ಸಮುದಾಯದವರು ಒಟ್ಟಿಗೆ ಸೇರಿ ಬಾಯಿ ಬೀಗ ಧರಿಸಿ ಮಹಿಳೆಯರು ಹರಕೆ ತೀರಿಸಿದರು.

ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ಮಡಿವಾಳ ಮಾಚಿದೇವರ ಸಮುದಾಯದವರು ಬಾಯಿ ಬೀಗ ಧರಿಸಿ ಹರಕೆ ಹೊತ್ತ ಮಹಿಳೆಯರಿಗೆ (ಕಾಲ್ನಡಿಗೆಯಲ್ಲಿ ಬರುವ ಮಹಿಳೆಯರಿಗೆ) ನೆಲಕ್ಕೆ ಮಡಿ ಸೀರೆ ಹಾಸಿ ಸೇವೆ ನೆರವೇರಿಸಿಕೊಟ್ಟರು. ಹಬ್ಬದ ಪ್ರಯುಕ್ತ ವಿಶೇಷವಾಗಿ ಬಂದ ಭಕ್ತಾದಿಗಳಿಗೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಮಜ್ಜಿಗೆ ಪಾನಕವನ್ನು ವಿತರಿಸಲಾಯಿತು.

ಹಾರೋಹಳ್ಳಿಯಲ್ಲಿ ಮಾರಮ್ಮನ ಹಬ್ಬದ ಸಂಭ್ರಮ

ಪಾಂಡವಪುರ:ಪಟ್ಟಣದ ಹಾರೋಹಳ್ಳಿಯ ಶ್ರೀಮಾರಿಯಮ್ಮನ ದೇವಸ್ಥಾನದ ಆವರಣದಲ್ಲಿ ಮಾರಮ್ಮನ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಜೆ ತಂಬಿಟ್ಟು ಅರತಿ, ಮಡಿ ಹೊತ್ತ ಮಹಿಳೆಯರು ಮಡಿ ಮೇಲೆ ಗ್ರಾಮದ ಮಾರಮ್ಮ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಬಳಿಕ ಮಾರಮ್ಮ ದೇವಾಲಯದ ಬಳಿ ಸೇರಿ ಸಾಮೂಹಿಕ ಪೂಜೆ ಸಲ್ಲಿಸಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.ಹೆಣ್ಣು ಮಕ್ಕಳು ಮಡಿ ಬಟ್ಟೆಯ ಮೇಲೆ ತಂಬಿಟ್ಟಿನ ಆರತಿ ಇಟ್ಟು ಪೂಜಿಸಿದ ಬಳಿಕ, ಪುರುಷರು ಕುರಿ, ಕೋಳಿ, ಮಡಕೆಗಳನ್ನು ದೇವಸ್ಥಾನದ ಆವರಣದಲ್ಲಿ ಬಲಿ ನೀಡಿ ಗ್ರಾಮದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು. ಈ ವೇಳೆ ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು. ವಿ.ಸಿ.ಕಾಲನಿ, ಶಾಂತಿನಗರ ಮಹಾಂಕಾಳೇಶ್ವರಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧೆಡೆ ಮಾರಮ್ಮನ ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ನ್ಯಾಯದಡಿ ಒಳಮೀಸಲಾತಿ ದೊರೆಯಲಿ: ಬಸವಮೂರ್ತಿ ಶ್ರೀ
ಗುಂಡಾಪುರದ ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಸಂಪನ್ನ