ಸಿಬಿಎಸ್‌ಇ 10ನೇ ಕ್ಲಾಸ್‌: ಸಿದ್ಧಗಂಗಾ ಶಾಲೆಗೆ ಶೇ.99 ಫಲಿತಾಂಶ

KannadaprabhaNewsNetwork |  
Published : May 13, 2025, 11:51 PM IST
ಕ್ಯಾಪ್ಷನ13ಕೆಡಿವಿಜಿ32 ಎಸ್.ವಿ.ಕೃತಿಕಾ .......ಕ್ಯಾಪ್ಷನ13ಕೆಡಿವಿಜಿ33 ಕೆ.ಸಿ.ದರ್ಶನ್ .......ಕ್ಯಾಪ್ಷನ13ಕೆಡಿವಿಜಿ34 ಎಂ.ಎಂ.ನಿಖಿಲ್ .......ಕ್ಯಾಪ್ಷನ13ಕೆಡಿವಿಜಿ35 ಜಿ.ಕೆ.ಡಯಾನ .......ಕ್ಯಾಪ್ಷನ13ಕೆಡಿವಿಜಿ36 ಬಿ.ಕೆ.ಸುಮುಖ್ .......ಕ್ಯಾಪ್ಷನ13ಕೆಡಿವಿಜಿ37 ಎಂ.ಎಸ್.ಶೃತಿ ....... | Kannada Prabha

ಸಾರಾಂಶ

ಕಳೆದ ಫೆಬ್ರವರಿ ಮಾರ್ಚ್‌ನಲ್ಲಿ ನಡೆದ 10ನೇ ತರಗತಿ ಸಿಬಿಎಸ್‌ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದೆ. ನಗರದ ಸಿದ್ಧಗಂಗಾ ಶಾಲೆಯ ಎಸ್.ವಿ.ಕೃತಿಕಾ ಶೇ.96 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ ವೀರಭದ್ರಪ್ಪ ಮತ್ತು ಕೆ.ಸಿ.ರಶ್ಮಿ ದಂಪತಿ ಪುತ್ರಿ.

- ಶೇ.96 ಅಂಕ ಗಳಿಸಿದ ಎಸ್.ವಿ.ಕೃತಿಕಾ ಶಾಲೆಗೆ ಪ್ರಥಮ । ವಿದ್ಯಾರ್ಥಿಗಳಿಗೆ ಅಭಿನಂದನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ ಫೆಬ್ರವರಿ ಮಾರ್ಚ್‌ನಲ್ಲಿ ನಡೆದ 10ನೇ ತರಗತಿ ಸಿಬಿಎಸ್‌ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದೆ. ನಗರದ ಸಿದ್ಧಗಂಗಾ ಶಾಲೆಯ ಎಸ್.ವಿ.ಕೃತಿಕಾ ಶೇ.96 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ ವೀರಭದ್ರಪ್ಪ ಮತ್ತು ಕೆ.ಸಿ.ರಶ್ಮಿ ದಂಪತಿ ಪುತ್ರಿ.

ದರ್ಶನ್ ಕೆ.ಸಿ. 93.80%, ನಿಖಿಲ್.ಎಂ.ಎಂ. 93.80%, ಡಯಾನಾ ಜಿ.ಕೆ. 93.40%, ಸುಮುಖ್ ಬಿ.ಕೆ. 92.20%, ಸೃಷ್ಠಿ ಎಂ.ಎಸ್. 92%, ಪ್ರೀತಂ ಎಸ್.ಜಿ. ಸ್ವಾಮಿ 91.40%, ಸಿಂಚನಾ ವಿ.ಜಿ. 91.40%, ಸೌಕಾರ್ ಎಲ್.ಎಸ್. 90.80%, ದಾನೀಶ್ ಸಿ.ಟಿ. 90.60%, ರಾಹುಲ್ ಪಿ.ಐ. 90.40% ಪಡೆದಿದ್ದಾರೆ.

ಶೇ.95 ಕ್ಕಿಂತ ಹೆಚ್ಚು ಓರ್ವ ವಿದ್ಯಾರ್ಥಿನಿ, 90% ಕ್ಕಿಂತ ಹೆಚ್ಚು 11 ಮಕ್ಕಳು, 85% ಕ್ಕಿಂತ ಹೆಚ್ಚು 26 ಮಕ್ಕಳು, 60% ಕ್ಕಿಂತ ಹೆಚ್ಚು 12 ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್ ಎಂ. ಎಂ. ಮತ್ತು ಸಿಂಚನಾ ವಿ.ಜಿ. ಕನ್ನಡ ವಿಷಯದಲ್ಲಿ 100ಕ್ಕೆ 100 ಮತ್ತು ದರ್ಶನ್ ಕೆ.ಸಿ. ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲ ಮಕ್ಕಳನ್ನು ಮತ್ತು ಅವರ ಪಾಲಕರನ್ನು ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

ದಾಖಲೆಯ ಫಲಿತಾಂಶ ನೀಡಿದ ಸಿಬಿಎಸ್‌ಇ 10ನೇ ತರಗತಿಯ ಎಲ್ಲ ಮಕ್ಕಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಆಡಳಿತ ಮಂಡಳಿ ಮುಖ್ಯಸ್ಥೆ ಜಸ್ಟಿನ್ ಡಿ''''ಸೌಜ, ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ.ಜಯಂತ್ ಶ್ಲಾಘಿಸಿದ್ದಾರೆ.

- - -

-13ಕೆಡಿವಿಜಿ32: ಎಸ್.ವಿ.ಕೃತಿಕಾ

- - -

-13ಕೆಡಿವಿಜಿ33: ಕೆ.ಸಿ.ದರ್ಶನ್

- - -

-13ಕೆಡಿವಿಜಿ34: ಎಂ.ಎಂ.ನಿಖಿಲ್

- - -

-13ಕೆಡಿವಿಜಿ35: ಜಿ.ಕೆ.ಡಯಾನ - - -

-13ಕೆಡಿವಿಜಿ36: ಬಿ.ಕೆ.ಸುಮುಖ್

- - -

-13ಕೆಡಿವಿಜಿ37: ಎಂ.ಎಸ್.ಶೃತಿ

- - -

-13ಕೆಡಿವಿಜಿ38: ಪ್ರೀತಂ ಎಸ್.ಜಿ.ಸ್ವಾಮಿ

- - -

-13ಕೆಡಿವಿಜಿ39: ವಿ.ಜಿ.ಸಿಂಚನ

- - -

-13ಕೆಡಿವಿಜಿ40: ಎಲ್.ಎಸ್.ಸೌಕಾರ್

- - -

-13ಕೆಡಿವಿಜಿ41: ಸಿ.ಟಿ.ದಾನೀಶ್

- - -

-13ಕೆಡಿವಿಜಿ42: ಪಿ.ಐ.ರಾಹುಲ್

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ