ಕುಣಿಗಲ್: ಸಿದ್ದಲಿಂಗೇಶ್ವರ ಹಾಗೂ ಜನರ ಋಣ ತೀರಿಸಲು ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ತುಮಕೂರಿನ ಎಲ್ಲಾ ಮತದಾರರು ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಅವರ ಪ್ರೀತಿಗೆ ನಾನು ಚಿರಋಣಿ. ಈ ಕ್ಷೇತ್ರ ಮತ್ತು ಈ ಜನರ ಋಣವನ್ನು ತೀರಿಸಬೇಕಾಗಿರುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ಪೂಜೆ ನಂತರ ದಾಸೋಹ ಕೈಂಕರ್ಯ ಸೇವಾ ಸಮಿತಿಗೆ ತೆರಳಿದ ಕೇಂದ್ರ ಸಚಿವ ಸೋಮಣ್ಣ ಅಲ್ಲಿ ಪ್ರಸಾದ ಸ್ವೀಕರಿಸಿದರು. ಡಿ.ಕೃಷ್ಣಕುಮಾರ್, ಮಹೇಶ್, ನಿಟ್ಟೂರ್ ಪ್ರಕಾಶ್, ಕುಮಾರ್, ಮರಿಯಣ್ಣ ವೆಂಕಟೇಶ್, ಸಿದ್ದಲಿಂಗಣ್ಣ ಇದ್ದರು.ತಪೋ ಕ್ಷೇತ್ರ ಕಗ್ಗೆರೆ ಗೆ ರೈಲ್ವೆ ನಿಲ್ದಾಣ ಮಾಡುವೆ:
ಸಾರ್ವಜನಿಕರು ಎಡೆಯೂರಿನಲ್ಲಿ ರೈಲು ನಿಲುಗಡೆ ಹೆಚ್ಚಿಸುವಂತೆ ಮತ್ತು ಶ್ರೀ ಸಿದ್ದಲಿಂಗೇಶ್ವರರ ತಪೋ ಕ್ಷೇತ್ರ ಕಗ್ಗೆರೆಗೆ ರೈಲ್ವೆ ನಿಲ್ದಾಣ ಮಂಜೂರು ಮಾಡುವ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿದ್ದಲಿಂಗೇಶ್ವರರ ಋಣ ತೀರಿಸಲು ನನಗೊಂದು ಅವಕಾಶ ಸಿಕ್ಕಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.