ಸಿದ್ದೇಶ್ವರ ಸ್ವಾಮೀಜಿ ಶತಮಾನದ ಶ್ರೇಷ್ಠ ಸಂತ

KannadaprabhaNewsNetwork |  
Published : Sep 04, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

Siddeshwara Swamiji is the greatest saint of the century.

-ಸರಳತೆಯ ಮೇರು ವ್ಯಕ್ತಿತ್ವ

-ಪ್ರಾಚಾರ್ಯರಾದ ಡಾ.ಮಮತ ಬಣ್ಣನೆ । ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಈ ಶತಮಾನದ ಶ್ರೇಷ್ಠ ಸಂತ ಎಂದು ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಮಮತ ಎನ್ ಬಣ್ಣಿಸಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿದ್ದ ಅನುಭಾವ ಶ್ರಾವಣ, ಶರಣ ಚಿಂತನ ಮಾಲಿಕೆಯ 20 ನೇ ದಿನ ಕಾರ್ಯಕ್ರಮದಲ್ಲಿ ವಿಜಯಪುರದ ಸಿದ್ದೇಶ್ವರ ಶ್ರೀಗಳ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದ ಅವರು ಸರಳತೆಯ ಮೇರುವಾಗಿದ್ದ ಶ್ರೀಗಳದು ಅಪರೂಪದ ವ್ಯಕ್ತಿತ್ವ ಎಂದರು.

ಪ್ರಕೃತಿ ನಮಗೆ ಏನೆಲ್ಲಾ ಕೊಟ್ಟಿದೆ. ಅದನ್ನು ನಾವು ಸದ್ಬಳಕೆ ಮಾಡಿಕೊಂಡರೆ ಅದು ನಮಗೆ ವರ, ಇಲ್ಲದೇ ಹೋದರೆ ವಿಪತ್ತು ಖಂಡಿತ ಎಂಬಂತಹ ಪ್ರಕೃತಿ ಧರ್ಮವನ್ನು ಸಿದ್ದೇಶ್ವರ ಶ್ರೀ ಪಾಲಿಸಿದ್ದರು ಎಂದರು.

ಸಾಮಾನ್ಯ ಬಡರೈತ ಕುಟುಂಬದಲ್ಲಿ ಜನಿಸಿದ ಶ್ರೀಗಳು ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮದಲ್ಲಿ ಪೂರೈಸಿ ಮುಂದಿನ ಉನ್ನತ ವ್ಯಾಸಂಗವನ್ನು ಜತೆಗೆ ತತ್ವಶಾಸ್ತ್ರವನ್ನು ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಪಡೆಯುತ್ತಾರೆ. ಮುಂದೆ ಮಲ್ಲಿಕಾರ್ಜುನ ಶ್ರೀಗಳವರ ಪ್ರಭಾವಕ್ಕೆ ಒಳಗಾಗಿ ಅವರು ತಾವು ಹೋದ ಕಡೆಗೆ ಕರೆದುಕೊಂಡು ಹೋದ ಪರಿಣಾಮ ಪ್ರವಚನದ ನಂಟು ಹತ್ತಿಸಿಕೊಂಡರು.

ಬಹುಭಾಷಾ ಪ್ರವೀಣರಾಗಿದ್ದ ಶ್ರೀಗಳು ತಮ್ಮ ಪಾಂಡಿತ್ಯದ ಪ್ರಭಾವದಿಂದ ಸರಳತೆ ಮೈಗೂಡಿಸಿಕೊಂಡು ಸದಾ ಶ್ವೇತವಸ್ತ್ರಧಾರಿಯಾಗಿ ಜೇಬು ಇರದ ಅಂಗಿಯನ್ನು ತೊಟ್ಟು ನಿರಾಭಾರಿ ಜಂಗಮನಾಗಿ ಜನಪರ ಕಾಳಜಿ ಹೊಂದಿದ್ದರು. ಅವರ ಅತ್ಯದ್ಭುತ ಜ್ಞಾನಭಂಡಾರದಿಂದ ಮೆಲುಧ್ವನಿ ಮೃದು ಸ್ವಭಾವದ ಕಂಠಸಿರಿಯಿಂದ ಮಾತು ಮುತ್ತುಗಳಾಗಿ ಹೊರಹೊಮ್ಮುತ್ತಿದ್ದವು ಎಂದರು.

ಸಿದ್ದೇಶ್ವರ ಶ್ರೀಗಳ ಪ್ರವಚನ ಅಂದರೆ ಜನ ಸಾಗರದಂತೆ ಸೇರಿ ಆಲಿಸುತ್ತಿದ್ದರು. ಸಾಹಿತ್ಯ ಸೇವೆ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದು ಅವೆಲ್ಲ ಮೌಲಿಕವೇ ಆಗಿವೆ. ಶ್ರೀಗಳ ನಡೆ ನುಡಿ ಮತ್ತು ವಿದ್ವತ್ತಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದರೂ ನಾನು ಸರಳ ಜೀವನ ನಡೆಸುವವನು ಅವ್ಯಾವ ಪ್ರಶಸ್ತಿಗಳು ಬೇಡವೆಂದು ನಯವಾಗಿ ತಿರಸ್ಕರಿಸಿದ್ದರು.

82 ವರ್ಷಗಳ ತುಂಬು ಜೀವನ ನಡೆಸಿ 2023 ರ ಜನವರಿ 3 ರಂದು ಬಯಲಾದರು. ನನ್ನ ಅಂತ್ಯಕ್ರಿಯೆ ಸಮಾಧಿ ಮಾಡಿ, ಗದ್ದುಗೆ ನಿರ್ಮಿಸುವುದು ಬೇಡ ಎಂದು ತನ್ನ ದೇಹವನ್ನು ಅಗ್ನಿಸ್ಪರ್ಶ ಮಾಡಿರಿ ಎಂದು ಸೂಚಿಸಿ ಅದರಲ್ಲಿಯೂ ಸರಳತೆ ಮೆರೆದ ಸಂತ ಎಂದು ಡಾ ಮಮತ ಸ್ಮರಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಇಂದು ಕೇವಲ ಹಣಕ್ಕೆ ಬೆಲೆ ಇದೆ. ಆದರೆ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನಕ್ಕೂ ಬೆಲೆ ಇದೆ ಎನ್ನುವುದನ್ನು ತೋರಿಸಿಕೊಟ್ಟ ವಿರಳಲ್ಲಿ ಒಬ್ಬರು. ಭೌತಿಕವಾದದ್ದು ಅದೆಂದಿಗೂ ನಶ್ವರ, ಜ್ಞಾನವೊಂದೇ ಶಾಶ್ವತ ಎಂದು ನಂಬಿ ಅದರಂತೆ ನಡೆದುಕೊಂಡ ಸಂತಶ್ರೇಷ್ಠ ಎಂದು ಬಣ್ಣಿಸಿದರು.

ಜೆ.ಎನ್. ಕೋಟೆ ಬಸವಕೇಂದ್ರದ ಬಸವರಾಜಪ್ಪ, ಗಾಯತ್ರಿ ಶಿವರಾಂ, ನಾಗರಾಜ ಸಂಗಮ್, ಎಸ್.ವೀರೇಶ್ ಭಾಗವಹಿಸಿದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಸಿದ್ದೇಶ್ವರ ಶ್ರೀಗಳ ಕುರಿತಾದ ಗೀತೆಗಳನ್ನು ಹಾಡಿದರು. ದೇವಿಕ ಸ್ವಾಗತಿಸಿದರು.

------------

ಪೋಟೋ ಕ್ಯಾಪ್ಸನ್

ಶ್ರಾವಣ ಮಾಸದ ಅಂಗವಾಗಿ ಬಸವಕೇಂದ್ರ ಮುರುಘಾಮಠದಲ್ಲಿ ಆಯೋಜಿಸಿದ್ದ ಶರಣ ಚಿಂತನ ಮಾಲಿಕೆ 19 ನೇ ದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಮಮತ ಮಾತನಾಡಿದರು.

--------ಫೋಟೋ ಫೈಲ್ ನೇಮ್-3 ಸಿಟಿಡಿ3--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರಿಗೆ ಸಂವೇದನಾಶೀಲತೆ ಗುಣ ಅಗತ್ಯ
ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರ ತಾರಾಲಯದ ಆಸಕ್ತಿ ಅತ್ಯಗತ್ಯ