ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸ್ವರ್ಣಸಂದ್ರ ಬಡಾವಣೆಯ ಶ್ರೀಶಿವಕುಮಾರ ಮಹಾ ಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ಹುಣ್ಣಿಮೆಯ ಅಂಗವಾಗಿ ಶಾಸಕ ಪಿ.ರವಿಕುಮಾರ್ ಗಣಿಗ ಅವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ‘ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅನುಭವಮಂಟಪದ ಪ್ರಯೋಗ ಶಾಲೆಯಂತೆ ಶ್ರೀಸಿದ್ದಗಂಗಾಮಠ ಎಲ್ಲಾ ಜಾತಿ, ಧರ್ಮದ ಬಡ ಮಕ್ಕಳಿಗೆ ಅನ್ನ, ಅರಿವು, ಆಸರೆಯನ್ನು ನೀಡಿ ಕೋಟ್ಯಂತರ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾ ಬಂದಿದೆ. ಪ್ರತಿನಿತ್ಯ ೧೨ ಸಾವಿರ ಮಕ್ಕಳಿಗೆ ದಾಸೋಹ ಸೇವೆ ನಡೆಸುತ್ತಿರುವ ಶ್ರೀಗಳ ಸ್ಮರಣಾರ್ಥ ಮಂಡ್ಯದಲ್ಲಿ ಪ್ರತಿ ಹುಣ್ಣಿಮೆಯಲ್ಲೂ ಅನ್ನಸಂತರ್ಪಣೆ ಮಾಡುವ ಪುಣ್ಯದ ಕೆಲಸವನ್ನು ಕಾಯಕಯೋಗಿ ಫೌಂಡೇಶನ್ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಪರಮಪೂಜ್ಯರ ಹೆಸರು ಮಂಡ್ಯದ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಸದುದ್ದೇಶದಿಂದ ಪತ್ರಕರ್ತರಾದ ಶಿವಕುಮಾರ್ ಅವರು ನಗರಸಭೆ ಹಾಗೂ ಸರ್ಕಾರದ ಸಹಕಾರದೊಂದಿಗೆ ಹಸಿರಿನಿಂದ ಕಂಗೊಳಿಸುವ ಉದ್ಯಾನವನ್ನು ನಿರ್ಮಾಣ ಮಾಡಿ ಧ್ಯಾನ ಹಾಗೂ ಯೋಗಾಭ್ಯಾಸಕ್ಕಾಗಿ ಧ್ಯಾನಕೇಂದ್ರ ಸ್ಥಾಪಿಸಿರುವುದು ಜನಮೆಚ್ಚುಗೆಯ ಕೆಲಸವಾಗಿದೆ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಮಂಡ್ಯ ನಗರದ ಪ್ರವೇಶದ್ವಾರದಲ್ಲೇ ಇರುವ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ನೂರಾರು ಮಂದಿ ವಯೋವೃದ್ಧರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ಸಹಕಾರದೊಂದಿಗೆ ನಿರ್ಮಾಣ ಮಾಡಿರುವ ಧ್ಯಾನಕೇಂದ್ರವನ್ನು ಸದುಪಯೋಗ ಪಡಿಸಿಕೊಂಡು ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡುವ ಮೂಲಕ ಮನ:ಶಾಂತಿ ಪಡೆದುಕೊಳ್ಳಬೇಕೆಂದರು.ದಾಸೋಹಹುಣ್ಣಿಮೆಯ ದಾಸೋಹಿಗಳಾದ ಮುಡಾ ಮಾಜಿ ಸದಸ್ಯ ಸಿ.ದೇವಣ್ಣಪುರ ಅವರಿಗೆ ಸಿದ್ದಗಂಗಾಶ್ರಿ ಸೇವಾಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್ ‘ದಾಸೋಹಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಪದಾಕಾರಿಗಳಾದ ಎಚ್.ವಿ.ಶಿವರುದ್ರಪ್ಪ, ಮೆಣಸಗೆರೆ ಶಿವಲಿಂಗಯ್ಯ, ಜಿ.ಮಹಾಂತಪ್ಪ, ಅಮೃತಿ ಶಂಕರ್, ತೇಜಸ್, ಕೈಲಾಸಮೂರ್ತಿ, ಬಸವಣ್ಣ, ಉದ್ಯಮಿ ಸುರೇಶ್ ಕಿರಗಂದೂರು, ಜಗದೀಶ್, ರಾಮೇಗೌಡ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.