ಸಿದ್ಧಾರೂಢ ಸಮಕಾಲೀನ ಮಹಾತ್ಮರ ರಥಯಾತ್ರೆಗೆ ಚಾಲನೆ

KannadaprabhaNewsNetwork |  
Published : Nov 16, 2024, 12:30 AM IST
ಮೆರವಣಿಗೆ | Kannada Prabha

ಸಾರಾಂಶ

ಉತ್ಸವ ಮೂರ್ತಿಗಳು 6 ಟ್ರ್ಯಾಕ್ಟ​ರ್‌​ಗ​ಳಲ್ಲಿ ಶುಕ್ರವಾರದಿಂದ ಧಾರವಾಡ ಜಿಲ್ಲೆಯ 62 ಪ್ರಮುಖ ಗ್ರಾಮಗಳಲ್ಲಿ 24 ದಿನ ಸಂಚರಿಸಲಿವೆ.

ಹು​ಬ್ಬ​ಳ್ಳಿ:

ಇ​ಲ್ಲಿಯ ಸಿ​ದ್ಧಾ​ರೂಢ ಮ​ಠದ ಆ​ವ​ರ​ಣ​ದಲ್ಲಿ ಶ್ರೀಸಿ​ದ್ಧಾ​ರೂಢ ಸ್ವಾ​ಮೀಜಿ ಸೇ​ರಿ​ದಂತೆ ಅ​ವರ ಸ​ಮ​ಕಾ​ಲೀನ ಮ​ಹಾ​ತ್ಮರ ಆರು ಉ​ತ್ಸವ ಮೂ​ರ್ತಿ​ಗಳ ಹಾಗೂ ಅಂಬಾರಿ ಮಂಟ​ಪ​ಗಳ ಸಂಗಮ ರ​ಥ​ಯಾತ್ರೆಗೆ ಶು​ಕ್ರ​ವಾರ ಚಾ​ಲನೆ ನೀ​ಡ​ಲಾ​ಯಿ​ತು. 24 ದಿನ 62 ಗ್ರಾಮಗಳಲ್ಲಿ ಈ ರಥಯಾತ್ರೆ ಸಂಚರಿಸಲಿದೆ.

ಶ್ರೀಸಿ​ದ್ಧಾ​ರೂಢ ಅ​ವರ ಸ​ಮ​ಕಾ​ಲಿನ ಮ​ಹಾ​ತ್ಮ​ರಾದ ಗ​ರ​ಗದ ಮ​ಡಿ​ವಾ​ಳೇ​ಶ್ವರ ಸ್ವಾ​ಮೀಜಿ, ನ​ವ​ಲ​ಗುಂದ ನಾ​ಗ​ಲಿಂಗ ಸ್ವಾ​ಮೀಜಿ, ಉ​ಣ​ಕ​ಲ್‌ನ ಶ್ರೀ ಸಿ​ದ್ದ​ಪ್ಪ​ಜ್ಜ ಸ್ವಾ​ಮೀಜಿ, ಶಿ​ಶು​ನಾಳದ ಸಂತು ಶ​ರೀಫ ಶಿ​ವ​ಯೋಗಿ ಸ್ವಾ​ಮೀಜಿ, ಹು​ಬ್ಬಳ್ಳಿ ಗು​ರು​ನಾಥರೂಢ ಸ್ವಾ​ಮೀಜಿ ಹಾಗೂ ಶ್ರೀಸಿ​ದ್ಧಾ​ರೂಢ ಸ್ವಾ​ಮೀ​ಜಿ​ಗಳ ಅಂಬಾರಿ ಮಂಟ​ಪ​ಗಳನ್ನು ಅ​ಲಂಕಾ​ರಿ​ಸಿದ ಟ್ರ್ಯಾ​ಕ್ಟ​ರ್‌​ನಲ್ಲಿ ಮೆ​ರ​ವ​ಣಿಗೆ ನ​ಡೆ​ಸ​ಲಾ​ಯಿತು.

ಜಗದ್ಗುರು ಶ್ರೀಸಿದ್ಧಾರೂಢರ ಹಾಗೂ ಸಮಕಾ​ಲಿ​ನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್‌ ಕಮಿಟಿ ಸದಸ್ಯರು ಹಾಗೂ ಧಾರವಾಡ ಜಿಲ್ಲೆಯ 62 ಗ್ರಾಮಗಳ ಭಕ್ತರು ಸೇರಿ ಈ ಆರು ಜನ ಮಹಾತ್ಮರ ಉತ್ಸವ ಮೂರ್ತಿಗಳನ್ನು ಮಾಡಿಸಿದ್ದಾರೆ. ಈ ಮೂರ್ತಿಗಳು 6 ಟ್ರ್ಯಾಕ್ಟ​ರ್‌​ಗ​ಳಲ್ಲಿ ಶುಕ್ರವಾರದಿಂದ ಧಾರವಾಡ ಜಿಲ್ಲೆಯ 62 ಪ್ರಮುಖ ಗ್ರಾಮಗಳಲ್ಲಿ 24 ದಿನ ಸಂಚರಿಸಲಿವೆ.ಸಂಗಮ ರಥಯಾತ್ರೆಗೆ ಚಾಲನೆ ನೀಡಿದ ಬೀದರನ ಶ್ರೀಚಿದಂಬರಾಶ್ರಮ ಶ್ರೀಸಿದ್ಧಾರೂಢಮಠದ ಡಾ. ಶಿವಕುಮಾರ ಸ್ವಾಮೀಜಿ, ಜಗತ್ತು ಕಲುಷಿತಗೊಂಡರೆ ಪರಮಾತ್ಮ ಹೊಸರೂಪ ತಾಳಿ, ಕಲ್ಮಶ ಹೋಗಲಾಡಿಸುತ್ತಾನೆ. ಜಗತ್ತಿನ ಕಲ್ಯಾಣಕ್ಕಾಗಿ ಪರಮಾತ್ಮ ಮಹಾತ್ಮರ ರೂಪದಲ್ಲಿ ಬರುತ್ತಾನೆ. ದೇಶ-ವಿ​ದೇ​ಶ​ದಲ್ಲೂ ಸಿದ್ಧಾರೂಢ ಶ್ರೀ​ಗಳ ಭಕ್ತರು ಇದ್ದಾರೆ. ಸಿದ್ಧಾರೂಢರು ಭಕ್ತರನ್ನು ಉದ್ಧಾರ ಮಾಡುವ ಸ್ವಾಮೀಜಿ. ಭಕ್ತರು ದೇವರಲ್ಲಿ ವರ ಕೇಳುವ ಬದಲು, ಪರಮಾತ್ಮನಿಗೆ ಶರಣಾಗಬೇಕು. ಮನಸ್ಸಿನಲ್ಲಿಯೇ ಮಠ ಕಟ್ಟಬೇಕು ಎಂದರು.ಚಳಕಾಪುರದ ಶ್ರೀಶಿವಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಭಾವದಂತೆ ದೇವರು ಕಾಣುತ್ತಾನೆ. ಶ್ರೀಸಿದ್ಧಾರೂಢರು ಬೇಡಿದವರಿಗೆ ಅಗತ್ಯ ವರ ನೀಡುವ ಕಲ್ಪವೃಕ್ಷ. ​ಶ್ರೀಮಠದಲ್ಲಿ ಅನ್ನದಾಸೋಹದ ಜತೆಗೆ ಜ್ಞಾನ ದಾ​ಸೋಹ ನ​ಡೆ​ಯು​ತ್ತಿದೆ ಎಂದು ತಿ​ಳಿ​ಸಿ​ದರು.

ಸೇವಾ ಟ್ರಸ್ಟ್‌ ಕಮಿಟಿ ಸಂಸ್ಥಾಪಕ ಮನೋಜ ಗದಗಿನ, ಶ್ರೀ​ಮ​ಠದ ಟ್ರಸ್ಟ್‌ ಕ​ಮಿಟಿ ಅ​ಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಮಾಜಿ ಅಧ್ಯಕ್ಷ ಡಿ.ಡಿ. ಮಾಳಗಿ, ಬಿಜೆಪಿ ಮುಖಂಡ ರಂಗಾ ಬದ್ದಿ ಸೇ​ರಿ​ದಂತೆ ಇ​ತ​ರರು ಮಾ​ತ​ನಾ​ಡಿ​ದರು.

ಈ ವೇಳೆ ಇಂಚಲದ ಶ್ರೀಶಿವಾನಂದ ಭಾರತಿ ಸ್ವಾಮೀಜಿ, ಬದಾಮಿ ತಾಲೂಕು ಹೆಬ್ಬಳ್ಳಿಯ ಶ್ರೀಗುರು ಶಾಬುದ್ದೀನಶಾಯಿ ಅಜ್ಜನವರು, ಬಮ್ಮಿಗಟ್ಟಿಯ ಶ್ರೀದಯಾನಂದ ಸ್ವಾಮೀಜಿ, ತಾವರಗೇರಿಯ ಶ್ರೀನಿಗುರ್ಣಾನಂದ ಸ್ವಾಮೀಜಿ, ವರ್ಷಾ ಗದಗಿನ, ಅನಿ​ಲ​ಕು​ಮಾರ ಪಾಟೀಲ, ಡಾ. ಗೋವಿಂದ ಮಣ್ಣೂರ ಸೇ​ರಿ​ದಂತೆ ಇ​ತ​ರರು ಇ​ದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು