ಎಸ್‌ಐಆರ್; 1,52,389 ಗಣತಿ ನಮೂನೆಗಳ ಡಿಜಿಟೈಜೇಷನ್

KannadaprabhaNewsNetwork |  
Published : Jul 24, 2026, 01:45 AM IST
 ವಿಜಯಪುರ ನಗರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಕುರಿತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ಜರುಗಿತು. | Kannada Prabha

ಸಾರಾಂಶ

ವಿಜಯಪುರ ನಗರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಕುರಿತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಕುರಿತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ಜರುಗಿತು.

ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮಾತನಾಡಿ, ಇದುವರೆಗೆ 2,90,184 ಮತದಾರರ ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಅದರಲ್ಲಿ 1,52,389 ಗಣತಿ ನಮೂನೆಗಳು ಡಿಜಿಟೈಜೇಷನ್ ಮಾಡಲಾಗಿದೆ. ಆನಲೈನ್‌ನಲ್ಲಿ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳು 2,341, ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು 13,064, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 9,102, ಮರಣ ಹೊಂದಿರುವ ಮತದಾರರು 4,126, ಈಗಾಗಲೇ ನೋಂದಾಯಿಸಿಕೊಂಡ ಮತದಾರರು 3,694 ಮತ್ತು ಇತರೆ 176. ಬಿ.ಎಲ್.ಒ ಗಳಿಂದ ಪ್ರತಿದಿನ ಎ.ಎಸ್.ಡಿ.ಡಿ.ಒ ಪಟ್ಟಿ ಪರಿಶೀಲಿಸಿ ಮತದಾರರ ಗಣತಿ ನಮೂನೆ ವಿತರಿಸಲು ಲಭ್ಯವಾಗದೇ ಇರುವ ಮತದಾರರನ್ನು ಗೈರು ಹಾಜರಿಯೆಂದು ಪಟ್ಟಿ ಮಾಡಲಾಗಿದೆ ಎಂದರು.

ಎಲ್ಲ ರಾಜಕೀಯ ಪಕ್ಷಗಳ ಬಿ.ಎಲ್.ಎ-2 ರವರಿಗೆ ಎ.ಎಸ್.ಡಿ.ಡಿ.ಒ ಪಟ್ಟಿ, ಮತಗಟ್ಟೆವಾರು ಮಾಹಿತಿ ನೀಡಲಾಗುವುದು. ತಮ್ಮ ಪಕ್ಷದಿಂದ ನೇಮಕ ಮಾಡಲಾದ ಬಿ.ಎಲ್.ಎರವರಿಗೆ ಮತದಾರರು/ಮತದಾರರ ಮನೆಗಳು ಲಭ್ಯವಾದಲ್ಲಿ ಸಂಬಂದಪಟ್ಟ ಬಿ.ಎಲ್.ಒ ಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಈಗಾಗಲೇ ಮನೆಗೆ ತೆರಳಿ ಹಂಚಿಕೆ ಮಾಡಲಾದ ಗಣತಿ ನಮೂನೆಗಳನ್ನು ಬಿ.ಎಲ್.ಒ ಅವರು ಸಂಗ್ರಹಿಸಲು ತೆರಳಿದಾಗ ಕೆಲವು ಮತದಾರರು ಗಣತಿ ನಮೂನೆಗಳನ್ನು ಮರಳಿ ನೀಡುತ್ತಿಲ್ಲ. ಅಂತಹ ಮತದಾರರಿಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸರಿಯಾದ ತಿಳಿವಳಿಕೆ ನೀಡಿ, ಗಣತಿ ನಮೂನೆಗಳನ್ನು ಭರ್ತಿ ಮಾಡಿ ಮರಳಿಸಬೇಕು. ಗಣತಿ ನಮೂನೆಗಳನ್ನು ಮತದಾರರು ಮರಳಿಸದೇ ಇದ್ದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿಯ ಸಂದೀಪ ಪಾಟೀಲ, ಕಾಂಗ್ರೆಸ್ ನ ಶಕೀಲ ಬಾಗಮಾರೆ, ಇರ್ಫಾನ ಶೇಖ, ಚಾಂದಸಾಬ ಗಡಗಲಾವ, ಆಪ್ ಪಕ್ಷದ ಭೋಗೇಶ ಸೋಲಾಪುರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರುಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮಲ್ಲಿ ಧಮ್ ಇದ್ದರೆ ನನ್ನೊಂದಿಗೆ ನೇರವಾಗಿ ಹೋರಾಡಿ: ಮುಶ್ರೀಫ್‌
ದಕ ಮಾದರಿಯಲ್ಲಿ ಉಕ ದೇವಾಲಯಗಳ ಅಭಿವೃದ್ಧಿಪಡಿಸಿ