
ಗದಗ: ಸದ್ಯ ರಾಷ್ಟ್ರ ಮಟ್ಟದಲ್ಲಿ ಬಡತನ, ಭದ್ರತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಆದರೆ, ಎಸ್ಐಆರ್ ಕುರಿತು ಚರ್ಚೆ ಆಗುತ್ತಿದೆ ಎಂದು ಜಮಾತೆ ಇಸ್ಲಾಮೆ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸೂಫ್ ಕುನ್ನಿ ತಿಳಿಸಿದರು.
ನುಸುಳುಕೋರರನ್ನು ಹೊರದಬ್ಬುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ. ಈ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬಂದಿರುವ ವಿದೇಶಿಗರ ಪಟ್ಟಿಯನ್ನು ಕೇಂದ್ರ ನೀಡಬೇಕಿದೆ. ದೇಶದ 13 ರಾಜ್ಯಗಳಲ್ಲಿ ನಡೆದ ಎಸ್ಐಆರ್ನಲ್ಲಿ ಒಟ್ಟು 6 ಕೋಟಿಗೂ ಅಧಿಕ ಮತದಾರರನ್ನು ಪಟ್ಟಿಯಿಂದ ತಗೆದು ಹಾಕಲಾಗಿದೆ. ಆದರೆ, ಎಷ್ಟು ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ದೇಶದ ಜನರ ಮುಂದೆ ಹೇಳಬೇಕು ಎಂದರು.
ಯುವ ಮುಖಂಡ ಸರೋವರ ಬೆಂಕಿಕೇರಿ ಮಾತನಾಡಿದರು. ಹೀಸಾಬೆಲ್ಲಾ, ಬಿಲಾಲ್ ಗೋಕಾವಿ, ಜುನೈದ್ ಉಮಚಗಿ, ಆರಾಧನಾ ಬಣಕಾರ, ಆರೀಫ್ ಉಲ್ಲಾ, ಮುತ್ತು ಬಿಳೆಯಲಿ, ಅನ್ವರ್ ಬಾಗೆವಾಡಿ ಹಲವರು ಉಪಸ್ಥಿತರಿದ್ದರು.ಅಪರಿಚಿತ ವ್ಯಕ್ತಿ ಶವ ಪತ್ತೆಗದಗ: ಜೂ.16ರಂದು ಮುನಿರಾಬಾದ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಪುರುಷನ ಸುಮಾರು 40- 45 ವರ್ಷದ ಯಾವುದೋ ಕಾಯಿಲೆಯಿಂದ ಬಳಲಿ ಸ್ವಾಭಾವಿಕವಾಗಿ ಮೃತಪಟ್ಟ ಶವ ಪತ್ತೆಯಾಗಿದೆ.ಈ ಕುರಿತು ಗದಗ ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಮೃತನು ಕೋಲು ಮುಖ, ಅಗಲವಾದ ಹಣೆ ಮತ್ತು ಉದ್ದನೆಯ ಮೂಗು, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.5 ಅಡಿ ಎತ್ತರ, ತಲೆಯಲ್ಲಿ ಸುಮಾರು 3- 4 ಇಂಚು ಕಪ್ಪು ಮತ್ತು ಬಿಳಿ ಕೂದಲು, ಸುಮಾರು 1/2 ಇಂಚು ಕಪ್ಪು ದಾಡಿ ಮತ್ತು ಮೀಸೆ ಬಿಟ್ಟಿರುತ್ತಾನೆ.ಮೃತನ ಮೈಮೇಲೆ ಒಂದು ಬಿಳಿ, ನೀಲಿ, ಕೆಂಪು ಮಿಶ್ರಿತ ಚೆಕ್ಸ್ ಪುಲ್ ಶರ್ಟ್, ಒಂದು ಕಪ್ಪು ಕಲರಿನ ನೈಟ್ ಪ್ಯಾಂಟ್, ಒಂದು ನೀಲಿ ಮತ್ತು ಕೆಂಪು ಗೆರೆಯುಳ್ಳ ಅಂಡರವೇರ್ ಧರಿಸಿದ್ದಾನೆ. ಬಲಗೈಯಲ್ಲಿ ಒಂದು ಸ್ಟೀಲಿನ ಕೈಗಡಗ ಹಾಕಿದ್ದಾನೆ.