ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ಮಂಜೂರು: ಶಾಸಕ ನೇಮರಾಜ ನಾಯ್ಕ

KannadaprabhaNewsNetwork |  
Published : Jan 17, 2026, 03:45 AM IST
ಕೊಟ್ಟೂರು ತಾಲೂಕು ಸರ್ಕಾರಿ ನೌಕರರ ಸಂಘದವರು ಹೊರ ತಂದ 2026 ರ ಕ್ಯಾಲೆಂಡರ್ ಮತ್ತು ಡೈರಿಯನ್ನು ಶಾಸಕ ಕೆ ನೇಮರಾಜ ನಾಯಕ್ ಬಿಡುಗಡೆಗೊಳಿಸಿದರು | Kannada Prabha

ಸಾರಾಂಶ

ಸರ್ಕಾರಿ ನೌಕರರು ಸದಾ ಕ್ರಿಯಶೀಲರಾಗಿ ಕಾರ್ಯ ಮಾಡುತ್ತಿರುವುದರ ಜೊತೆಗೆ ಉತ್ತಮ ಸಂಘಟನೆಯನ್ನು ರಾಜ್ಯಧ್ಯಕ್ಷರ ಸಲಯೇ ಸೂಚನೆ ಯೊಂದಿಗೆ ಸಂಘವನ್ನು ಮುನ್ನಡೆಸಿಕೊಂಡು ತಾಲೂಕು ಸಂಘದವರು ಮುಂದೆ ಸಾಗಿರುವುದು ಗಮನಾರ್ಹ ಸಂಗತಿ.

ಕೊಟ್ಟೂರು: ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಸಂಘಕ್ಕೆ ಕಟ್ಟಡ ನಿರ್ಮಿಸಲು ಅನುವಾಗುವಂತೆ ನಿವೇಶನವನ್ನು ದೊರಕಿಸಿಕೊಡುವುದರ ಜೊತೆಗೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಧನಸಹಾಯವನ್ನು ಬಿಡುಗಡೆ ಮಾಡಲು ಮುಂದಾಗುವೆ ಎಂದು ಶಾಸಕ ಕೆ.ನೇಮರಾಜ ನಾಯ್ಕ್ ಹೇಳಿದರು.ತಾಲೂಕು ಸರ್ಕಾರಿ ನೌಕರರ ಸಂಘದವರು ಮುದ್ರಿಸಿರುವ 2026ನೇ ವರ್ಷದ ದಿನದರ್ಶಿಕೆ ತಾಲೂಕು ಶಾಖೆಯ ಡೈರಿ ಮತ್ತು ಪಾಕೇಟ್ ಕ್ಯಾಲೆಂಡರ್ ಮತ್ತಿತರಗಳನ್ನು ಇಲ್ಲಿನ ಪಶು ಆಸ್ಪತ್ರೆಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಸದಾ ಕ್ರಿಯಶೀಲರಾಗಿ ಕಾರ್ಯ ಮಾಡುತ್ತಿರುವುದರ ಜೊತೆಗೆ ಉತ್ತಮ ಸಂಘಟನೆಯನ್ನು ರಾಜ್ಯಧ್ಯಕ್ಷರ ಸಲಯೇ ಸೂಚನೆ ಯೊಂದಿಗೆ ಸಂಘವನ್ನು ಮುನ್ನಡೆಸಿಕೊಂಡು ತಾಲೂಕು ಸಂಘದವರು ಮುಂದೆ ಸಾಗಿರುವುದು ಗಮನಾರ್ಹ ಸಂಗತಿ. ಬಿಡುವಿಲ್ಲದ ಕೆಲಸದ ಮಧ್ಯೆ ಸರ್ಕಾರಿ ನೌಕರರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮಗಳ ಬೆನ್ನಿಗೆ ಸದಾ ನಿಲ್ಲುವೆ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೇಶ್ವರ ದೀನ್ನೆ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ನೌಕರರ ಪ್ರತಿ ಮನೆಯಲ್ಲಿ ತಮ್ಮದೇ ಸಂಘಟನೆಯ ಕ್ಯಾಲೆಂಡರ್ ಮತ್ತು ಡೈರಿಯನ್ನು ಹಾಕುವ ಮೂಲಕ ದೈನಂದಿನ ಕೆಲಸದಲ್ಲಿ ಸದಾ ಜಾಗೃತರಾಗಿ ಸರ್ಕಾರಿ ಸೇವೆಯನ್ನು ಒದಗಿಸಿ ಕೊಡಲು ಮುಂದಾಗಬೇಕಿದೆ ಎಂದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್, ಡಾ.ಚಂದ್ರನಾಯಕ್, ಡಾ.ಕೊಟ್ರೇಶ್, ವೀರೇಶ್ ತುಪ್ಪದ, ಸಿಎಚ್ ಎಂ ಗಂಗಾಧರ್, ಹೇಮಚಂದ್ರ ಕೆ, ರಮೇಶ್ ಕೆ, ಮಂಜುನಾಥ ಬಿ.ಟಿ., ಮೀನಾಕ್ಷಿ ವಿ. ಇದ್ದರು.

ರಾಜ್ಯ ಪರಿಷತ್ ಸದಸ್ಯ ಸಿ.ಮ. ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು. ಎ.ವಿ. ಗುರುಬಸವರಾಜ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ