- ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಲ್.ಜಿ.ಮಧುಕುಮಾರ್ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಲಿಂ.ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಪುಷ್ಪ ನಮನ ಸಲ್ಲಿಸಿ, ದೀನ-ದಲಿತರ ಬಗ್ಗೆ ಶ್ರೀಗಳು ಅನುಕಂಪ ಹೊಂದಿದ್ದರು. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಚಿಂತಕರಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮಾನ ಶಿಕ್ಷಣ ಸಹ ಪಂಕ್ತಿ ಭೋಜನದ ವ್ಯವಸ್ಥೆ ಮಾಡಿದ್ದರು. ವಿದ್ಯಾಸಂಸ್ಥೆ ಸ್ಥಾಪಿಸಿ, ಕುಗ್ರಾಮಗಳಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಿದರು. ಆ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರೀಗಳು ಶ್ರಮಿಸಿದ್ದರು ಎಂದರು.
ಸಿರಿಗೆರೆಯ ಮಠದ ಪ್ರಗತಿಗಾಗಿ ತಮ್ಮ ಕಾಯಕ ನಿಷ್ಠೆ, ದೂರದರ್ಶಿತ್ವ ಸಂಘಟನಾ ಶಕ್ತಿ, ನೇರ ನಿಷ್ಟೂರ ನುಡಿ ಹಾಗೂ ದಿಟ್ಟ ಹೆಜ್ಜೆಗಳಿಂದ ದುಡಿಯುವ ಮಠವನ್ನಾಗಿ ಮಾಡಿದವರು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಪದ್ಮಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ಬಿ.ಜಿ. ನಾಗರಾಜ್, ಎಂ.ಜಿ. ಜಯದೇವಪ್ಪ, ಜಿ.ಬಿ. ಜಗನ್ನಾಥ್, ಶಿವಮೂರ್ತಿ, ಉಪನ್ಯಾಸಕರಾದ ರಮೇಶ್, ಸವಿತಾ, ಮುಖ್ಯಶಿಕ್ಷಕ ಎಂ.ಶ್ರೀಧರ ರಾವ್ ಉಪಸ್ಥಿತರಿದ್ದರು.