ಕನ್ನಡಪ್ರಭ ವಾರ್ತೆ ಮೈಸೂರು
ರಂಗಾಯಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ವಿಶ್ವ ರಂಗ ಸಂಭ್ರಮ-2025 ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಿಜಿಕೆ ದೃಷ್ಟಿಯಲ್ಲಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಳ ಸಮುದಾಯಗಳ ನಿರೂಪಣೆ ಕುರಿತು ಅವರು ಮಾತನಾಡಿದರು.
ರಂಗಭೂಮಿಗೆ ತನ್ನದೆ ಆದ ವಿಶೇಷತೆ ಇದೆ. ಸಿನಿಮಾ, ದೂರದರ್ಶನಕ್ಕೆ ಹೋಲಿಸಿದರೆ ರಂಗಭೂಮಿ ಭಿನ್ನವಾಗಿಯೇ ನಿಲ್ಲುತ್ತದೆ. ಸಿನಿಮಾದಲ್ಲಿ ವೈಭವೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ನಾಟಕದಲ್ಲಿ ಆ ರೀತಿ ಇರುವುದಿಲ್ಲ. ಅದು ಮನುಷ್ಯನ ಬದುಕು ಹೇಗಿರುತ್ತದೆಯೋ ಹಾಗೆಯೇ ತೋರಿಸುತ್ತದೆ ಎಂದರು.ನಮ್ಮ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆ ಬೇಕಾದರೆ ಹಿಂದಿನ ಹೆಜ್ಜೆಯನ್ನು ಕಡೆಗಣಿಸಬಾರದು. ನಾವು ಎಂದಿಗೂ ನಡೆದು ಬಂದ ಹಾದಿಯನ್ನು ಮರೆಯಬಾರದು. ಈ ಚಿಂತನೆ ಎಲ್ಲಾ ಕ್ಷೇತ್ರದ, ಎಲ್ಲಾ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಹಿರಿಯ ರಂಗಕರ್ಮಿಗಳಾದ ಪಾಷಾ, ಗುರುಸ್ವಾಮಿ, ಪರಮೇಶ್ವರ ಮೊದಲಾದವರು ಇದ್ದರು.
ಮಾ. 27ರಂದು ಸ್ವಾಮಿ ಜ್ಞಾನಯೋಗಾನಂದ ಅವರು ಶ್ರೀಮದ್ಭಗವದ್ಗೀತಾ ವಿಷಯ ಕುರಿತು, ಮಾ. 29ರಂದು ಸ್ವಾಮಿ ಇಷ್ಟನಾಥಾನಂದ ಅವರು ಆತ್ಮಬೋಧ ವಿಷಯ ಕುರಿತು ಇಂಗ್ಲಿಷ್ನಲ್ಲಿ ಮಾ. 30ರಂದು ಸ್ವಾಮಿ ಜ್ಞಾನಯೋಗಾನಂದ ಅವರು ಶ್ರೀರಾಮಕೃಷ್ಣ ವಚನವೇದ ವಿಷಯ ಕುರಿತು ಉಪನ್ಯಾಸ ನೀಡುವರು.