ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವವರ ಹೆಸರುಗಳಿವೆ. ಒಬ್ಬರ ಹೆಸರು ಎರಡು ಅಥವಾ ಹೆಚ್ಚಿನ ಕಡೆ ಮತದಾರರ ಪಟ್ಟಿಯಲ್ಲಿದೆ ಎಂಬ ದೂರುಗಳು ಸಾಮನ್ಯವಾಗಿ ಕೇಳಿಬರುತ್ತದೆ. ಅನರ್ಹ ಮತದಾರರ ಹೆಸರನ್ನು ಕೈಬಿಡಲು ವಿಶೇಷ ಸಮಗ್ರ ಪರಿಷ್ಕರಣೆ ಸಹಕಾರಿಯಾಗಲಿದೆ ಎಂದರು.ಈಗಾಗಲೇ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ಬಿಎಲ್ಒಗಳನ್ನು ನೇಮಿಸಲಾಗಿದೆ, ಮತದಾರರ ವಿವರ ಒಳಗೊಂಡ ನಮೂನೆಯನ್ನು ಚುನಾವಣಾ ಆಯೋಗದಿಂದ ನೀಡಲಾಗುವುದು, ಬಿ.ಎಲ್.ಒ ಗಳು ನಮೂನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, 1823 ಮತಗಟ್ಟೆಗಳಿವೆ. 15,62,916 ಮತದಾರರಿದ್ದಾರೆ. ವಿಶೇಷ ಸಮಗ್ರ ಪರಿಷ್ಕರಣೆಗಾಗಿ ವಿಧಾನಸಭಾ ಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮೀಕ್ಷೆ ಸುಗಮವಾಗಿ ನಡೆಸಲು ಬಿಎಲ್ ಓ ಶಿಬಿರಗಳನ್ನು 51 ಕಡೆ ಮಾಡಲಾಗುವುದು ಹಾಗೂ 272 ವೋಟರ್ ಫ್ಯಾಸಿಲಿಟೇಷನ್ (Facilitation ) ಕ್ಯಾಂಪ್ ಅನ್ನು ಮಾಡಲಾಗುವುದು ಎಂದರು.
1200 ಜನರಿಗಿಂತ ಹೆಚ್ಚು ಇರುವ ಮತಗಟ್ಟೆಗಳನ್ನು ವಿಭಾಗಿಸಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆ ಮಾಡಲಾಗುವುದು, ಜಿಲ್ಲೆಯಲ್ಲಿ 100 ನೂತನ ಮತಗಟ್ಟೆಗಳನ್ನು ಸ್ಥಾಪನೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ವಿವಿಧ ಪಕ್ಷಗಳ ಮುಖಂಡರು ಪ್ರತಿ ಮತಗಟ್ಟೆಗೂ ಒಬ್ಬೊಬ್ಬ ಬಿಎಲ್ ಒ ನೇಮಕ ಮಾಡಿ, ಯಾವ ರೀತಿ ಹೊಸ ಮತದಾರರನ್ನು ಪಟ್ಟಿಗೆ ಹೆಸರು ಸೇರಿಸಬೇಕು ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬುದರ ಬಗ್ಗೆ ತರಬೇತಿ ನೀಡಬೇಕು ಎಂದರು.
ಸಭೆಯಲ್ಲಿ ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ಜೆಡಿ ಎಸ್ ಪಕ್ಷದ ಮುಖಂಡ ನವೀನ್, ಜಿಲ್ಲಾ ಬಿಜೆಪಿ ಮುಖಂಡ ಎಂ.ಡಿ. ರಮೇಶ್, ಜಿಲ್ಲಾ ಬಿಎಸ್ಪಿ ಮುಖಂಡ ಶಿವಶಂಕರ್ ಹಾಗೂ ದಿನೇಶ್, ಜಿಲ್ಲಾ ಎಎಪಿಯ ಮುಖಂಡ ದಿನೇಶ್, ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.