ಭಾರತದ ಶಕ್ತಿಯುತ ಮತ್ತು ದೀರ್ಘಾವಧಿ ಸಂಘಟನೆ ದಸಂಸ

KannadaprabhaNewsNetwork |  
Published : Sep 17, 2026, 01:15 AM IST
2 | Kannada Prabha

ಸಾರಾಂಶ

1970- 80ರ ದಶಕದಲ್ಲಿ ಕ್ರಿಯಾಶೀಲ ಮನಸ್ಸುಗಳು ಕಟ್ಟಿದ ದಲಿತ ಸಂಘರ್ಷ ಸಮಿತಿ ಯುಗದ ಉತ್ಸಾಹ.

ಕನ್ನಡಪ್ರಭ ವಾರ್ತೆ ಮೈಸೂರುಭಾರತದಲ್ಲಿ ನಡೆದ ಶಕ್ತಿಯುತ ಮತ್ತು ದೀರ್ಘಾವಧಿ ಚಳವಳಿ ಸಂಘಟಿಸಿದ್ದು ದಸಂಸ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.ಒಡಲು ಟ್ರಸ್ಟ್ ಮತ್ತು ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಐಕ್ಯತೆಯ ಚೇತನ: ಪ್ರೊ.ಬಿ. ಕೃಷ್ಣಪ್ಪ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.1970- 80ರ ದಶಕದಲ್ಲಿ ಕ್ರಿಯಾಶೀಲ ಮನಸ್ಸುಗಳು ಕಟ್ಟಿದ ದಲಿತ ಸಂಘರ್ಷ ಸಮಿತಿ ಯುಗದ ಉತ್ಸಾಹ. ಸಮಾಜ ವಿಜ್ಞಾನಿ ಪ್ರೊ.ಬಿ. ಕೃಷ್ಣಪ್ಪ ಜಾತಿ ದೌರ್ಜನ್ಯದ ಬರ್ಬರತೆಯನ್ನು ಸ್ವ ಅನುಭವಿಸುತ್ತ ದಿಕ್ಕು ತೋರಿದ ನಾಯಕ ಎಂದು ಅವರು ಬಣ್ಣಿಸಿದರು.ಭಾರತದಲ್ಲಿ ನಡೆದ ಶಕ್ತಿಯುತ ಮತ್ತು ದೀರ್ಘಾವಧಿ ಚಳವಳಿ ಸಂಘಟಿಸಿದ್ದು ದಸಂಸ ಮತ್ತು 1980ರ ದಶಕದಲ್ಲಿ ಸರ್ಕಾರ ಹೆದರುತ್ತಿದ್ದು ವಿರೋಧ ಪಕ್ಷಕ್ಕಲ್ಲ. ದಸಂಸಗೆ ಎಂದು ಅಂಬೇಡ್ಕರ್‌ ವಾದಿ ವಿದ್ವಾಂಸರಿಬ್ಬರು ಅಭಿಪ್ರಾಯಪಟ್ಟಿದ್ದಾರೆ. ದಸಂಸದ ಆ ಶಕ್ತಿಯನ್ನು ಇಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದು ಅವರು ಹೇಳಿದರು.ಲೇಖಕಿ ಇಂದಿರಾ ಕೃಷ್ಣಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ತನ್ನ 50 ವರ್ಷಗಳ ಹೋರಾಟವೂ ನಿಂತ ನೀರಾಗಿದ್ದ ಭಾರತದ ಜನಸಂಸ್ಕೃತಿಗೆ ಹೊಸ ಆಯಾಮ ಕೊಟ್ಟಿತು. ಹಿಂದೂ ರಾಷ್ಟçದ ಹೆಸರಿನಲ್ಲಿ ಜಾತೀಯತೆ, ತಾರತಮ್ಯವನ್ನು ಬಲಪಡಿಸುವ ದುಷ್ಟ ಆಲೋಚನೆಯಿಂದ ಭಾರತವನ್ನು ಉಳಿಸಬೇಕು ಎಂದು ತಿಳಿಸಿದರು.

ಒಡಲು ಟ್ರಸ್ಟ್ ಅಧ್ಯಕ್ಷ ಪ್ರೊ. ಕುಮಾರಸ್ವಾಮಿ ಕೂಡ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್. ಶಿವಲಿಂಗಯ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್‌. ಜನಾರ್ದನ್ ಮತ್ತು ದೇವಾನಂದ ವರಪ್ರಸಾದ್ ತಂಡದವರು ಹೋರಾಟದ ಹಾಡುಗಳನ್ನು ಹಾಡಿದರು.ಪ್ರೊ.ಬಿ. ಕೃಷ್ಣಪ್ಪರ ಚಿಂತನೆ ಮತ್ತು ಹೋರಾಟಗಗಳಲ್ಲಿ ಐಕ್ಯತೆಯ ಆಯಾಮ ಕುರಿತು ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಕೃಷ್ಣಪ್ಪರ ಒಡನಾಟದ ನೆನಪುಗಳು ಮತ್ತು ವರ್ತಮಾನಕ್ಕೆ ಬೇಕಾದ ಚೈತನ್ಯ ಕುರಿತು ಗುರುಪ್ರಸಾದ್ ಕೆರಗೋಡು, ವಿ. ನಾಗರಾಜು, ಪ್ರೊ. ಹುಲ್ಕೆರೆ ಮಹದೇವ, ಪ್ರೊ.ಎಚ್.ಎಂ. ರುದ್ರಸಾಮಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಇಒ ಕಚೇರಿ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತಕ್ಕೆ ಲಿಖಿತ ದೂರು
ಆಸ್ಪತ್ರೆ, ಕಾಲೇಜು ಜಾಗದ ಖರಾಬು ಭೂಮಿ ಮಾಯ..!