ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಶಾಲಾ ಪ್ರಾಂಶುಪಾಲ ಕುಮಾರ್ ಜೋಗಾರ್ ಕ್ರೀಡಾಜ್ಯೋತಿ ಸ್ವೀಕರಿಸಿ, ವಿದಾರ್ಥಿ ದೆಸೆಯಲ್ಲಿ ಕ್ರೀಡೆಗಳಲ್ಲಿ ಆಸಕ್ತಿಯಿರಬೇಕು. ಇಂದಿನ ವಿದ್ಯಾರ್ಥಿಗಳು ಮೊಬೈಲ್, ಟಿ.ವಿ.ಯ ವೀಕ್ಷಣೆಯಲ್ಲೇ ಅತ್ಯಾಸಕ್ತರಾಗುತ್ತಿದ್ದಾಋೆ. ದೈಹಿಕ ಶ್ರಮದ ಮಹತ್ವ ಮರೆತಿದ್ದಾರೆ. ಸಕ್ಕರೆ ಕಾಯಿಲೆ, ಒತ್ತಡ, ದುಶ್ಚಟ ಮತ್ತು ಹೃದಯಾಘಾತದಂಥ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ದೈಹಿಕ ಅಧಿಕಾರಿ ವಿಜಯ್ಕುಮಾರ್ ಕ್ರೀಡಾಪಟು ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಸ್ಯಾಟ್ಸ್ ಸಂಖ್ಯೆಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡುವುದರಿಂದ ಉದ್ದೇಶಪೂರ್ವಕ ತಪ್ಪು ನಡೆಯಲ್ಲ ಎಂಬ ನಿಯಮಗಳನ್ನು ವಿವರಿಸಿದರು.ಭಾನುವಳ್ಳಿ ವಿನಾಯಕ ವಿದ್ಯಾದಾನ ಸಂಸ್ಥೆ ಅಧ್ಯಕ್ಷ ರಾಮಪ್ಪ ಜೋಗಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಅಣ್ಣಪ್ಪ, ಸಂಸ್ಥೆಯ ಪ್ರಭಾವತಿ, ಮಂಜುನಾಥ್ ಜೆ., ಚಂದ್ರಶೇಖರ್, ಬೋಧಕರಾದ ಎ.ಕೆ. ಮಂಜಪ್ಪ, ಕುಬೇರಪ್ಪ, ರೇಖಾ, ಸಾವಿತ್ರ. ಪಾಲಾಕ್ಷಪ್ಪ, ದೈಹಿಕ ಶಿಕ್ಷಕರಾದ ಹಾಲಪ್ಪ, ನಿರಂಜನ್, ಸೀತವ್ವ, ಪ್ಯಾಟಿ, ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್ ಹಾಗೂ ಹೊಳೆಸಿರಿಗೆರೆ, ಕೊಕ್ಕನೂರು, ಭಾನುವಳ್ಳಿ ವಲಯದ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - --ಚಿತ್ರ೧.ಜೆಪಿಜಿ: ಕ್ರೀಡಾಕೂಟದಲ್ಲಿ ಪ್ರಾಂಶುಪಾಲ ಕುಮಾರ್ ಜೋಗಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು.