ಆರೋಗ್ಯವಂತರಾಗಿರಲು ಕ್ರೀಡಾ ಮನೋಭಾವ ಮುಖ್ಯ-ಸೋಮಣ್ಣ ಬೇವಿನಮರದ

KannadaprabhaNewsNetwork |  
Published : Sep 20, 2024, 01:42 AM IST
ಪೊಟೋ ಪೈಲ್ ನೇಮ್ ೧೮ಎಸ್‌ಜಿವಿ೨  ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಕ್ರೀಡಾಕೂಟ ಗಂಗೇಬಾವಿ ೧೦ ನೇ ಕೆ.ಎಸ್.ಆರ್.ಪಿ ಪೊಲೀಸ್ ಫರೇಡ್ ಮೈಧಾನದಲ್ಲಿ ಜರುಗಿದ ಕ್ರೀಡಾ ಜ್ಯೋತಿಯನ್ನು ಕೆ.ಎಸ್.ಆರ್.ಪಿ ಸಹಾಯಕ ಕಮಾಂಡೆಂಟ್ ದಾವಲ್‌ಸಾಬ ಯಲಿಗಾರ ಬೆಳಗಿಸಿದರು.     ಪೊಟೋ ಪೈಲ್ ನೇಮ್ ೧೮ಎಸ್‌ಜಿವಿ೨-೧  ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಕ್ರೀಡಾಕೂಟ ಗಂಗೇಬಾವಿ ೧೦ ನೇ ಕೆ.ಎಸ್.ಆರ್.ಪಿ ಪೊಲೀಸ್ ಫರೇಡ್ ಮೈಧಾನದಲ್ಲಿ   ಕ್ರೀಡಾಪಟುಗಳು ಗೌರವವಂದನೆಯನ್ನು ಸಲ್ಲಿಸುತ್ತಿರುವದು.     | Kannada Prabha

ಸಾರಾಂಶ

ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಇರಲು ಕ್ರೀಡಾ ಮನೋಭಾವನೆಯೂ ಮುಖ್ಯವಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಶಿಗ್ಗಾಂವಿ: ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಇರಲು ಕ್ರೀಡಾ ಮನೋಭಾವನೆಯೂ ಮುಖ್ಯವಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಗಂಗೇಬಾವಿ ೧೦ನೇ ಕೆಎಸ್‌ಆರ್‌ಪಿ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸೋಲು ಗೆಲುವಿನ ಮೂಲ, ಸೋಲನ್ನು ಸಂತೋಷದಿಂದ ಸ್ವೀಕರಿಸಬೇಕು ಎಂದರು.

ಪುರಸಭೆಯ ಅಧ್ಯಕ್ಷ ಸಿದ್ಧಾರ್ಥ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ, ಕ್ರೀಡಾಧ್ವಜಾರೋಣ ನೆರವೇರಿಸಿದರು. ಸಹಾಯಕ ಕಮಾಂಡರ್ ದಾವಲಸಾಬ್ ಯಲಿಗಾರ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಮ್ಮೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಬಾರಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರತಾಪ ನಾಯಕ, ಬಿಸಿಯೂಟ ಯೋಜನಾಧಿಕಾರಿ ಮಂಜುನಾಥ ಸಾಳುಂಕೆ, ಅರುಣ ಹುಡೆದಾಗೌದ್ರ, ಎಫ್.ಸಿ. ಕಾಳಪಾಗೌಡ್ರ, ಬಿ.ವೈ. ಉಪ್ಪಾರ, ಬಿ. ಶ್ರೀನಿವಾಸ, ಡಿ.ಎ. ಹಿರೇಮಠ, ಗುರುರಾಜ ಹುಚ್ಚಣ್ಣವರ, ಡಿ.ಪಿ. ಕರೂರ ಹಾಗೂ ಹಲವಾರು ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ