)
ಮಂಗಳೂರು: ನಗರದ ಕೋಡಿಕಲ್ನ ಶ್ರೀ ಕುರುಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ.14ರಿಂದ 26ರವರೆಗೆ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.
ಏ.15ರಂದು ಪ್ರಾತಃಕಾಲ 4.30ಕ್ಕೆ ಶ್ರೀ ರಾಜರಾಜೇಶ್ವರೀ ದೇವರಿಗೆ ದೀಪದ ಬಲಿ, ಬೆಳಗ್ಗೆ 9ಕ್ಕೆ ನವಕ ಪ್ರಧಾನ ಹೋಮ, ಕಲಶಾಭೀಷೇಕ, 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆಉತ್ಸವ ಬಲಿ, ಪೇಟೆ ಸವಾರಿ, ಕಟ್ಟೆಪೂಜೆ, ರಾತ್ರಿ ಪೂಜೆ, ಶ್ರೀಭೂತ ಬಲಿ, ಕವಾಟ ಬಂಧನ, ಶಯನೋತ್ಸವ, ಏ.16ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ವಿವಿಧ ಅಭಿಷೇಕಗಳು, ನವಕ ಪ್ರಧಾನ ಹೋಮ, ಅಭಿಷೇಕ, 9ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಜಳಕದ ಬಲಿ, ಓಕುಳಿ ಬಲಿ, ಅವಭೃತ ಸ್ನಾನ, ಚಾಮುಂಡಿ ದೈವದ ಭೇಟಿ, ತೂಟೆದಾರ, ದರ್ಶನ ಬಲಿ, ಧ್ವಜಾವರೋಹಣ, ಬಟ್ಟಲು ಕಾಣಿಕೆ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.