ಶ್ರೀ ಸಾಗಸಂದ್ರ ಕೆಂಪಮ್ಮದೇವಿ ಅದ್ಧೂರಿ ಆರತಿ ಅಗ್ನಿಕೊಂಡ ಮಹೋತ್ಸವ

KannadaprabhaNewsNetwork |  
Published : Apr 29, 2024, 01:32 AM IST
 ಗುಬ್ಬಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಾಗಸಂದ್ರ ಕೆಂಪಮ್ಮ ದೇವಿ ಆರತಿ ಅಗ್ನಿಕೊಂಡ ಮಹೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ಜರುಗಿತು. | Kannada Prabha

ಸಾರಾಂಶ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಾಗಸಂದ್ರ ಕೆಂಪಮ್ಮದೇವಿ ಆರತಿ ಅಗ್ನಿಕೊಂಡ ಮಹೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ಭಾನುವಾರ ಜರುಗಿತು.

ಕನ್ನಡ ಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಾಗಸಂದ್ರ ಕೆಂಪಮ್ಮದೇವಿ ಆರತಿ ಅಗ್ನಿಕೊಂಡ ಮಹೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ಭಾನುವಾರ ಜರುಗಿತು.

ಮುಂಜಾನೆ ಆರಂಭವಾದ ಆರತಿ ಅಗ್ನಿಕೊಂಡ ಮಹೋತ್ಸವಕ್ಕೆ ಜಿಲ್ಲೆಯ ವಿವಿದಡೆ ಆಗಮಿಸಿದ ಭಕ್ತರು ಅಮ್ಮನವರ ದರ್ಶನ ಪಡೆದು ಪುನೀತರಾದರು. ಆರತಿ ಅಗ್ನಿಕೊಂಡ ಪ್ರಯುಕ್ತ ಶ್ರೀ ಕೆಂಪಮ್ಮ ದೇವಿ ವಿಶೇಷ ಅಲಂಕಾರ ಮಾಡಲಾಯಿತು. ಮುಂಜಾನೆ ಆರಂಭವಾದ ಕಳಸ ಉತ್ಸವ ಸಾಗಸಂದ್ರ ಗ್ರಾಮದ ರಾಜ ಬೀದಿಗಳಲ್ಲಿ ಉತ್ಸವದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಳಸ ಉತ್ಸವದಲ್ಲಿ ಸೋಮನ ಕುಣಿತ ನಗಾರಿ ಪಡಿತ ಬಸವನ ಉತ್ಸವ ನಡೆದವು. ಅಮ್ಮನವರ ಕಳಸ ಉತ್ಸವ ಅಗ್ನಿಕೊಂಡ ಪ್ರವೇಶಸಿತ್ತು. ಹರಕೆ ಹಾಗೂ ಬಾಯಿಬೀಗ ಹೊತ್ತ ಭಕ್ತರು ಅಗ್ನಿಕೊಂಡ ತುಳಿದು ಹರಕೆ ತೀರಿಸಿದರು. ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡುಸಲಾಗಿತ್ತು. 9 ದಿನಗಳ ಕಾಲ ನಡೆಯಲಿರುವ ಜಾತ್ರೆ ಮಹೋತ್ಸವ ಬೆಳಗ್ಗೆ ಅಮ್ಮನವರ ಮಹಾ ರಥೋತ್ಸವ ನಡೆಯಲಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪೋಲೀಸರು ಸೂಕ್ತ ಬಂದೂಬಸ್ತ್ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ