ಶ್ರೀ ಸಿದ್ಧಾರೂಢ ಅಜ್ಜನ ಆನೆ ಅಂಬಾರಿ, ಬೆಳ್ಳಿ ಪಲ್ಲಕ್ಕಿ ಸಿದ್ಧ

KannadaprabhaNewsNetwork |  
Published : Feb 21, 2025, 11:49 PM IST
ಬೆಳ್ಳಿ | Kannada Prabha

ಸಾರಾಂಶ

105 ಕೆಜಿ ತೂಕದ ಬೆಳ್ಳಿಯಿಂದ ಆನೆ, ಅದರ ಮೇಲಿನ ಅಂಬಾರಿ, ಪೀಠ ಎಲ್ಲವುಗಳಿಗೆ ಇದೀಗ ಬೆಳ್ಳಿ ಕವಚ ಸಿದ್ಧಪಡಿಸಲಾಗುತ್ತಿದೆ. ಸರಿಸುಮಾರು 1 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಈ ಯೋಜನೆ.

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಕಥಾಮೃತಕ್ಕೆ ಶತಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಏಕಕಾಲಕ್ಕೆ ಬಂದಿರುವುದು ಈ ಸಲದ ಅಜ್ಜನ ಜಾತ್ರೆ ಹಲವು ವಿಶೇಷತೆಗಳಿಂದ ಕೂಡಿದೆ. ಇದರೊಂದಿಗೆ ಪ್ರತಿ ಸೋಮವಾರ ನಡೆಯುವ ಪಲ್ಲಕ್ಕಿ ಉತ್ಸವದ ಆನೆ ಅಂಬಾರಿಗೆ ಈಗ ಬೆಳ್ಳಿಯ ಕವಚ.

ಪ್ರತಿ ಸೋಮವಾರ ಸಂಜೆ ಅಜ್ಜನ ಪೂಜೆ ವೇಳೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಅದು ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಆನೆ ಅಂಬಾರಿಯ ಮೇಲೆ ನಡೆಯುವುದು ವಿಶೇಷ. ಇಷ್ಟು ದಿನಗಳ ಕಾಲ ಹೀಗೆ ನಡೆಯುತ್ತಿತ್ತು. ಇದೀಗ ಅದಕ್ಕೆ ಬೆಳ್ಳಿಯ ಹೊದಿಕೆ (ಕವಚ) ಮಾಡಲಾಗುತ್ತಿದೆ. ಅದರ ತಯಾರಿಯನ್ನು ಮಠದ ಆವರಣದಲ್ಲೇ ಅಕ್ಕಸಾಲಿಗರು ಮಾಡುತ್ತಿದ್ದಾರೆ.

105 ಕೆಜಿ ತೂಕದ ಬೆಳ್ಳಿಯಿಂದ ಆನೆ, ಅದರ ಮೇಲಿನ ಅಂಬಾರಿ, ಪೀಠ ಎಲ್ಲವುಗಳಿಗೆ ಇದೀಗ ಬೆಳ್ಳಿ ಕವಚ ಸಿದ್ಧಪಡಿಸಲಾಗುತ್ತಿದೆ. ಸರಿಸುಮಾರು 1 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಈ ಯೋಜನೆ.

ಅಶೋಕ ಬೆಳ್ಳಿಗಟ್ಟಿ ಮತ್ತು ಅವರ ತಂಡದವರು ಬೆಳ್ಳಿ ಕವಚ ಸಿದ್ಧಪಡಿಸುವ ಕೆಲಸದಲ್ಲಿ ಆರು ತಿಂಗಳಿಂದ ನಿರತರಾಗಿದ್ದಾರೆ. ಮಠದ ಹಿಂದೆಯೇ ಒಂದು ಕೊಠಡಿಯಲ್ಲಿ ಇದನ್ನು ಸಿದ್ಧಪಡಿಸಲಾಗುತ್ತಿದೆ. ವಿವಿಧ ದಾನಿಗಳು ನೀಡಿದ ದೇಣಿಗೆಯಿಂದ ಬೆಳ್ಳಿ ಖರೀದಿಸಿ ಅದನ್ನು ಮಹಾರಾಷ್ಟ್ರದಲ್ಲಿ ಕರಗಿಸಿ ತಗಡಿನಂತೆ ರೂಪಕೊಡಲಾಗಿದೆ. ಇಲ್ಲಿ ಅದನ್ನು ಆನೆಯ ಆಕಾರಕ್ಕೆ ತಕ್ಕಂತೆ ಸುಂದರವಾದ ಕವಚ ಸಿದ್ಧಪಡಿಸಲಾಗುತ್ತಿದೆ. ಬೆಳ್ಳಿ ಮೊಳೆಗಳನ್ನೇ ಬಳಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪೂರ್ಣವಾಗಲಿದ್ದು, ಜಾತ್ರೆಯ ದಿನ ಇದನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಅಜ್ಜನ ಪಲ್ಲಕ್ಕಿ ಉತ್ಸವದ ಆನೆ ಅಂಬಾರಿಗೆ ಇನ್ಮೇಲೆ ಬೆಳ್ಳಿಯ ಕವಚ ಸಿದ್ಧವಾಗುತ್ತಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.ಕಥಾಮೃತದಂತೆ ಅಲಂಕಾರ!

ಆರೂಢರ ಕಥಾಮೃತಕ್ಕೆ ಶತಮಾನೋತ್ಸವ ಹಿನ್ನೆಲೆಯಲ್ಲಿ ಕೈಲಾಸ ಮಂಟಪದಲ್ಲಿ ಕಥಾಮೃತದಂತೆ ಅಲಂಕರಿಸಲಾಗುತ್ತಿದೆ. ಇದು ಜಾತ್ರೆಯಲ್ಲಿ ಬರುವ ಭಕ್ತರನ್ನು ಸೆಳೆಯಲಿದೆ.2ದಿನಗಳಲ್ಲಿ ಪೂರ್ಣ

ಕಳೆದ 6 ತಿಂಗಳಿಂದ ಮಠದಲ್ಲೇ ಉಳಿದುಕೊಂಡು ಆನೆ ಅಂಬಾರಿಯ ಕವಚ ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.

- ಅಶೋಕ, ಅಕ್ಕಸಾಲಿಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ