ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಕ್ಷೇತ್ರದ ಶ್ರೀಗುರು ಭೈರವೈಕ್ಯ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ಕೋಟಿ ರು.ಗೂ ಹೆಚ್ಚು ವೆಚ್ಚದಲ್ಲಿ ಮಂದಿರ ಒರಿಸ್ಸಾದ ಸೂರ್ಯದೇಗುಲದ ಕಲೆಯನ್ನು ಒಳಗೊಂಡು ಸುಂದರವಾಗಿ ರೂಪುಗೊಂಡಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವನ್ನು ಕಾಣಬಹುದಾಗಿದೆ ಎಂದರು.
ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸ. ಇವೆಲ್ಲವೂ ಕೇವಲ ಕಟ್ಟಡ ನಿರ್ಮಾಣವಲ್ಲ. ಅದೊಂದು ದೇವರ ಭಾಷೆಯನ್ನು ಕಲ್ಲಿನಲ್ಲಿ ಬರೆದ ಮಹಾಕಾವ್ಯ ಎಂದು ವರ್ಣಿಸಿದರು.ಪ್ರತಿಯೊಂದು ಚೇತನವೂ ಮೂರು ದೇಹವನ್ನು ಹೊಂದಿರುವಂತೆ ಭೈರವೈಕ್ಯ ಮಂದಿರವೂ ಸಹ ಆತ್ಮ, ಸ್ಥೂಲ, ಅಜ್ಞಾನದ ಸ್ವರೂಪದಲ್ಲಿದೆ. ಗುರುಗಳ ಗದ್ದುಗೆ ಆತ್ಮ ಸ್ವರೂಪದಲ್ಲಿದ್ದರೆ, ಗರ್ಭಗುಡಿಯಲ್ಲಿರುವ ಪ್ರತಿಮೆ ಸ್ಥೂಲ ಸ್ವರೂಪದಲ್ಲಿದೆ. ಹೊರಗೆ ಅಜ್ಞಾನ ಸ್ವರೂಪದಲ್ಲಿರುತ್ತದೆ. ಅನ್ನ, ಪ್ರಾಣ, ಮನೋಮಯ, ವಿಜ್ಞಾನ ಮತ್ತು ಆನಂದಮಯ ಐದು ಕೋಶಗಳು ಆಧ್ಯಾತ್ಮ ಧಾಮದಲ್ಲಿವೆ. ಶ್ರೀಗಳ ಗದ್ದುಗೆಯ ಸುತ್ತ ಬೆಳ್ಳಿ ಕವಚವನ್ನು ನಿರ್ಮಿಸಿರುವುದಾಗಿ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇದ್ದರು.ನವಿಲಿಗೆ ಸಂಬಂಧಿಸಿದ ಉಡುಗೊರೆ
ಪ್ರಧಾನಿ ಎಲ್ಲೆಲ್ಲಿಗೆ ಭೇಟಿ..?
ಮಂದಿರ ನಿರ್ಮಿಸಿದ ಕಲಾವಿದ ಶಂಕರ ಸ್ತಪತಿ
ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದೇಗುಲದ ಒಳಭಾಗ, ಹೊರಭಾಗ, ವಾಸ್ತುಶಿಲ್ಪ ಶೈಲಿ, ಕಲಾ ಶೈಲಿಯನ್ನು ರೂಪುಗೊಳಿಸಲಾಗಿದೆ. ದೇಗುಲಕ್ಕೆ ನಿರ್ದಿಷ್ಟವಾಗಿ ಇಷ್ಟೇ ಖರ್ಚಾಗಿದೆ ಎಂದು ಹೇಳಲಾಗುವುದಿಲ್ಲ. ಇಡೀ ಮಂದಿರವನ್ನು ಆನೆ ಮೇಲೆ ಕೂರಿಸಿದಂತೆ ಕಲ್ಲುಗಳ ಸುಭದ್ರ ತಳಹದಿಯ ಮೇಲೆ ನಿರ್ಮಿಸಲಾಗಿದೆ ಎಂದು ನುಡಿದರು.ಶ್ರೀಮಠಕ್ಕೆ ಸುತ್ತೂರು ಶ್ರೀಗಳು ಭೇಟಿ
ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಪ್ರಯುಕ್ತ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಸೋಮವಾರ ಜರುಗಿದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಮೈಸೂರಿನ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಪಾಲ್ಗೊಂಡು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಚೈತನ್ಯ ಮೂರ್ತಿಗೆ ಪುಷ್ಪ ಮಾಲಿಕೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಧಾರ್ಮಿಕ ಪೂಜಾ ಕಾರ್ಯದಲ್ಲಿ ವಿವಿಧ ಮಠಗಳ ಶ್ರೀಗಳು
ನಾಗಮಂಗಲ:ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಪ್ರಯುಕ್ತ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಜರುಗಿದ ಹೋಮ ಹವನಾದಿ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾದ್ಯಕ್ಷ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಂಡರು.
ನಂತರ ಶ್ರೀಮಠಕ್ಕೆ ಭೇಟಿ ಕೊಟ್ಟ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ದಂಪತಿ ಕ್ಷೇತ್ರಾಧಿದೇವತೆಗಳ ಹಾಗೂ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.