ಶ್ರೀನಿವಾಸ್‌ ಪ್ರಸಾದ್, ಧ್ರುವನಾರಾಯಣ್ ಎರಡು ರತ್ನಗಳು

KannadaprabhaNewsNetwork |  
Published : May 07, 2024, 01:02 AM IST
6ಸಿಎಚ್‌ಎನ್‌59ಕೊಳ್ಳೇಗಾಲದ ಕೆಯುಸಿ ಕ್ಲಬ್ ಸಭಾಂಗಣದಲ್ಲಿ ಹೃದಯವಂತರ ಬಳಗ ಅಯೋಜಿಸಿದ್ದ ಶ್ರೀನಿವಾಸ ಪ್ರಸಾದ್ ಅವರಿಗೆ ನುಡಿ,ನಮ ಕಾಯ೯ಕ್ರಮದಲ್ಲಿ ರಾಜ್ಯ ಕಾಮಿ೯ಕ ಕಾಂಗ್ರೆಸ್ ಘಟಕದ  ಕಾಯ೯ದಶಿ೯ ಜಿ ಸಿ ಕಿರಣ್, ರಾಜ್ಯ ಉಪ್ಪಾರ ಅಭಿವೖದ್ದಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಪಾಲ್ಗೊಂಡರು. ನಿಂಪು ರಾಜೇಶ್, ಸಾಗರ್ ಇದ್ದರು. | Kannada Prabha

ಸಾರಾಂಶ

ಶ್ರೀನಿವಾಸ ಪ್ರಸಾದ್ ನುಡಿ ನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದಲಿತ ಹಾಗೂ ಹಿಂದುಳಿದ ಸಮಾಜದ ಏಳ್ಗೆಗೆ ಶ್ರಮಿಸಿದ ವಿ ಶ್ರೀನಿವಾಸ ಪ್ರಸಾದ್ ಮತ್ತು ಆರ್ ಧ್ರುವನಾರಾಯಣ್ ಚಾಮರಾಜನಗರ ಜಿಲ್ಲೆಯೆ ಎರಡು ಅಮೂಲ್ಯ ರತ್ನಗಳು ಎಂದು ಕೆಪಿಸಿಸಿ ರಾಜ್ಯ ಕಾಮಿ೯ಕ ಘಟಕದ ಕಾರ್ಯದರ್ಶಿ ಜಿ ಸಿ ಕಿರಣ್ ಹೇಳಿದರು. ಕೊಳ್ಳೇಗಾಲ ಪಟ್ಟಣದ ಕೆಯುಸಿ ಸಭಾಂಗಣದಲ್ಲಿ ಸೋಮವಾರ ಹೖದಯವಂತರ ಬಳಗ ಅಯೋಜಿಸಿದ್ದ ಅಗಲಿದ ನಾಯಕ ಶ್ರೀನಿವಾಸ ಪ್ರಸಾದ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀನಿವಾಸ ಪ್ರಸಾದ್ ದಲಿತರ ಅಭಿವೃದ್ಧಿಗಾಗಿ ದುಡಿದ ನಾಯಕರು. ಚಾಮರಾಜನಗರ ಜಿಲ್ಲೆಯ ಆಶಾಕಿರಣವಾಗಿ ಹೊರಹೊಮ್ಮಿದವರು. ದಲಿತರು, ಹಿಂದುಳಿದ ವರ್ಗಗಳ ಸಮುಧಾಯ ಅಭಿವೃದ್ಧಿಗಾಗಿ ಸ್ಪಂದಿಸಿದ ನಾಯಕರು ಎಂದರು.

ಶ್ರೀನಿವಾಸ ಪ್ರಸಾದ್ ದಲಿತರ ಅಭ್ಯುದಯಕ್ಕಾಗಿ ಅವರಿಗೆ ಸಮಾನ ಹಕ್ಕು ಕಲ್ಪಿಸುವಲ್ಲಿ ಶ್ರಮಿಸಿದವರು. ಚಾಮರಾಜನಗರ ಭಾಗದ ಎರಡು ರತ್ನಗಳನ್ನು ನಾವು ಕಳೆದುಕೊಂಡಿದ್ದೆವೆ, ಅವರ ಸ್ಥಾನ ತುಂಬುವಲ್ಲಿ ಮುಂದಿನ ತಲೆಮಾರಿನ ಪೀಳಿಗೆ ಅವರ ಆದಶ೯ ರೂಡಿಸಿಕೊಳ್ಳಬೇಕೆಂದರು.ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ವಿ ಶ್ರೀನಿವಾಸ ಪ್ರಸಾದ್ ಅವರು ನೇರ, ನುಡಿಯ ನೇತಾರರಾಗಿದ್ದರು. ಅವರ ಆದರ್ಶವನ್ನು ಯುವ ಪೀಳಿಗೆ ರೂಡಿಸಿಕೊಳ್ಳಬೇಕು, ಅವರು ಸಾಗಿಬಂದ ಹಾದಿ ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದರು . ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ವಿ ಶ್ರೀನಿವಾಸ ಪ್ರಸಾದ್ ಅವರಿಗೆ ದೀನ, ದಲಿತರು, ಹಿಂದುಳಿದ ವಗ೯ಗಳ ಅಭಿವೃದ್ಧಿ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಅವರು ಚಾಮರಾಜನಗರ ಜಿಲ್ಲೆಗೆ ನೀಡಿದ ಕೊಡುಗೆ ಅಪಾರ, ಇಂದು ಹೃದಯವಂತರ ಬಳಗ ಅಥಂಹ ಮಹಾನ್ ನಾಯಕರಿಗೆ ನುಡಿ, ನಮಗ ಅರ್ಪಿಸುವ ಜೊತೆಗೆ ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಪ್ರಸಾದ್ ಅವರು ಸ್ವಾಭಿಮಾನಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನ ವಿರೋದಿಸಿದ ಕೆಚ್ಚೆದೆ ಅವರದ್ದಾಗಿತ್ತು ಎಂದರು. ಈ ವೇಳೆ ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ, ಡಿಎಸ್ಎಸ್ ವಿಭಾಗೀಯ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ, ಭೀಮನಗರ ಯಜಮಾನರಾದ ಡಿ.ನಟರಾಜು, ಶಿವಸ್ವಾಮಿ, ರೈತ ಮುಖಂಡ ಗೌಡೇಗೌಡ, ಹೃದಯವಂತರ ಬಳಗದ ನಿಂಪು ರಾಜೇಶ್, ಸಾಗರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ