ಶ್ರೀನಿವಾಸ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಸಂಪನ್ನ

KannadaprabhaNewsNetwork |  
Published : Feb 11, 2024, 01:51 AM IST
ಶ್ರೀನಿವಾಸ ವಿವಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ  | Kannada Prabha

ಸಾರಾಂಶ

ಘಟಿಕೋತ್ಸವದದಲ್ಲಿ 1,257 ಪದವೀಧರರು (ಪಿಜಿ - 358, ಯುಜಿ - 881) ಪ್ರಮಾಣ ಪತ್ರ ಪಡೆದರು. 144 ಮಂದಿ ರ್‍ಯಾಂಕ್‌ ಪಡೆದಿದ್ದು, ಒಟ್ಟು 38 ಮಂದಿ ಪದವೀಧರರು ಕುಲಪತಿಗಳ ಚಿನ್ನದ ಪದಕ ಪಡೆದರು. ಹೆಚ್ಚುವರಿಯಾಗಿ 1 D.Sc ಮತ್ತು 17 Ph. Ds ಅನ್ನು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಆರನೇ ವಾರ್ಷಿಕ ಘಟಿಕೋತ್ಸವ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್‌ನಲ್ಲಿ ಶನಿವಾರ ನಡೆಯಿತು.

ಎಂಸಿಎಫ್‌ ವೈದ್ಯಕೀಯ ಸೇವೆಯ ಜಂಟಿ ಪ್ರಧಾನ ವ್ಯವಸ್ಥಾಪಕ ಡಾ. ಯೋಗೀಶ್‌ ಮಾತನಾಡಿ, ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸಮರ್ಪಣೆ, ಸ್ವಯಂ ನಂಬಿಕೆ, ಸ್ವಆರೈಕೆ ಮತ್ತು ಒಬ್ಬರ ಕೆಲಸದ ಬಗ್ಗೆ ಉತ್ಸಾಹ ಮುಖ್ಯ. ಕಷ್ಟಪಟ್ಟು ಕೆಲಸ ಮಾಡುವುದು, ಒಳ್ಳೆಯವನಾಗಿರುವುದು ಮತ್ತು ಕೃತಜ್ಞತೆ ತೋರಿಸುವುದು ಯಶಸ್ಸಿನ ಪ್ರಮುಖ ಅಂಶಗಳಾಗಿವೆ ಎಂದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ.ಶಾಮರಾವ್‌ ಫೌಂಡೇಷನ್‌ ಅಧ್ಯಕ್ಷ ಡಾ.ಸಿಎ. ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿ, ನಮ್ಮ ಪ್ರಪಂಚದ ಬೆಳವಣಿಗೆಗೆ ಪ್ರತಿಯೊಂದು ವೃತ್ತಿಯು ನಿರ್ಣಾಯಕವಾಗಿದೆ. ಸಮಾಜ ಮತ್ತು ಜನರ ಸೇವೆ ಮಾಡಲು ಪ್ರಯತ್ನಿಸುವುದು ಒಬ್ಬರು ಕೈಗೊಳ್ಳಬಹುದಾದ ದೊಡ್ಡ ಪ್ರಯತ್ನವಾಗಿದೆ. ಯಾವುದೇ ಕೆಲಸ ಇರಲಿ, ಅದನ್ನು ಗೌರವಿಸಿ ತಮ್ಮಕೆಲಸಕ್ಕೆ ಸಮರ್ಪಿಸಬೇಕು ಎಂದರು.

ಶ್ರೀನಿವಾಸ ವಿವಿ ಸಹಕುಲಾಧಿಪತಿ, ಎ.ಶಾಮರಾವ್‌ ಫೌಂಡೇಷನ್‌ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ್‌ ರಾವ್‌ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ಪ್ರವೃತ್ತಿಗಳೊಂದಿಗೆ ನವೀಕೃತವಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಇತ್ತೀಚಿನ ವ್ಯವಸ್ಥೆಗಳ ಜ್ಞಾನವನ್ನು ಪಡೆದುಕೊಳ್ಳಬೇಕು. ದಿನಚರಿಗಳು ಕೂಡ ವಿಕಸನಗೊಳ್ಳಬೇಕು ಎಂದರು.

ಉಪಕುಲಪತಿ ಡಾ.ಸತ್ಯನಾರಾಯಣ ರೆಡ್ಡಿ ವಾರ್ಷಿಕ ವರದಿ ಮಂಡಿಸಿದರು.

ಟ್ರಸ್ಟಿಗಳಾದ ಮಿತ್ರ ಎಸ್. ರಾವ್, ವಿಜಯಲಕ್ಷ್ಮಿಆರ್.ರಾವ್, ಪದ್ಮಿನಿ ಕುಮಾರ್, ಡಾ. ಉದಯ ಕುಮಾರ್‌ ಮಯ್ಯ, ಕುಲಸಚಿವ ಡಾ.ಅನಿಲ್‌ ಕುಮಾರ್‌, ಮೌಲ್ಯಮಾಪನ ಕುಲಸಚಿವ ಡಾ.ಶ್ರೀನಿವಾಸ ಮಯ್ಯ, ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ.ಅಜಯ ಕುಮಾರ್‌, ಅಕಾಡೆಮಿ ರಿಜಿಸ್ಟ್ರಾರ್‌ ಡಾ.ಆದಿತ್ಯ ಕುಮಾರ್‌ ಮತ್ತಿತರರಿದ್ದರು.

ಘಟಿಕೋತ್ಸವದದಲ್ಲಿ 1,257 ಪದವೀಧರರು (ಪಿಜಿ - 358, ಯುಜಿ - 881) ಪ್ರಮಾಣ ಪತ್ರ ಪಡೆದರು. 144 ಮಂದಿ ರ್‍ಯಾಂಕ್‌ ಪಡೆದಿದ್ದು, ಒಟ್ಟು 38 ಮಂದಿ ಪದವೀಧರರು ಕುಲಪತಿಗಳ ಚಿನ್ನದ ಪದಕ ಪಡೆದರು. ಹೆಚ್ಚುವರಿಯಾಗಿ 1 D.Sc ಮತ್ತು 17 Ph. Ds ಅನ್ನು ನೀಡಲಾಯಿತು.

ಡಾ.ಅಂಬಿಕಾ ಮಲ್ಯ, ಡಾ.ವಿಜಯಲಕ್ಷ್ಮಿ ನಾಯಕ್, ಪ್ರೊ.ರೋಹನ್‌ ಫರ್ನಾಂಡಿಸ್‌ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ