ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿ: ಪ್ರೊ.ಪಿ. ಪರಮಶಿವಯ್ಯ

KannadaprabhaNewsNetwork |  
Published : Jul 28, 2024, 02:06 AM IST
ವಿವಿ ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ನಿರ್ವಹಣಾ ವಿಭಾಗ  ಶನಿವಾರ ಆಯೋಜಿಸಿದ್ದ ‘ಸಂಕಲ್ಪ-2024’ ಸಾಂಪ್ರದಾಯಿಕ ದಿನಾಚರಣೆಯನ್ನು ಸ್ನಾತಕೋತ್ತರ ವಾಣಿಜ್ಯಶಾಸ್ತ್ರಅಧ್ಯಯನ ಮತ್ತು ಸಂಶೋಧನಾ ವಿಭಾಗದಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಉದ್ಘಾಟಿಸಿದರು.ಪ್ರೊ. ಶೇಖರ್ ಬಿ.,ಪ್ರೊ.ಬಿ.ಕರಿಯಣ್ಣ, ಡಾ.ಸಿ.ಶೋಭಾ, ಚಂದ್ರಮೌಳಿ, ಡಾ. ಸುಮಾದೇವಿ ಎಸ್.,ಡಾ. ಆರ್.ಸುದೀಪ್‌ಕುಮಾರ್‌ಇದ್ದಾರೆ. | Kannada Prabha

ಸಾರಾಂಶ

ಸ್ಟಾರ್ಟ್ ಅಪ್‌ ಕಂಪನಿ ಆರಂಭಿಸಿ ಉದ್ಯೋಗದಾತರಾಗಬೇಕು ಎಂದು ಪ್ರಾಧ್ಯಾಪಕ ಪ್ರೊ.ಪಿ. ಪರಮಶಿವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಸ್ಟಾರ್ಟ್ ಅಪ್‌ ಕಂಪನಿ ಆರಂಭಿಸಿ ಉದ್ಯೋಗದಾತರಾಗಬೇಕು ಎಂದು ಪ್ರಾಧ್ಯಾಪಕ ಪ್ರೊ.ಪಿ. ಪರಮಶಿವಯ್ಯ ಹೇಳಿದರು.ನಗರದ ವಿವಿ ಕಲಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ನಿರ್ವಹಣಾ ವಿಭಾಗವು ಶನಿವಾರ ಆಯೋಜಿಸಿದ್ದ ‘ಸಂಕಲ್ಪ-2024’ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಲೇಜು ಜೀವನ ವಿಭಿನ್ನ ಅನುಭವಗಳನ್ನು ದಯಪಾಲಿಸುತ್ತದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅನುಭವಗಳು ಉದ್ಯೋಗ ಸಂಬಂಧಿ ಕಲ್ಪನೆಗಳನ್ನು ಕೊಡುತ್ತವೆ. ಕಲ್ಪನೆಗಳನ್ನು ಹೂಡಿಕೆ ಮಾಡಿದಾಗ ಉದ್ಯೋಗಿಯಿಂದ ಉದ್ಯೋಗದಾತರಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.

ವಾಣಿಜ್ಯ ನಿಕಾಯದ ಡೀನ್‌ ಪ್ರೊ.ಶೇಖರ್ ಬಿ.ಮಾತನಾಡಿ, ಹೃದಯಕ್ಕೆ ಹರಿದ ಶಿಕ್ಷಣ ಜೀವನವನ್ನು ರೂಪಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ನಾಯಕತ್ವ ಗುಣವನ್ನು ವಿಸ್ತಾರವಾಗಿ ವೃದ್ಧಿಸುವ ಸಮಗ್ರ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಸರ್ವವನ್ನು ಒಳಗೊಂಡು, ಸರ್ವಧರ್ಮವನ್ನು ಪೋಷಿಸಿಕೊಂಡು ಬಂದಿರುವ ಭಾರತದೇಶ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ವಿಶ್ವಕ್ಕೆ ಸಾರಿದೆ ಎಂದರು. ಡಾ.ಸಿ.ಶೋಭಾ, ಸಹ ಪ್ರಾಧ್ಯಾಪಕಿ ಡಾ. ವನಜಾಕ್ಷಿ, ಸಹಾಯಕ ಪ್ರಾಧ್ಯಾಪಕ ಚಂದ್ರಮೌಳಿ, ಸಹಾಯಕ ಗ್ರಂಥಪಾಲಕಿ ಡಾ. ಸುಮಾದೇವಿ ಎಸ್.,ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಆರ್.ಸುದೀಪ್‌ಕುಮಾರ್‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಪ್ರಗತೀಲಿ ಮಹಿಳೆ ಪಾತ್ರ ಹಿರಿದು: ಮಂಜುಳಾ ಕುಲಕರ್ಣಿ
ಎಸ್ಸೆಸ್ಸೆಲ್ಸಿ ದಾಖಲೆ ಫಲಿತಾಂಶದತ್ತ ಕುದೂರು ಕೆಪಿಎಸ್ ಶಾಲೆ