ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನ: ಲಾಂಛನ ಬಿಡುಗಡೆ

KannadaprabhaNewsNetwork |  
Published : Aug 26, 2025, 01:02 AM IST
25ಕೆಡಿವಿಜಿ4, 5-ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡುವ ಮೂಲಕ ಪತ್ರಿಕಾ ವಿತರಕರಿಗೆ, ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದ್ದಾರೆ.

- ಶೀಘ್ರವೇ ಪತ್ರಿಕೆಗಳ ವಿತರಣೆಗೆ ಶೆಲ್ಟರ್‌, ವಸತಿ ಸೌಲಭ್ಯ: ಸಚಿವ ಭರವಸೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡುವ ಮೂಲಕ ಪತ್ರಿಕಾ ವಿತರಕರಿಗೆ, ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು.

ಪತ್ರಿಕಾ ರಂಗಕ್ಕೆ ಪತ್ರಿಕಾ ವಿತರಕರ ಕೊಡುಗೆ ಅವಿಸ್ಮರಣೀಯವಾದುದು. ಮಳೆ, ಚಳಿಯನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಪರಿಶ್ರಮ ದೊಡ್ಡದು. ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಿಕೆಗಳ ಹೊತ್ತು ತಿರುಗುತ್ತಾ, ಓದುಗರಿಗೆ ತಲುಪಿಸುವ ನಿಸ್ವಾರ್ಥ ಮತ್ತು ಬೆಲೆ ಕಟ್ಟಲಾಗದ ಸೇವೆ ನಿಮ್ಮದು ಎಂದರು.

ಪತ್ರಿಕೋದ್ಯಮ ನಮ್ಮ ಸಮಾಜಕ್ಕೆ ಒಂದು ಆಧಾರ ಸ್ತಂಭವಾದರೆ, ಪತ್ರಿಕಾ ವಿತರಕರು ಅದರ ಕೊಂಡಿಗಳು. ನಿಮ್ಮ ಕಾಯಕವನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡುವ ಪತ್ರಿಕಾ ವಿತರಣೆಯ ಶ್ರಮಜೀವಿಗಳು ಎಂದು ಬಣ್ಣಿಸಿದರು.

ಮೈಸೂರು ಸಮಾವೇಶಕ್ಕೆ ಯಾವುದೇ ಗಲಾಟೆ, ಗದ್ದಲವಿಲ್ಲದೇ, ನಸುನಗುತ್ತಾ ಹೋಗಿ ಬನ್ನಿ. ಸಮ್ಮೇಳನ ಯಶಸ್ವಿಯಾಗಲಿ. ನಿಮ್ಮ ಬೇಡಿಕೆಗಳ ಬಗ್ಗೆ ನಮ್ಮ ಗಮನದಲ್ಲೂ ಇದೆ. ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರಿಗೆ ಮಳೆ, ಚಳಿಯಿಂದ ರಕ್ಷಣೆಗಾಗಿ ಶೆಲ್ಟರ್ ಕೇಳಿರುವುದು, ಆಶ್ರಯ ಸೇರಿದಂತೆ ವಸತಿ ಯೋಜನೆಗಳಡಿ ಸೂರು ಕಲ್ಪಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ಭರವಸೆ ನೀಡಿದರು.

ದಿನವೂ ಪೈಸೆ ಪೈಸೆಗಳಿಗೆ ಕೆಲಸ ಮಾಡುವ ಪತ್ರಿಕಾ ವಿತರಕರ ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈಗಷ್ಟೇ ಮೈಸೂರಿಗೆ ಹೋಗಿ ಬರುವುದಕ್ಕೆ ಆರ್ಥಿಕ ಹೊರೆ ಆಗುತ್ತಿರುವ ವಿಚಾರ ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ, ಕನ್ನಡಪ್ರಭದ ನಾಗರಾಜ ಬಡದಾಳ್ ಮೂಲಕ ಗೊತ್ತಾಗಿದೆ. ಮೈಸೂರಿಗೆ ನೀವು ಹೋಗಿ, ಬರಲು ಬಸ್‌ ವ್ಯವಸ್ಥೆ ಮಾಡುವುದಾಗಿ ಹೇಳಿದ ಸಚಿವರು, ಸ್ಥಳದಲ್ಲೇ ಬಸ್‌ ಮಾಲೀಕರೊಬ್ಬರಿಗೆ ಮಾತನಾಡಿ, ಒಂದು ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟರು.

ಸಚಿವರ ಸ್ಪಂದನೆಗೆ ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಕುಮಾರಸ್ವಾಮಿ ಇತರರು ಕೃತಜ್ಞತೆ ಅರ್ಪಿಸಿದರು. ಈ ಸಂದರ್ಭ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್. ಬಡದಾಳ, ಪಾಲಿಕೆ ಮಾಜಿ ಮೇಯರ್ ಕೆ.ಚಮನ್ ಸಾಬ್‌, ವಿಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ, ಮಾಗಾನಹಳ್ಳಿ ಬಿ.ಕೆ. ಪರಶುರಾಮ, ಯುವ ಮುಖಂಡರಾದ ಶ್ರೀಕಾಂತ ಬಗರೆ, ಆರ್.ಟಿ. ಪ್ರಶಾಂತ, ಆನೆಕೊಂಡ ರವಿಕುಮಾರ, ಸಂಘದ ಎ.ಎನ್.ಕೃಷ್ಣಮೂರ್ತಿ, ಸುಧಾಕರ, ಗುರುರಾಜ, ಡಿ.ರವಿ, ಅರುಣಕುಮಾರ, ಚಂದ್ರು, ನಿಂಗಪ್ಪ, ಟಿ.ಪಿ.ನಾಗರಾಜ, ಎಂ.ಬಿ.ಬಸವರಾಜ, ಪ್ರಕಾಶ, ವಿನಯ್‌, ಉಮೇಶ ಇತರರು ಇದ್ದರು.

- - -

-25ಕೆಡಿವಿಜಿ4, 5.ಜೆಪಿಜಿ:

ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು