ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

KannadaprabhaNewsNetwork |  
Published : Sep 15, 2025, 01:00 AM IST
ವಿಜೆಪಿ ೧೪ವಿಜಯಪುರ ಪಟ್ಟಣದಲ್ಲಿ ಸಹಸ್ರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಪ್ರದರ್ಶನ ನೀಡಿದರು. | Kannada Prabha

ಸಾರಾಂಶ

ವಿಜಯಪುರ: ದೇಶೀಯ ಕ್ರೀಡೆಗಳಿಂದ ದೈಹಿಕ-ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ವಾಲಿಬಾಲ್ ಕ್ರೀಡಾಪಟು ಶ್ರೀರಾಮಪ್ಪ ಹೇಳಿದರು.

ವಿಜಯಪುರ: ದೇಶೀಯ ಕ್ರೀಡೆಗಳಿಂದ ದೈಹಿಕ-ಮಾನಸಿಕ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ವಾಲಿಬಾಲ್ ಕ್ರೀಡಾಪಟು ಶ್ರೀರಾಮಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಹಸ್ರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಲಿಬಾಲ್ ಕ್ರೀಡೆ ವಿರಲು ಸಾಧ್ಯ. ಮುಂದಿನ ಪೀಳಿಗೆಗೂ ದೇಶೀಯ ಕ್ರೀಡೆಗಳನ್ನು ಪರಿಚಯ ಮಾಡಿಸಬೇಕಿದೆ. ಕ್ರಿಕೆಟ್‌ನಂತೆ ಈ ಕ್ರೀಡೆಯೂ ಹೆಚ್ಚು ಪ್ರಚಲಿತವಾಗಿದ್ದು, ಇಂತಹ ಅವಕಾಶಗಳನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಯುವಮುಖಂಡ ಗಿರೀಶ್ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ವೃದ್ಧಿಗೊಳಿಸಬೇಕು, ಯುವಕರನ್ನು ಒಂದುಗೂಡಿಸಲು ವಾಲಿಬಾಲ್ ಕ್ರೀಡಾಕೂಟ ಹೆಚ್ಚು ಉಪಕಾರಿ. ಇದು ರಾಜ್ಯ ಮಟ್ಟದ ಕ್ರೀಡಾಕೂಟ ಆಗಿದ್ದು, ೨೨ ತಂಡಗಳ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಆಯೋಜಕರಾದ ಸುಜಯ್, ಅರುಣ್ ಕುಮಾರ್, ಟೈಲರ್ ಮಂಜುನಾಥ್,ಕೇಶವ, ಶ್ರೀನಿವಾಸ್, ಅಭಿ, ಬಾಬು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ