ಹಣ್ಣು ಸಂಸ್ಕರಣಾ ಘಟಕ ಸ್ಥಾಪನೆಗೆ ರಾಜ್ಯ ನಿರ್ಲಕ್ಷ್ಯ

KannadaprabhaNewsNetwork | Published : May 28, 2025 12:18 AM
ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕೇಂದ್ರದ ಸಬ್ಸಿಡಿ ಜತೆಗೆ ಹಲವು ರಾಜ್ಯಗಳು ಶೇ. 25ರಷ್ಟು ಸಬ್ಸಿಡೀ ನೀಡುವ ಮೂಲಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹಿಸುತ್ತಿವೆ, ಆದರೆ ರಾಜ್ಯದಲ್ಲಿ ಇಂತಹ ಯಾವುದೇ ಉತ್ತೇಜನೆ ನೀಡುತ್ತಿಲ್ಲ. ಹೀಗಾಗಿ ಇಲ್ಲಿ ತರಕಾರಿ, ಮಾವು ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದರೂ ಸಂಸ್ಕರಣಾ ಘಟಕಗಳಿಲ್ಲ,
Follow Us

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಟೊಮೆಟೋ, ಮಾವು, ತರಕಾರಿ ಹೆಚ್ಚಾಗಿ ಬೆಳೆಯುತ್ತಿದ್ದು ಇಲ್ಲಿಯ ರೈತರ ಅನುಕೂಲಕ್ಕಾಗಿ ಹಣ್ಣು-ತರಕಾರಿ ಸಂಸ್ಕರಣಾ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂದು ಸಂಸದ ಎಂ.ಮಲ್ಲೇಶ್‌ಬಾಬು ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಗರದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಯಾವುದೇ ಸಂಸ್ಕರಣಾ ಘಟಕಕ್ಕೆ ಕೇಂದ್ರ ಸರ್ಕಾರ ಶೇ.೫೦ ಸಬ್ಸಿಡಿ ನೀಡುತ್ತದೆ ಎಂದರು.

ರಾಜ್ಯ ಸಬ್ಸಿಡಿ ನೀಡುತ್ತಿಲ್ಲ

ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕೇಂದ್ರದ ಸಬ್ಸಿಡಿ ಜತೆಗೆ ಹಲವು ರಾಜ್ಯಗಳು ಶೇ. 25ರಷ್ಟು ಸಬ್ಸಿಡೀ ನೀಡುವ ಮೂಲಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹಿಸುತ್ತಿವೆ, ಆದರೆ ರಾಜ್ಯದಲ್ಲಿ ಇಂತಹ ಯಾವುದೇ ಉತ್ತೇಜನೆ ನೀಡುತ್ತಿಲ್ಲ. ಹೀಗಾಗಿ ಇಲ್ಲಿ ತರಕಾರಿ, ಮಾವು ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದರೂ ಸಂಸ್ಕರಣಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಉದ್ಯಮಿಗಳು ಮುಂದಾಗುತ್ತಿಲ್ಲ ಎಂದರು. ಜಿಲ್ಲೆಯಲ್ಲಿ ಮೈನಾರಿಟಿ ಹಾಸ್ಟೆಲ್‌ಗಳನ್ನು ಸ್ಥಾಪಿಸುವುದಕ್ಕಾಗಿ ಹಲವು ಬಾರಿ ರಾಜ್ಯ ಸರ್ಕಾರವನ್ನು ಕೋರಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಜಿಲ್ಲಯಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಇತರೆ ಮೈನಾರಿಟಿ ಧರ್ಮದವರು ಇದ್ದಾರೆ, ಇದರೊಂದಿಗೆ ಶೇ.೨೫ ಹಿಂದುಗಳಿದವರಿಗೆ ಇದರಲ್ಲಿ ಅನುಕೂಲವಾಗುತ್ತದೆ, ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ ಎಂದರು.ವೈಟ್ ಫೀಲ್ಡ್‌- ಕೋಲಾರಕ್ಕೆ ರೈಲು

ಬೆಂಗಳೂರಿನ ವೈಟ್ ಫೀಲ್ಡ್‌ನಿಂದ ಕೋಲಾರಕ್ಕೆ ರೈಲ್ವೆ ಮಾರ್ಗಕ್ಕಾಗಿ ಸ್ಥಳೀಯರು ಬೇಡಿಕೆಯಿಟ್ಟಾಗ ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳು ವರದಿ ನೀಡಿದ ನಂತರ ನಿರ್ಧಾರ ಮಾಡಲಾಗುವುದು, ನಗರದ ಎಪಿಎಂಸಿ ಮಾರುಕಟ್ಟೆಯಿಂದ ಡಿಸಿ ಕಚೇರಿವರೆಗಿನ ರಾಷ್ಟ್ರೀಯತ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ವಹಿಸಿದೆ, ನಗರದ ಹೊರವಲಯದಲ್ಲಿ ರಿಂಗ್ ರೋಡ್ ಕಾಳಹಸ್ತಿಪುರ ಗೇಟ್ ಬಳಿ ಮಾಡುವುದನ್ನು ಬೇಡ ಅದರ ಬದಲಾಗಿ ಕೆಂಬೋಡಿ ಬಳಿ ನಿರ್ಮಿಸಲು ಸೂಚಿಸಿದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ಆ್ಯಂಬುಲೆನ್ಸ್ ಹಾವಳಿ ಹೆಚ್ಚಾಗಿದ್ದು ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಶಾಮೀಲಾಗಿದ್ದಾರೆ, ಇದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಬೆಕಾಗಿದೆ ಎಂದು ಕಾರ್ಯಕರ್ತರು ತಿಳಿಸಿದಾಗ, ಆರೋಗ್ಯ ಇಲಾಖೆಗೆ ಉಚಿತವಾಗಿ ಆ್ಯಂಬುಲೆನ್ಸ್ ನೀಡುವುದಾಗಿ ಹೇಳಿದರೂ ಅದನ್ನು ಪಡೆಯಲು ಅವರು ಹಿಂಜರಿಯುತ್ತಿದ್ದಾರೆ, ಕಾರಣ ಕೇಳಿದರೆ ಡ್ರೈವರ್‌ಗಳು ಇಲ್ಲ ಎಂದು ಸಬೂಬು ನೀಡುತ್ತಿದ್ದಾರೆ, ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.ಜನರು ಒತ್ತಡ ಹೇರಬೇಕು

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಎಲ್ಲವನ್ನು ನಾವೇ ಮಾಡಲಾಗುವುದಿಲ್ಲ, ನೀವುಗಳು ನಗರಸಭೆ ಮೇಲೆ ಒತ್ತಡ ಹಾಕಬೇಕು, ಕೆಲಸ ಆಗಬೇಕಾದರೆ ಹೋರಾಟದ ಹಾದಿ ಹಿಡಿಯಬೇಕು ಎಂದು ನಗರದಲ್ಲಿ ಸ್ಲಾಟರ್ ಹೌಸ್ ನಿರ್ಮಾಣ, ಕೀಲುಕೋಟೆಯಲ್ಲಿ ಸ್ಮಶಾನದ ಅಭಿವೃದ್ದಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿ, ಪಾದಚಾರಿ ರಸ್ತೆಗಳ ಒತ್ತುವರಿ, ಮುಂತಾದ ಸಮಾಜ ಕಾಳಜಿಯ ವಿಚಾರಗಳನ್ನು ಕೈಗೆತ್ತಿಕೊಂಡು ಜನರ ಅನುಕೂಲಕ್ಕಾಗಿ ಎಲ್ಲರೂ ಕೈಜೋಡಿಸಿ ಶ್ರಮಿಸಬೇಕು ಎಂದು ಕರೆನೀಡಿದರು.ಬಾಂಗ್ಲಾ ದೇಶಿಗರ ಹಾವಳಿ

ಸಾರ್ವಜನಿಕರ ಅನುಕೂಲಕ್ಕಾಗಿ ಕೋಲಾರದಲ್ಲಿ ಪಾಸ್‌ಪೋರ್ಟ್ ಕಚೇರಿ ತೆರೆಯಲು ಕ್ರಮವಹಿಸಲಾಗಿದೆ, ನಗರ ಸಭೆಯ ಎಲ್ಲಾ ಆಸ್ತಿಗಳ ವಿವರಗಳನ್ನು ನಗರಸಭೆ ವೆಬ್‌ಸೈಟ್ ಮತ್ತು ಸಂಸದರ ವೆಬ್‌ಸೈಟ್‌ನಲ್ಲಿ ಪ್ರಚಾರಗೊಳಿಸಲಾಗುವುದು, ಇದರಿಂದ ಅಕ್ರಮ ಆಸ್ತಿ ಒತ್ತುವರಿ ತಡೆಗಟ್ಟಲು ಸಹಾಯವಾಗುತ್ತದೆ. ಜಿಲ್ಲೆಯಲ್ಲಿನ ಕೈಗಾರಿಕೆ ಪ್ರದೇಶಗಳಲ್ಲಿ ಬಾಂಗ್ಲಾದೇಶದವರ ಹಾವಳಿ ಹೆಚ್ಚಾಗಿದೆ, ಈ ಬಗ್ಗೆ ಸ್ಥಳೀಯ ಪೊಲೀಸರು ಕ್ರಮ ವಹಿಸುತ್ತಿಲ್ಲ, ಈ ಬಗ್ಗೆ ಐ.ಜಿ ರವರಲ್ಲಿ ಸೀರಿಯಸ್ ಆಗಿ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಕೇಂದ್ರ ಸರ್ಕಾರದಿಂದ ಒತ್ತಡ ಹಾಕಿಸುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯರಾದ ಮಂಜುನಾಥ್, ವಡಗೂರು ರಾಕೇಶ್, ಪ್ರವೀಣ್‌ಗೌಡ, ಮು.ರಾಘವೇಂದ್ರ, ಮುಖಂಡರಾದ ಶಿಳ್ಳಂಗೆರೆ ಮಹೇಶ್, ಅಪ್ಪಿನಾರಾಯಣಸ್ವಾಮಿ, ನಾಮಾಲ್ ಮಂಜು, ಜೆಡಿಎಸ್ ವಿಜಯಕುಮಾರ್, ಸಾ.ಮಾ.ಅನಿಲ್ ಇದ್ದರು.