ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯ ಶಿಲಾ ಶಾಸನಕ್ಕೆ ಬೇಕಿದೆ ರಕ್ಷಣೆ

KannadaprabhaNewsNetwork |  
Published : Oct 13, 2025, 02:01 AM IST
ಸ | Kannada Prabha

ಸಾರಾಂಶ

ಬಸವೇಶ್ವರ ದೇವಸ್ಥಾನದ ಬಳಿ ದೊರೆತಿರುವ ಮ್ಯಾಂಗನೀಸ್ ಶಿಲಾ ಶಾಸನವನ್ನು ಸಂರಕ್ಷಿಸುವ ಅಗತ್ಯವಿದೆ.

ಸಂಡೂರು: ಪಟ್ಟಣ ಸಮೀಪದ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿ ದೊರೆತಿರುವ ಮ್ಯಾಂಗನೀಸ್ ಶಿಲಾ ಶಾಸನವನ್ನು ಸಂರಕ್ಷಿಸುವ ಅಗತ್ಯವಿದೆ.ದೇವಸ್ಥಾನದ ಆವರಣದಲ್ಲಿರುವ 10ನೇ ಶತಮಾನದ್ದೆಂದು ಹೇಳಲಾಗುವ ಈ ಶಿಲಾಶಾಸನದ ಮೇಲೆ ಇತ್ತೀಚೆಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡವು ಬೆಳಕು ಚೆಲ್ಲಿ, ಅದರಲ್ಲಿ ಉಲ್ಲೇಖವಾದ ಅಂಶಗಳನ್ನು ಪ್ರಚುರ ಪಡಿಸಿತ್ತು.

ಶಿಲಾಶಾಸನದ ಎಡಗಡೆಗೆ ಸೂರ್ಯ, ಬಲಗಡೆಗೆ ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ಬಲಬದಿಯ ಚಂದ್ರನ ಬಳಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ. ಈ ಶಿಲಾಶಾಸನದಲ್ಲಿ ಇದರ ಕಾಲವನ್ನು ಉಲ್ಲೇಖಿಸಲಾಗಿಲ್ಲವಾದರೂ, ಅದರಲ್ಲಿನ ಲಿಪಿಯ ಶೈಲಿಯನ್ನು ಗಮನಿಸಿ ಈ ಶಾಸನವು 10ನೇ ಶಾಸನವಾಗಿರಬೇಕೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಶಾಸನದಲ್ಲಿ ರಂಗ ಸಮುದ್ರ ಎಂದು ಉಲ್ಲೇಖಿಸಲಾಗಿದೆ. ಈಗ ಕರೆಯುವ ನಾರಿಹಳ್ಳವನ್ನೇ ರಂಗ ಸಮುದ್ರ ಎಂದು ಕರೆದಿರಬಹುದೆಂದು ಊಹಿಸಲಾಗಿದೆ. ಮರುಜನ್ಮಕ್ಕೆ ವಿಳಸಿತನಾಗು ಎಂದು ಉಲ್ಲೇಖವಾಗಿರುವುದನ್ನು ಗಮನಿಸಿ, ಈ ಶಾಸನವು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ದೇವಸ್ಥಾನದ ಬಳಿಯಲ್ಲಿ ನಿರ್ಮಾಣ ಕಾರ್ಯ ನಡೆಸುವಾಗ ಗೋಚರವಾದ ಈ ಶಾಸನವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಬಳಿಯಲ್ಲಿ ಅದನ್ನು ಇಟ್ಟಿರುವುದಲ್ಲದೆ, ಶಿಲಾಶಾಸನ ಕುರಿತು ಒಂದು ಬೋರ್ಡನ್ನು ಅಳವಡಿಸಿದ್ದಾರೆ. ಈ ಶಾಸನದ ಮೇಲೆ ಇತ್ತೀಚೆಗೆ ವಿಜಯನಗರ ತಿರುಗಾಟ ಸಂಶೋಧನಾ ತಂಡವು ಬೆಳಕು ಚೆಲ್ಲಿದೆ.

ಈ ಶಿಲಾಶಾಸನವು ಮ್ಯಾಂಗನೀಸ್ ಅಂಶವುಳ್ಳ ಕಾಡುಗಲ್ಲಿನ ಮೇಲೆ ಕೆತ್ತಲ್ಪಟ್ಟಿರುವುದು ಹಾಗೂ ಈ ಶಿಲಾಶಾಸನಕ್ಕೆ ಯಾವುದೇ ರಕ್ಷಣೆ ಇಲ್ಲದಿರುವ ಕಾರಣ, ಇದರಲ್ಲಿನ ಅಕ್ಷರಗಳು ಮಳೆಗಾಳಿಗೆ ಸಿಕ್ಕು ಸವೆದು ಹೋಗಿ ಕಣ್ಮರೆಯಾಗುವ ಸಂಭವವಿದೆ. ಈಗಾಗಲೇ ಈ ಶಾಸನದಲ್ಲಿನ ಕೆಲ ಅಕ್ಷರಗಳು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯವರು ಈ ಅಪರೂಪದ ಶಾಸನವನ್ನು ಸಂರಕ್ಷಿಸಲು ಕ್ರಮಕೈಗೊಳ್ಳಬೇಕಿದೆ.

ಕೋಟ್: ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ದೊರೆತಿರುವ ಮ್ಯಾಂಗನೀಸ್ ಬಂಡೆಕಲ್ಲಿನ ಶಾಸನವನ್ನು ಸಂರಕ್ಷಿಸಬೇಕಿದೆ. ಸಂರಕ್ಷಣೆಯಾಗದಿದ್ದರೆ, ಮಳೆಗಾಳಿಗೆ ಸಿಕ್ಕು ಅದರಲ್ಲಿನ ಅಕ್ಷರಗಳು ಅಳಿಸಿಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯ ಡಾ.ಗೋವಿಂದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ