ರಾಮನಗರ: ನಗರದ ಮಧ್ಯದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿ ದಂಡೆಗೆ ಹೊಸ ಸ್ಪರ್ಶ ನೀಡುವ ಮಹತ್ವಕಾಂಕ್ಷಿ ಅರ್ಕಾವತಿ ನದಿ ದಂಡೆ ಅಭಿವೃದ್ಧಿ (ಅರ್ಕಾವತಿ ರಿವರ್ ಫ್ರಂಟ್ ಡೆವಲಲ್ಮೆಂಟ್) ಯೋಜನೆಗೆ ಧಾರ್ಮಿಕ ಕೇಂದ್ರಗಳಾದ ಅರ್ಕೇಶ್ವರ ದೇವಾಲಯ, ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಅದರಂತೆ ಭೂ ಸ್ವಾಧೀನ ವಿರೋಧಿಸಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿರುವ ಅರ್ಕೇಶ್ವರ ದೇವಾಲಯ ಆಡಳಿತ ಮಂಡಳಿ, ಪಿರಾನ್ ಷಾ ವಲಿ ದರ್ಗಾ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳು, ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೂ ಅಹವಾಲು ಸಲ್ಲಿಸಿದರು.
ಆಡಳಿತರೂಢ ಪಕ್ಷದಿಂದಲೇ ವಿರೋಧ ಸಾಧ್ಯತೆ:ಈ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ನಗರಸಭೆ ಸಾಮಾನ್ಯ ಸಭೆ ಕರೆಯಲಾಗಿದ್ದು, ಅಲ್ಲಿ ಭೂ ಸ್ವಾಧೀನ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ವಿರೋಧ ಪಕ್ಷ ಮಾತ್ರವಲ್ಲದೆ ಆಡಳಿತರೂಢ ಪಕ್ಷವೂ ತೀವ್ರವಾಗಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಬಾಕ್ಸ್.............
ರಾಮನಗರ:
ಕರ್ನಾಟಕದಲ್ಲಿಯೇ ಪ್ರಸಿದ್ಧಿಯಾಗಿರುವ ಈ ದರ್ಗಾ ಲಕ್ಷಾಂತರ ಭಕ್ತಾದಿಗಳನ್ನು ಹೊಂದಿದ್ದು, ಪ್ರತಿನಿತ್ಯ ಮುಸ್ಲಿಂ ಧರ್ಮೀಯರು ಪ್ರಾರ್ಥನೆ ಮಾಡುವುದಲ್ಲದೇ ಹಿಂದೂ ಧರ್ಮೀಯರು ಸಹ ದರ್ಗಾಕ್ಕೆ ಬಂದು ತಾಯತ, ವಗೈರೆ ಕಟ್ಟಿಸಿಕೊಂಡು ಹೋಗುತ್ತಾರೆ. ಈ ದರ್ಗಾ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ.
ದರ್ಗಾದ ಮೇಲೆ ಧಾರ್ಮಿಕ ನಂಬಿಕೆ ಇಟ್ಟಿರುವ ಲಕ್ಷಾಂತರ ಜನರು ಮಾನಸಿಕವಾಗಿ ಬಳಲುವಂತಾಗುತ್ತದೆ. ಆದ್ದರಿಂದ ದರ್ಗಾ ಮತ್ತು ಅದಕ್ಕೆ ಸೇರಿದ ಮಸೀದಿ, ವಾಣಿಜ್ಯ ಕಟ್ಟಡಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ದರ್ಗಾ ಹಜ್ರತ್ ಪೀರನ್ ಶಾ ವಕಲಿ ಮಜ್ಜೂಬ್ ಕಮಿಟಿ ಒತ್ತಾಯಿಸಿದೆ.
ಭಾವನಾತ್ಮಕ ಸಂಬಂಧಗಳಿಗೆ ಧಕ್ಕೆಯಾಗದಿರಲಿ
ಜಿಲ್ಲಾಧಿಕಾರಿಗಳು ಹಾಗೂ ಭೂ ಸ್ವಾಧೀನ ಅಧಿಕಾರಿಗಳಿಗೆ ಭೂ ಸ್ವಾಧೀನ ಕ್ರಮಕ್ಕೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ತಮ್ಮಗಳ ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಕಾನೂನು ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.
ಈ ಕಾಲೋನಿಯಲ್ಲಿ ನಮ್ಮಗಳ ಉಳಿತಾಯದಿಂದ ಶ್ರಮಪಟ್ಟು ನೆಮ್ಮದಿಯಿಂದ ಬಾಳಲು ಮನೆಗಳನ್ನು ಕಟ್ಟಿಸಿಕೊಂಡಿದ್ದೇವೆ. ಇಲ್ಲಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಗರಸಭೆ ಒದಗಿಸಿದೆ.ಬಡಾವಣೆಯ ಮಕ್ಕಳಿಗೆ ಶಾಲೆ, ಅರ್ಕೇಶ್ವರ ದೇವಸ್ಥಾನ, ಶನಿಮಹಾತ್ಮ, ಅಯ್ಯಪ್ಪ ಮಂದಿರ, ಶ್ರೀ ಸಾಯಿಬಾಬಾ ಮಂದಿರ, ಪೀರೇನ ವಾಲಿ ದರ್ಗಾ ದೇವಾಲಯಗಳು ಹಾಗೂ ವ್ಯಾಪಾರ ಮಳಿಗೆಗಳು ಇವೆ. ನಗರದ ಮಧ್ಯೆ ಭಾಗದಲ್ಲಿರುವ ಈ ಸೂಕ್ತ ಸ್ಥಳವನ್ನು ತೊರೆದು ಇಳಿಯ ವಯಸ್ಸಿನಲ್ಲಿ ಹಾಗೂ ಬಡವರು ಉಳಿಸಿಕೊಂಡಿರುವ ಜಾಗವನ್ನು ಬಿಟ್ಟು ಹೋಗುವುದು ಎಲ್ಲಿಗೆ ಎಂದು ನಿವಾಸಿಗಳ ಪ್ರಶ್ನೆಯಾಗಿದೆ.
ನಮ್ಮಗಳ ಸ್ಥಿತಿ, ಮನೆಗಳ ಮೌಲ್ಯ ಹಾಗೂ ಭಾವನಾತ್ಮಕವಾಗಿ ಬೆಳೆದು ಬಂದಿರುವ ಅನುಬಂಧವನ್ನು ಪರಿಗಣಿಸಿ ಸರ್ಕಾರದ ಗಮನಕ್ಕೆ, ನಮ್ಮಗಳ ಆಕ್ಷೇಪಣೆಯನ್ನು ತೋರ್ಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಯೋಜನೆಯನ್ನು ವಸತಿ ಪ್ರದೇಶ ಬಿಟ್ಟು ಬೇರೆಡೆಗೆ ವರ್ಗಾಯಿಸಲು ಕ್ರಮ ವಹಿಸಬೇಕು.ರಾಘವೇಂದ್ರ ಕಾಲೋನಿಯಲ್ಲಿ ಎಲ್ಲ ಸಮುದಾಯದವರು ಒಗಟ್ಟಿನಿಂದ ಬಾಳ್ವೆ ನಡೆಸುತ್ತಿದ್ದೇವೆ. ಈ ಬಾಂಧವ್ಯಕ್ಕೆ ಧಕ್ಕೆ ಬರದಂತೆ, ನಮ್ಮ ಕನಸುಗಳನ್ನು ನುಚ್ಚು ನೂರು ಮಾಡಬಾರದು. ದೇವಾಲಯ, ಆಸ್ಪತ್ರೆ, ಮನೆಗಳು, ಶಾಲೆ ಸೇರಿದಂತೆ ಎಲ್ಲವನ್ನು ಉಳಿಸಿಕೊಡಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
6ಕೆಆರ್ ಎಂಎನ್ 4.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಪೀರನ್ ಷಾ ವಲಿ ದರ್ಗಾ ಕಮಿಟಿ ಹಾಗೂ ರಾಘವೇಂದ್ರ ಕಾಲೋನಿ ನಿವಾಸಿಗಳು ಮನವಿ ಸಲ್ಲಿಸಿದರು.