ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಒಂದು ಜೀವಾಮೃತದಲ್ಲಿ ೩೦ ಸಾವಿರದಿಂದ ೫೦ ಸಾವಿರ ಕೋಟಿ ಜೀವ ಕಣಗಳು ಇರುತ್ತೆ, ೩೦ ಲಕ್ಷ ಕೋಟಿ ಜೀವರಾಶಿಗಳು ಇರುತ್ತವೆ. ಜೀವಾಮೃತ ಮಾಡಲು ಅಂಥದ್ದೇನು ಖರ್ಚಾಗುವುದಿಲ್ಲ ಕಡಿಮೆ ಖರ್ಚಿನಲ್ಲಿ ಭೂಮಿ ಫಲವತ್ತದೆ ಹೆಚ್ಚುತ್ತದೆ ಎಂದರು.
ಎರೆಹುಳು ಮಣ್ಣನ್ನು ತಿಂದು ಜೀವಿಸುತ್ತದೆ. ಸಸ್ಯ ತ್ಯಾಜ್ಯ ತಿಂದ ಎರೆಹುಳು ಮಣ್ಣು ಹುಳ ಆಗಲು ಸಾಧ್ಯವೇ ಇಲ್ಲ. ಗೊಬ್ಬರ, ಕ್ರಿಮಿ ನಾಶಕದಿಂದ ಮಣ್ಣಲ್ಲಿ ಜೀವಿಸುವ ಎರೆ ಹುಳು ಸಾಯುತ್ತಿವೆ ಇದಾಗಬಾರದು. ಜೀವಾಮೃತ ಭೂಮಿಗೆ ಹಾಕಿದಾಗ ಎರೆಹುಳು ಮಣ್ಣಿನಡಿಯಲ್ಲಿದ್ದರೂ ಸಗಣಿ ವಾಸನೆಗೆ ಮೇಲೆ ಬರುತ್ತವೆ. ಎರೆಹುಳ ಇಕ್ಕೆಗಳು ಬೆಳೆಗಳ ಬೇರಿಗೆ ಆಹಾರವಾಗುತ್ತದೆ. ಆಗ ಬೆಳೆಗಳಲ್ಲಿ ಉತ್ತಮ ಇಳುವರಿ ಬರುತ್ತದೆ. ಹಾಗಾಗಿ ರೈತರು ಗೊಬ್ಬರ, ಕ್ರೀಮಿನಾಶಕ್ಕೆ ಮಾರು ಹೋಗದೆ ನೈಸರ್ಗಿಕ ಕೃಷಿಯತ್ತ ಮುಖ ಮಾಡಿ ಎಂದು ಕಿವಿ ಮಾತು ಹೇಳಿದರು.ಜೀವಾಮೃತ ಮಾಡಲು ೨೦೦ ಲೀಟರ್ನಷ್ಟು ಡ್ರಮ್ಮಿಗೆ ೧೦ ಕೆಜಿಯಷ್ಟು ಸಗಣಿ, ೧೦ ಲೀಟರ್ನಷ್ಟು ಗಂಜಲ, ದ್ವಿದಳ ಧಾನ್ಯಗಳುಳ್ಳ ೨ ಕೆಜಿಯಷ್ಟು ಹಿಟ್ಟು, ೨ ಕೆಜಿಯಷ್ಟು ಕಪ್ಪು ಬೆಲ್ಲ ಅಥವಾ ಹಣ್ಣಿನ ರಸ ೨ ಲೀಟರ್, ಜೊತೆಗೆ ಬದು ಮಣ್ಣು ಒಂದಿಡಿ ಹಾಕಿ ಗಾಳಿಯಾಡುವ ಬಟ್ಟಯಲ್ಲಿ ಡ್ರಮ್ಮು ಮುಚ್ಚಿಡಬೇಕು. ಬೇಸಿಗೆ ಕಾಲದಲ್ಲಾದರೆ ಜೀವಾಮೃತ ತಯಾರಿಸಿದ ದಿನದಿಂದ ಮೂರು ದಿನ ದಿನಕ್ಕೆ ಮೂರು ಬಾರಿ ತಿರುಗಿಸಬೇಕು, ನಾಲ್ಕು ದಿನಗಳಲ್ಲಿ ಭೂಮಿಗೆ ಹರಡಬೇಕು ಎಂದರು.
ಭೂಮಿ ಗಡುಸಾದರೆ, ಅಂತರ್ಜಲ ಕುಸಿಯುತ್ತೇ?:
ಇತ್ತೀಚಿನ ದಿನಗಳಲ್ಲಿ ಯಥೇಚ್ಛವಾದ ಗೊಬ್ಬರ,ಕ್ರೀಮಿನಾಶಕ ಬಳಕೆಯ ಜೊತೆಗೆ ನೀರು ಸಿಗುತ್ತದೆ ಎಂದು ಸಿಕ್ಕಾಬಟ್ಟೆಯಾಗಿ ನೀರನ್ನು ಭೂಮಿಗೆ ಕುಡಿಸುವ ಕಾರಣ ಭೂಮಿ ಗಡಸಾಗಿದೆ,ಭೂಮಿ ಗಡಸಾದರೆ ಮಳೆ ನೀರು ಭೂಮಿ ಕುಡಿಯಲ್ಲ, ಆಹಾರ ಕಲುಷಿತವಾಗುತ್ತಿದೆ.ಅಂತರ್ಜಲ ವಿಷವಾದರೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುತ್ತದೆ ಎಂದರು.ಕಾರ್ಯಾಗಾರದಲ್ಲಿ ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ, ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಹಾಜರಿದ್ದರು.