ಕನ್ನಡಪ್ರಭ ವಾರ್ತೆ ಹಳೇಬೀಡು
ಈ ವಾರ್ಡ್ ಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ೧ ಕೋಟಿ ರು. ಅನುದಾನದಲ್ಲಿ ಶಂಕುಸ್ಥಾಪನೆಯಾಗಿತ್ತು. ಸರ್ಕಾರ ಬದಲಾವಣೆ ಆದ ನಂತರ ಕೆಲಸವು ಸ್ಥಗಿತಗೊಂಡಿತು. ಬೇಲೂರು ಶಾಸಕ ಎಚ್. ಕೆ. ಸುರೇಶ್ ಮತ್ತೆ ಚಾಲನೆ ನೀಡಿ ಒಂದು ಕೋಟಿ ಅನುದಾನದಲ್ಲಿ ಹಳೇಬೀಡಿನ ಒಂದನೇ ಬ್ಲಾಕ್ಗೆ ಒಳ್ಳೆಯ ಚರಂಡಿ ಹಾಗೂ ಅತ್ಯುತ್ತಮವಾದ ಡಾಂಬರೀಕರಣವನ್ನು ಮಾಡಬೇಕೆಂದು ಗುತ್ತಿಗೆದಾರರಲ್ಲಿ ತಿಳಿಸಿದ್ದರು.
೮ ತಿಂಗಳ ಹಿಂದೆ ಡಾಂಬರೀಕರಣ ಮುನ್ನ ವೆಡ್ಮಿಕ್ಸ್ನ್ನು (೪೦ಎಂ.ಎಂ.ಕಲ್ಲು, ಎಂ ಸ್ಯಾಂಡ್) ೬ ಇಂಚು ಹಾಕಬೇಕು ಅದರೆ ಕೆಲವು ಬಳಿ ೨ಇಂಚು,೩” ಹಾಕಿದ್ದಾರೆ. ಇದರ ಬಗ್ಗೆ ಸಹ ಆಕ್ರೋಶ ಇದೆ. ಎರಡು ದಿನಗಳಿಂದ ಡಾಂಬರೀಕರಣ ಕೆಲಸ ಪ್ರಾರಂಭವಾಗಿದ್ದು ಒಂದು ಲೇಯರ್ ಮಾತ್ರ ಹಾಕಿದ್ದಾರೆ. ಈ ಸ್ಥಳಕ್ಕೆ ಇಲಾಖೆಯ ಎ.ಇ.ಇ ದಯನಂದ, ಎ.ಇ. ದರ್ಶನ್ ಬಂದರೂ ಗುತ್ತಿಗೆದಾರ ರಂಜಿತ್ ಗೌಡ ಸ್ಥಳಕ್ಕೆ ಬಂದಿರಲಿಲ್ಲ. ಇದರ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಕ್ಷಣವೇ ಕಾಮಗಾರಿ ಸ್ಥಳಕ್ಕೆ ಬರಬೇಕೆಂದು ತಿಳಿಸಿದರು.ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ತಪ್ಪುಗಳು ಕಂಡು ಬಂದರೆ ತಕ್ಷಣವೇ ಕೆಲಸವನ್ನು ಸ್ಥಗಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.
=========*ಹೇಳಿಕೆ2 ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ನೀಡಿದೆ ಕೆಲಸ ಮಾಡುತ್ತಿದ್ದಾರೆ. ಈ ಕೆಲಸದ ನೀಲಿನಕ್ಷೆ ನೀಡದೆ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಶಾಸಕರು ಗಮನ ನೀಡಬೇಕು.
ಗೀತಾ ಅರುಣ್ ಗ್ರಾಪಂ ಸದಸ್ಯೆ* ಹೇಳಿಕೆ2
೧ನೇ ಬ್ಲಾಕ್ನ ಗ್ರಾಮಸ್ಥರು ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೆನೆ ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರನ್ನು ರಾವನೆ ಮಾಡುತ್ತೇನೆ.ವಿರುಪಾಕ್ಷ ಪಿಡಿಓ