ಹಾನಗಲ್ಲ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಸಾಗಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಾವೇರಿ ಜಿಲ್ಲಾ ಹಿಂದೂ ಜಾಗರಣೆ ವೇದಿಕೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ನಿಯಮಾವಳಿ ಅನುಸರಿಸಿ ಗೋಮಾಂಸ ಸಾಗಣೆ ತಡೆಯಲು ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಬೇಕು. ಕಸಾಯಿಖಾನೆಗಳೆ ಮೇಲೆ ನಿಗಾ ಇಡಬೇಕು. ಆಕ್ರಮ ಕಸಾಯಿಖಾನೆ ಪ್ರಕರಣದಲ್ಲಿ ಇರುವವರ ಮೇಲೆ ನಿಗಾ ವಹಿಸಿ ಅಪರಾಧಿ ಕೃತ್ಯ ನಡೆಯದಂತೆ ಕ್ರಮ ಜರುಗಿಸಬೇಕು. ಈ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗಿದ್ದವರಿಗೆ ಎಚ್ಚರಿಕೆ ನೀಡಬೇಕು. ಗೋವಧೆ ಬಲಿಗೆ ಏಳು ವರ್ಷಗಳ ಶಿಕ್ಷೆ ಹಾಗೂ ₹೫ ಲಕ್ಷ ದಂಡ, ಗೋವಧೆಗೆ ಬಳಸಿದ ಜಾಗ ಮುಟ್ಟುಗೋಲು ವಿಷಯಗಳ ಬಗೆಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ ಗೋರಕ್ಷಣೆಗೆ ಮುಂದಾಗುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಸಹ ಸಂಯೋಜಕ ನಾಗರಾಜ ಹೆಬ್ಬಾರ, ತಾಲೂಕು ಸಂಯೋಜಕ ನಿಖತ ಹದಳಗಿ, ಸಹ ಸಂಯೋಜಕರಾದ ಗುರುರಾಜ ಆರೇರ, ಸಂತೋಷ ಅಜಗುಂಡಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಚಿನ್ ರಾಮಣ್ಣನವರ, ಎಬಿವಿಪಿ ತಾಲೂಕು ಸಂಚಾಲಕ ರವಿ ನೆಗಳೂರ, ಪದಾಧಿಕಾರಿಗಳಾದ ಬಸವರಾಜ ಹಾದಿಮನಿ, ಮಂಜುನಾಥ ಕೊಂಚಿಗೇರಿ, ರಾಘು ಬಂಗಾರಿ, ಶಿವು ಮೇದಾರ, ಚೇತನ್ ಹುಲ್ಲಕ್ಕನವರ, ವೀರೇಶ ಸೋಮಗಳಯ್ಯಮಠ, ಚೇತನ್ ಜವಳಿ, ಶಶಾಂಕ ಬೋಂಗಾಳೆ ಮೊದಲಾದವರು ಇದ್ದರು.