ಬಸ್‌ನಲ್ಲಿದ್ದ ₹ 2.5 ಲಕ್ಷ ಮೌಲ್ಯದ ಬಂಗಾರ ಠಾಣೆಗೆ ಒಪ್ಪಿಸಿದ ವಿದ್ಯಾರ್ಥಿನಿಯರು

KannadaprabhaNewsNetwork |  
Published : May 15, 2025, 01:38 AM IST
14ುಲು3 | Kannada Prabha

ಸಾರಾಂಶ

ಕೊಲ್ಲಿ ನಾಗೇಶ್ವರರಾವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಿಜ್ವಾನ್, ಯಶೋಧ ಕಾಲೇಜಿನಿಂದ ಹುಲಗಿ ಬಸ್‌ನಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಪ್ರಯಾಣಿಕರ ಸೀಟಿನ ಮೇಲೆ ಬಿದ್ದಿದ್ದ 2 ಚೈನ್, ಒಂದು ರಿಂಗ್ ಸಿಕ್ಕಿವೆ.

ಗಂಗಾವತಿ:ಹುಲಗಿಯಿಂದ ಗಂಗಾವತಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಿಕ್ಕ ₹ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಿದ್ಯಾರ್ಥಿಗಳು ಗಂಗಾವತಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೊಲ್ಲಿ ನಾಗೇಶ್ವರರಾವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಿಜ್ವಾನ್, ಯಶೋಧ ಕಾಲೇಜಿನಿಂದ ಹುಲಗಿ ಬಸ್‌ನಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಪ್ರಯಾಣಿಕರ ಸೀಟಿನ ಮೇಲೆ ಬಿದ್ದಿದ್ದ 2 ಚೈನ್, ಒಂದು ರಿಂಗ್ ಸಿಕ್ಕಿವೆ. ಕೂಡಲೆ ಬಸ್ ನಿಲ್ದಾಣದ ನಿಯಂತ್ರಾಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಪ್ರಭಾರಿ ಸಹಾಯಕ ಸಂಚಾರಿ ನೀರಿಕ್ಷಕ ಮುಕ್ಕಂದರ, ರಿಜ್ವಾನ್, ಯಶೋಧ ಅವರು ನಗರ ಪೊಲೀಸ್ ಠಾಣೆಗೆ ತೆರಳಿ ಇನ್‌ಸ್ಪೆಕ್ಟರ್‌ ಪ್ರಕಾಶ ಮಾಳೆ ಅವರಿಗೆ ಒಪ್ಪಿಸಿದ್ದಾರೆ.

ವಿದ್ಯಾರ್ಥಿನಿಯರ ಪ್ರಾಮಾಣಿಕತೆಗೆ ಪೊಲೀಸ್ ಅಧಿಕಾರಿಗಳು ಮತ್ತು ಈಶಾನ್ಯ ಸಾರಿಗೆ ಘಟಕದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌