ಭಾರಿ ಗೋಲ್ಮಾಲ್
ಅನೀಲಕುಮಾರ ದೇಶಮುಖ
ಕನ್ನಡಪ್ರಭ ವಾರ್ತೆ ಔರಾದ್ಬಹುತೇಕ ಸರ್ಕಾರಿ ಶಾಲೆಗಳು ಈಗ ಕಚೇರಿಗಳಂತೆ ಕೆಲಸ ಮಾಡ್ತಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾತ್ರ ಆಗ್ತಿವೆ. ಆದ್ರೆ ಮಕ್ಕಳೆಲ್ಲರೂ ಖಾಸಗಿಯಾಗಿ ವ್ಯಾಸಂಗ ಮಾಡ್ತಿರುವ ಹೊಸ ಪದ್ಧತಿ ತಾಲೂಕಿನಲ್ಲಿ ನಡೆಯುತ್ತಿದೆ. ಕೋಚಿಂಗ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ದಾಖಲಾಗಿ ಖಾಸಗಿಯಾಗಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳಲ್ಲಿ ಹಾಜರಾಗ್ತಿದ್ದಾರೆ ಎಂಬ ಮಾತುಗಳು ಇದೀಗ ವ್ಯಾಪಕವಾಗಿವೆ.
ತಾಲೂಕಿನ ಬಹುತೇಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಗರಿಷ್ಠ ಮಟ್ಟದಲ್ಲಾಗ್ತಿದೆ. ನಗರ ಪ್ರದೇಶದ ಮಕ್ಕಳು ಗ್ರಾಮೀಣ ಮೀಸಲಾತಿ ಪಡೆಯಲು ಹಳ್ಳಿಗಳ ಶಾಲೆಯಲ್ಲಿ ಪೋಷಕರು ದಾಖಲಾತಿ ಮಾಡಿ ಪಟ್ಟಣದಲ್ಲಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳಲ್ಲಿ ಮಕ್ಕಳನ್ನು ಸೇರಿಸ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ಶಿಕ್ಷಕರ ಹುದ್ದೆ ಉಳಿದುಕೊಂಡಿದೆ.
ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂಜ್ ವಿತರಣೆಯಂಥ ಯೋಜನೆಗಳಡಿಯಲ್ಲಿ ಭಾರಿ ಅಕ್ರಮ ಕೂಡ ಈ ದಾಖಲಾತಿ ಕಾಂಡದಿಂದ ಬಯಲಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಇದ್ದರೂ ಅದನ್ನು ತೋರಿಸದ ಮುಖ್ಯ ಶಿಕ್ಷಕರು ಸರ್ಕಾರದ ಯೋಜನೆಯ ಅನುದಾನ ಕೂಡ ಜೇಬಿಗೆ ಹಾಕಿಕೊಳ್ತಿದ್ದಾರೆ ಎಂಬ ಆರೋಪದ ನಡುವೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಸಾಕಷ್ಟು ಗೋಲ್ಮಾಲ್ ಆಗ್ತಿದೆ. ಇದೆಲ್ಲ ವ್ಯವಸ್ಥಿತ ರೀತಿಯಲ್ಲಿ ನಡಯುತ್ತಿದ್ದರೂ ಶಿಕ್ಷಣ ಇಲಾಖೆ ಕಂಡೂ ಕಾಣದಂತೆ ಜಾಣ ಮೌನ ವಹಿಸಿರುವುದು ವಿಪರ್ಯಾಸದ ಸಂಗತಿ.
ಪಟ್ಟಣದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ನವೋದಯ ಕೋಚಿಂಗ್ ಕೇಂದ್ರಗಳಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಕ್ಕಳು ಶಾಲಾವಧಿಯಲ್ಲಿ ಹಾಜರಾಗ್ತಿರುವುದು ಸಾಮಾನ್ಯವಾಗಿದೆ. ಪೋಷಕರೇ ತಮ್ಮ ಮಕ್ಕಳಿಗೆ ನವೋದಯ ತರಬೇತಿ ನೀಡುವ ಹೆಸರಿನಲ್ಲಿ ಹಣ ನೀಡಿ ಅನಧಿಕೃತ ಕೇಂದ್ರಗಳಲ್ಲಿ ಮಕ್ಕಳನ್ನು ಕಳಿಸ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳು ಭಣ ಭಣಗೊಳ್ತಿವೆ.
- ಸುಧಾಕರ ಕೊಳ್ಳುರ, ಮುಖಂಡ
- ರಂಗೇಶ ಬಿ.ಜೆ, ಕ್ಷೇತ್ರ ಶಿಕ್ಷಣಾಧಿಕಾರಿ