ನರಗುಂದ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಿಷಯ ಪರಿಣತರನ್ನು ಕೇಳಿ ಜ್ಞಾನ ವೃದ್ಧಿಸಿಕೊಂಡು ಪ್ರತಿ ವಿಷಯದಲ್ಲೂ ಹೆಚ್ಚಿನ ಅಂಕ ಗಳಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.
ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಎಲ್ಲ ಮೇಧಾವಿ ವಿದ್ಯಾರ್ಥಿಗಳಿಗೆ ಯಾವ ರೀತಿ ಹೆಚ್ಚಿನ ಅಂಕ ಗಳಿಸಬೇಕು ಎಂದು ಸಲಹೆ ನೀಡಿದರು. ಶೇ. 95 ಅಂಕ ಗಳಿಸುವ ಸಾಮರ್ಥ್ಯವಿರುವ ಮೇಧಾವಿ ವಿದ್ಯಾರ್ಥಿಗಳು ಇನ್ನುಳಿದ ಶೇ. 5 ಅಂಕ ಗಳಿಸಲು ಪ್ರಯತ್ನಿಸಿ ಎಂದರು.
ಗದಗ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ಬಿ.ಎಫ್. ಮಜ್ಜಗಿ, ಕ್ಷೇತ್ರ ಸಮನ್ವಯಧಿಕಾರಿ ಬಿ.ಎಫ್. ಮಜ್ಜಗಿ, ಶಿಕ್ಷಕರಾದ ಪಿ.ಸಿ. ಕಲಹಾಳ, ಜೆಡ್.ಎಂ. ಖಾಜಿ, ಎಸ್.ಎಲ್. ಮರಿಗೌಡರ, ಎಂ.ಆರ್. ನಾಯಕ, ರೂಪಾ ನಾಯ್ಡು, ಜಿ.ಎನ್. ದೊಡ್ಡಲಿಂಗಪ್ಪನವರ, ಬಿ.ಎ. ನದಾಫ, ಶಂಕರಗೌಡ ನಾಯ್ಕರ, ಉಮೇಶ ಗಣಿತ, ಶಂಕರ ನರಗುಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಿ.ಎಫ್. ಮಜ್ಜಗಿ ಸ್ವಾಗತಿಸಿದರು. ನಿತಿನ್ ಕೇಸರಕರ ಕಾರ್ಯಕ್ರಮ ನಿರೂಪಿಸಿದರು.