
ಕನ್ನಡಪ್ರಭವಾರ್ತೆ ಸಿಂಧನೂರು
ಕನ್ನಡ ವಿಭಾಗದ ಮುಖ್ಯಸ್ಥ ಮಹಾಂತಪ್ಪ ಕೊಡಗಲಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ವೈಯಕ್ತಿಕ ಬೆಳವಣಿಗೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾವಂತರಾಗುವ ಮೊದಲು ನಾವೆಲ್ಲರೂ ಉತ್ತಮ ಮನುಷ್ಯರಾಗುವುದು ಅತ್ಯಗತ್ಯ. ಜೊತೆಗೆ ಬದುಕಿನ ಕೊರತೆಗಳ ನಡುವೆಯೂ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲರೂ ಸಮಾಜವನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ಪ್ರತ್ಯೇಕಿಸುವ ಗೋಡೆಯಾಗಬಾರದು. ಬೆಳಕು ನೀಡುವ ದೀಪ ಹಚ್ಚಬೇಕೇ ಹೊರತು ಬೆಂಕಿ ಹಚ್ಚಬಾರದು ಎಂದು ಮಾರ್ಮಿಕವಾಗಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ಪ ಮಾತನಾಡಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ಕಾಲೇಜು ಹೊಂದಿದೆ. ಇಲ್ಲಿ ಶಿಸ್ತು, ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಹೋಗಲಾಗುತ್ತಿದೆ. ವಿದ್ಯಾರ್ಥಿನಿಯರು ಕಾಲೇಜಿಗೆ ಸುಂದರ ಕನಸುಗಳನ್ನು ಕಟ್ಟಿಕೊಂಡು ಬಂದಿರುತ್ತೀರಿ ಅದಕ್ಕೆ ತಕ್ಕಂತೆ ಶ್ರಮವಹಿಸಿ ಅಭ್ಯಾಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.---
ಉಪನ್ಯಾಸಕರಾದ ಮುದುಕಪ್ಪ, ಡಾ.ಮುದುಕಪ್ಪ ಕೆ.,ಡಾ.ಮದಗಪ್ಪ, ಜಯಪ್ಪ, ಮಲ್ಲೇಶ, ಸಿದ್ಧರಾಮೇಶ್ವರ, ಬಸವರಾಜ ಕೆ., ಡಾ.ಮಂಜುನಾಥ,