ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಅತ್ಯಂತ ಖಂಡನೀಯ. ಇಂತಹ ಘಟನೆ ಮುಂದೆ ನಡೆಯಬಾರದು, ಈ ನಿಟ್ಟಿನಲ್ಲಿ ನಾವೆಲ್ಲರೂ ಭಾರತೀಯರಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ದೇಶಕ್ಕೆ ಆಘಾತ ನೀಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದು, ಅದನ್ನು ಆದಷ್ಟು ಬೇಗ ಮಾಡಬೇಕು ಎಂದರು.
ನಿವೃತ್ತ ಅಧಿಕಾರಿ ಅಶೋಕ್ ಮೂಲೆಮಜಲು ಮಾತನಾಡಿ, ಬೇಸರದ ದಿನಗಳಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಭಯೋತ್ಪಾದಕರ ವಿರುದ್ಧ ಸಮರ ಸಾರಿ, ಭಾರತದ ಮೇಲೆ ಮುಂದೆ ಯಾವುದೇ ಇಂತಹ ಕೃತ್ಯ ನಡೆಯಲು ಮುಂದಾಗದಂತಹ ಎಚ್ಚರಿಕೆ ನೀಡಬೇಕು, ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.ಪ್ರಮುಖರಾದ ಪದ್ಮಕುಮಾರ್ ಗುಂಡಡ್ಕ, ಸುಜಾತ ಕಲ್ಲಾಜೆ, ರಾಜೇಶ್ ಎನ್.ಎಸ್., ಶ್ರೀಕುಮಾರ್ ಬಿಲದ್ವಾರ, ಡಾ.ರವಿಕಕ್ಕೆಪದವು, ಲಲಿತಾ ಗುಂಡಡ್ಕ, ಗಿರೀಶ್ ಆಚಾರ್ಯ,ಯಶೋಧಕೃಷ್ಣ, ಜಯಪ್ರಕಾಶ್ ಬಾಳುಗೋಡು, ಡಾ.ತಿಲಕ್ ಎ ಎ, ದುಗ್ಗಪ್ಪ ನಾಯಕ್, ಚಿದಾನಂದ ಕಂದಡ್ಕ, ಮೋನಪ್ಪ ಮಾನಾಡು, ಸೀತಾರಾಮ ಪೊಸವಳಿಕೆ, ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಘಟನೆ ಖಂಡಿಸಿ ಪೇಟೆಯ ವರ್ತಕರು ಒಂದರಿಂದ ಎರಡು ತಾಸು ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರು. ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.