ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಗ್ರಾಮದ ಮುಖಂಡ ಮಲ್ಲಯ್ಯ ಮಾತನಾಡಿ, ಪೂರ್ವಜರ ಕಾಲದಿಂದಲೂ ಪೂಜಿಸಿಕೊಂಡು ಬಂದಿರುವ ಬಂಡೆ ಬಸವೇಶ್ವರ ದೇವಾಲಯಕ್ಕೆ ನಮಗೆ ಪೂಜೆ ಮಾಡಲು ಅವಕಾಶ ನೀಡಿಲ್ಲ, ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಎಲ್ಲರೂ ಒಟ್ಟಾಗಿ ಬಂದು ಮತದಾನದಲ್ಲಿ ಭಾಗವಹಿಸುತ್ತೇವೆ ಎಂದರು.
ಶಿರಸ್ತೆದ್ದಾರ್ ನಂದಕುಮಾರ್ ಮಾತನಾಡಿ, ಮತದಾನ ಮಾಡುವುದು ಎಲ್ಲರ ಹಕ್ಕು, ಮತದಾನದಿಂದ ಯಾರು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಶಾಂತಿ ಸಭೆಯನ್ನು ಆಯೋಜಿಸಿದೆ. ಬಂಡೆ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನಾವು ಮನವಿ ಪತ್ರ ಕಳಿಸುತ್ತೇವೆ, ಇನ್ನು ಎರಡು ಮೂರು ದಿನದೊಳಗೆ ಅವರ ಆದೇಶವನ್ನು ನಿಮಗೆ ತಿಳಿಸುತ್ತೇವೆ ಎಲ್ಲರೂ ಶಾಂತಿಯುತವಾಗಿ ವರ್ತಿಸಿ ಮತದಾನ ಮಾಡಬೇಕು ಎಂದು ತಿಳಿಸಿದರು.ಇದೇ ವೇಳೆ ಬಸವೇಶ್ವರ ಕಾಲೋನಿಯ ಗ್ರಾಮಸ್ಥರಿಗೆ ಸ್ಮಶಾನದ ಜಾಗದ ಸಮಸ್ಯೆ ಇದ್ದು, ಅದನ್ನು ತಕ್ಷಣದಲ್ಲಿಯೇ ಬಗೆಹರಿಸಿ ಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಕಂದಾಯ ನಿರೀಕ್ಷಕ ಅಜ್ಮಲ್ ಶರೀಫ್, ಪಿಎಸ್ಐ ಪ್ರಕಾಶ್ ಎಂ ಎತ್ತಿನಮನಿ, ಗ್ರಾಮ ಲೇಖಾಧಿಕಾರಿ ಗುರು ನಾಯಕ್, ಮುಖಂಡರಾದ ಗಿರಿಗೌಡ ಮಹಾದೇವ್, ಬಸವರಾಜು, ಸುಬ್ರಮಣ್ಯ, ಕೃಷ್ಣನಾಯಕ್, ಸತೀಶ್ ಪಾಲ್ಗೊಂಡಿದ್ದರು.