ದೇಶದ ಇತಿಹಾಸದಲ್ಲೇ ಇಂತಹ ಪ್ರಕರಣ ನಡೆದಿರಲಿಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ

KannadaprabhaNewsNetwork |  
Published : Sep 17, 2024, 12:52 AM IST
16ಕೆಎಂಎನ್ ಡಿ12 | Kannada Prabha

ಸಾರಾಂಶ

ಅದೇ ಜೈಶ್ರೀರಾಮ್ ಕೂಗಿದರೆ, ಹನುಮ ಮಾಲೆ ಹಾಕುವವರು, ನರೇಂದ್ರ ಮೋದಿಗೆ ಜೈಕಾರ ಹಾಕುವವರಿಗೆ ಲಾಠಿ ಏಟು. ಹಿಂದೂ ಕಾರ್‍ಯಕರ್ತರನ್ನು ಎಲ್ಲಿಬೇಕು ಅಲ್ಲಿ ಕೊಲೆ ಮಾಡುತ್ತಿದ್ದಾರೆ. ನಾಗಮಂಗಲದಲ್ಲಿ ವಿನಾಯಕನ ಉತ್ಸವ ನಡೆಸಿದರೆ ಪೆಟ್ರೋಲ್ ಬಾಂಬ್ ಹಾಕಿ, ಕಲ್ಲು ತೂರಾಟ ಮಾಡುತ್ತಾರೆ. ಕುಕ್ಕರ್‌ನಲ್ಲಿ ಬಾಂಬ್ ತೆಗೆದುಕೊಂಡು ಹೋಗುವವರು ಕಾಂಗ್ರೆಸ್ ನವರ ಸಹೋದರರೇ?

ಕನ್ನಡಪ್ರಭ ವಾರ್ತೆ ಪಾಂಡವಪುರ

ಆರ್ ಎಸ್ ಎಸ್ ಕಚೇರಿಗೆ ಪೊಲೀಸರು ಶೂ ಹಾಕಿಕೊಂಡು ಬಂದು ಸಂಘದ ಪ್ರಚಾರಕನ್ನು ಎಳೆದಾಡಿರುವುದು ದೇಶದ ಇತಿಹಾಸದಲ್ಲೇ ಇಂತಹ ಪ್ರಕರಣ ನಡೆದಿಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪೊಲೀಸ್ ಠಾಣೆ ಎದುರು ವಿವಿಧ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು,

ಪವಿತ್ರ ದೇವಾಲಯವಾದ ಆರ್ ಎಸ್ ಎಸ್ ಕಚೇರಿಗೆ ಶೂ ಹಾಕಿಕೊಂಡು ನುಗ್ಗಿ, ಸಂಘದ ಪ್ರಚಾರಕರನ್ನು ಎಳೆದಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಪೊಲೀಸರು ಏಕಾಏಕಿ ಯಾವುದೇ ನೋಟಿಸ್, ವಾರೆಂಟ್ ಇಲ್ಲದೆ ಆರ್‌ಎಸ್‌ಎಸ್ ಕಚೇರಿಗೆ ದೇಶದ ಇತಿಹಾಸದಲ್ಲೇ ಕಚೇರಿ ಆರಂಭವಾದಗಿನಿಂದ ಶೂ ಹಾಕಿಕೊಂಡು ಒಳಗೆ ನುಗ್ಗಿರುವ ಇಂತಹ ಘಟನೆ ನಡೆದಿರಲಿಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಹಾಕಿದ ಪ್ರಕರಣದಲ್ಲಿ ಸರಕಾರವು ಅವರು ಭಯೋತ್ಪಾದಕರಲ್ಲ ಎಂಬುದಾಗಿ ಹೇಳಿದ್ದರು.

ಅದೇ ಜೈಶ್ರೀರಾಮ್ ಕೂಗಿದರೆ, ಹನುಮ ಮಾಲೆ ಹಾಕುವವರು, ನರೇಂದ್ರ ಮೋದಿಗೆ ಜೈಕಾರ ಹಾಕುವವರಿಗೆ ಲಾಠಿ ಏಟು. ಹಿಂದೂ ಕಾರ್‍ಯಕರ್ತರನ್ನು ಎಲ್ಲಿಬೇಕು ಅಲ್ಲಿ ಕೊಲೆ ಮಾಡುತ್ತಿದ್ದಾರೆ. ನಾಗಮಂಗಲದಲ್ಲಿ ವಿನಾಯಕನ ಉತ್ಸವ ನಡೆಸಿದರೆ ಪೆಟ್ರೋಲ್ ಬಾಂಬ್ ಹಾಕಿ, ಕಲ್ಲು ತೂರಾಟ ಮಾಡುತ್ತಾರೆ. ಕುಕ್ಕರ್‌ನಲ್ಲಿ ಬಾಂಬ್ ತೆಗೆದುಕೊಂಡು ಹೋಗುವವರು ಕಾಂಗ್ರೆಸ್ ನವರ ಸಹೋದರರೇ ಎಂದು ಪ್ರಶ್ನಿಸಿದರು.

ದೇಶಭಕ್ತರು, ದೇಶಕಟ್ಟುವ ಸಂಘಟಕರು. ದೇಶಪರವಾಗಿ ಐಕ್ಯತೆ, ಅಖಂಡತೆ ರಕ್ಷಣೆ ಮಾಡುವವರ ಮೇಲೆ ಈ ರೀತಿ ದಬ್ಬಾಳಿಕೆ, ದೌರ್ಜನ್ಯಗಳನ್ನು ನಡೆಸುತ್ತಾರೆ. ನಿಮಗೇನಾದರು ಆತ್ಮಸಾಕ್ಷಿ, ನೈತಿಕತೆ ಇದೆಯೇ? ತಿಳುವಳಿಕೆ ಕೊರೆತನಾ? ನಿಮಗೇನಾಗಿದೆ ಎಂದು ಕಿಡಿಕಾದರು.

ಗೃಹ ಇಲಾಖೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು, ಅಲ್ಲಿಯವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ