ಹೇಮಗಿರಿ ಷುಗರ್ಸ್ ನಲ್ಲಿ ಕಬ್ಬು ನುರಿಯುವಿಕೆ ಆರಂಭ

KannadaprabhaNewsNetwork |  
Published : Jun 27, 2025, 12:54 AM IST
26ಕೆಎಂಎನ್ ಡಿ14 | Kannada Prabha

ಸಾರಾಂಶ

ನಿತ್ಯ 4 ಸಾವಿರ ಟನ್ ಕಬ್ಬು ನುರಿಯುವ ಸಾಮರ್ಥ್ಯವಿದೆ. ವಾರ್ಷಿಕ 4 ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ಆದರೆ ಕೇವಲ 11 ಸಾವಿರ ಎಕರೆಯಲ್ಲಿ 5 ಲಕ್ಷ ಮೆಟ್ರಿಕ್ ಟನ್‌ರಷ್ಟು ಕಬ್ಬು ಮಾತ್ರ ಲಭ್ಯವಿದೆ. 3 ಲಕ್ಷ ಟನ್ ಕಬ್ಬಿಗಾಗಿ ರೈತರು ಸುಧಾರಿತ ಪದ್ಧತಿಯಲ್ಲಿ ಹೆಚ್ಚು ಕಬ್ಬು ಬೆಳೆಯಲು ಮುಂದಾಗಬೇಕು.

ಕಿಕ್ಕೇರಿ: ತಾಲೂಕಿಗೆ ರೈತರ ಜೀವನಾಡಿ ಹೇಮಗಿರಿ ಸಕ್ಕರೆ ಕಾರ್ಖಾನೆ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಕಾರ್ಖಾನೆ ಅಧ್ಯಕ್ಷ ರವಿರೆಡ್ಡಿ ತಿಳಿಸಿದರು.

ಸಮೀಪದ ಮಾಕವಳ್ಳಿ ಹೇಮಗಿರಿ ಷುಗರ್ಸ್ ಹಾಗೂ ರಿನಿವಬಲ್ಸ್ ಪ್ರೈ.ಲಿ. ವತಿಯಿಂದ ಗುರುವಾರ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆಗೆ ಚಾಲನೆ ನೀಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ 3291 ರು. ನಿಗದಿಯಾಗಿದೆ. ರೈತರಿಗೆ ಹಣ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. ನಿತ್ಯ 4 ಸಾವಿರ ಟನ್ ಕಬ್ಬು ನುರಿಯುವ ಸಾಮರ್ಥ್ಯವಿದೆ. ವಾರ್ಷಿಕ 4 ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ಆದರೆ ಕೇವಲ 11 ಸಾವಿರ ಎಕರೆಯಲ್ಲಿ 5 ಲಕ್ಷ ಮೆಟ್ರಿಕ್ ಟನ್‌ರಷ್ಟು ಕಬ್ಬು ಮಾತ್ರ ಲಭ್ಯವಿದೆ. 3 ಲಕ್ಷ ಟನ್ ಕಬ್ಬಿಗಾಗಿ ರೈತರು ಸುಧಾರಿತ ಪದ್ಧತಿಯಲ್ಲಿ ಹೆಚ್ಚು ಕಬ್ಬು ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.

ಕಬ್ಬಿನ ಉತ್ಪಾದನಾ ವೆಚ್ಚ ಕಡಿಮೆಗೊಳಿಸಿ ಇಳುವರಿ ಹೆಚ್ಚಿಸಲು ಕಾರ್ಖಾನೆ 95 ಎಕರೆಯಲ್ಲಿ ಮಾದರಿ ತಾಕು, ವೈಜ್ಞಾನಿಕ ನಾಟಿ, ಮಣ್ಣಿನ ಪರೀಕ್ಷೆ, ಆಳವಾದ ಉಳುಮೆ ಮಾಡಿ ಪ್ರತಿ ಎಕರೆಗೆ 70 ಮೆ.ಟನ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಖಾನೆ ಹಿರಿಯ ಅಧಿಕಾರಿ ಕೆ.ಬಾಬುರಾಜ್ ಮಾತನಾಡಿ, ಕಬ್ಬು ಕಟಾವುಗಾರರಿಗೆ ಕಾರ್ಖಾನೆ ನಿಗದಿ ಪಡಿಸದಷ್ಟು ಹಣ ನೀಡಿ ಸಮಸ್ಯೆಗಳಲ್ಲಿ ವಿಭಾಗ ಮಟ್ಟದ ಅಧಿಕಾರಿಗಳಿಗೆ ತಿಳಿಸಿ ಹೆಚ್ಚು ಹಣ ನೀಡದಿರಿ ಎಂದು ತಿಳಿ ಹೇಳಿದರು.

ಕಾರ್ಖಾನೆ ಅಧಿಕಾರಿಗಳಾದ ಮೇಯನ್, ಅಶೋಕ್‌ಕುಮಾರ್, ಆರ್.ಇ. ಕುಮಾರ್, ಮೋಹನ್, ರವಿಚಂದ್ರನ್, ಜಿ.ಆರ್. ದತ್ತಾತ್ರೇಯ, ಚಾಮುಂಡೇಶ್ವರಿ ಷುಗರ್‍ಸ್ ಅಧ್ಯಕ್ಷ ನಾಚಿಯಪ್ಪನ್, ಮುಖ್ಯ ಹಣಕಾಸು ಅಧಿಕಾರಿ ಎನ್. ಶ್ರೀನಿವಾಸನ್, ಚೀಪ್ ಜನರಲ್ ಮಾನ್ಯೇಜರ್ ಪೂರ್ಣಸ್ವಾಮಿ, ಹೇಮಾವತಿ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗಾಧಿಕಾರಿ ದೇವೇಗೌಡ, ಕಾಯಿ ಮಂಜೇಗೌಡ, ಕೆ.ಜಿ. ಪುಟ್ಟರಾಜು, ಬೋರಾಪುರ ಮಂಜುನಾಥ್, ವಡಕಹಳ್ಳಿ ಮಂಜೇಗೌಡ, ಕುಮಾರ್, ಕಬ್ಬು ಬೆಳೆಗಾರ ಸಂಘ, ಲಾರಿ ಹಾಗೂ ಟ್ರ್ಯಾಕ್ಟರ್ ಮಾಲೀಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಖಾನೆ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ