ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್‌ ಬೆಂಬಲಿಸಿ

KannadaprabhaNewsNetwork | Published : Apr 27, 2024 1:16 AM

ಸಾರಾಂಶ

ಕನ್ನಡಪ್ರಭ ವಾರ್ತೆ ಐಗಳಿ: 50 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶವನ್ನು ಜಾತ್ಯಾತೀತ ಮನೋಭಾವದಿಂದ ಕಟ್ಟಿದೆ. ಹೀಗಾಗಿ ದೀನದಲಿತರು, ನಿರ್ಗತಿಗರಿಗೆ ಆಸರೆಯಾಗಿ ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರಲು ಸಹೋದರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಸಂಸದೆಯನ್ನಾಗಿ ಆಯ್ಕೆ ಮಾಡಬೇಕು ಎಂದು ಯುವ ಮುಖಂಡ ರಾಹುಲ ಜಾರಕಿಹೊಳಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಐಗಳಿ 50 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶವನ್ನು ಜಾತ್ಯಾತೀತ ಮನೋಭಾವದಿಂದ ಕಟ್ಟಿದೆ. ಹೀಗಾಗಿ ದೀನದಲಿತರು, ನಿರ್ಗತಿಗರಿಗೆ ಆಸರೆಯಾಗಿ ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರಲು ಸಹೋದರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಸಂಸದೆಯನ್ನಾಗಿ ಆಯ್ಕೆ ಮಾಡಬೇಕು ಎಂದು ಯುವ ಮುಖಂಡ ರಾಹುಲ ಜಾರಕಿಹೊಳಿ ಮನವಿ ಮಾಡಿದರು.

ಸಮೀಪದ ಸುಟ್ಟಟ್ಟಿ, ಯಲ್ಲಮ್ಮವಾಡಿ, ಕಟಗೇರಿ, ಶಿರಹಟ್ಟಿ ಬಳವಾಡ, ಬುರ್ಲಟ್ಟಿ, ದಬದಬಹಟ್ಟಿ, ಕೊಡಗಾನೂರ, ಸವದಿ ಹಾಗೂ ಸವದಿದರ್ಗಾ ಗ್ರಾಮಗಳಲ್ಲಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ದೇಶದ ಬಡ ಮತ್ತು ಮಧ್ಯವರ್ತಿ ಜನರಿಗಾಗಿ ಶಿಕ್ಷಣ ನೀರಾವರಿ, ಅಣೆಕಟ್ಟು, ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿದೆ. ತಂದೆ ಸತೀಶ ಜಾರಕಿಹೊಳಿ ಈಗ ಲೋಕೋಪಯೋಗಿ ಸಚಿವರಾಗಿ ರಾಜ್ಯಾದ್ಯಂತ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದು. ಸಹೋದರಿ ಪ್ರಿಯಾಂಕಾ ಕೂಡ ಕಳೆದ 4 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು. ತಾವುಗಳು ಲೋಕಸಭಾ ಸದಸ್ಯರಾಗಿ ಅವರನ್ನು ಆಯ್ಕೆಗೊಳಿಸಬೇಕು ಎಂದು ಕೋರಿದರು.

ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ ಮಾತನಾಡಿ, ಈ ಚುನಾವಣೆ ಸುಳ್ಳು ಮತ್ತು ಸತ್ಯದ ಮಧ್ಯ ನಡೆಯುತ್ತಿದೆ. 303 ಬಿಜೆಪಿ ಸಂಸದರು ದತ್ತು ಪಡೆದ ನಗರಗಳು ಎಲ್ಲಿಯೂ ಅಭಿವೃದ್ಧಿಯಾಗಿಲ್ಲ. ಬರೀ ಅದನ್ನು ಮಾಡಿದಿವಿ, ಇದನ್ನು ಮಾಡಿದಿವಿ ಎಂದು ಬಾಯಿ ಮಾತೆ ಆಗಿವೆ, ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಪಾರ್ಲಿಮೆಂಟ್ ಇರುವ ದೆಹಲಿಯಲ್ಲಿಯೇ ಬಿಜೆಪಿ ಬೇಡವಾಗಿದೆ. ಕಾಂಗ್ರೆಸ್ ಈಡೇರಿಸಿದ 5 ಗ್ಯಾರಂಟಿಗಳಂತೆ ದೇಶದಲ್ಲಿ ಕೂಡ ಗ್ಯಾರಂಟಿಗಳು ಜಾರಿ ಬರಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಿನಂತಿಸಿದರು.

ಮುಖಂಡ ಚಿದಾನಂದ ಸವದಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರು ಬರಿ ನಿಪ್ಪಾಣಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಮಾತ್ರ ಸಿಮಿತವಾಗಿದ್ದಾರೆ. ಉಳಿದ ವಿಧಾನಸಭಾ ಕ್ಷೇತ್ರದ ಹಳ್ಳಿಗಳು ಬೇಡವಾಗಿವೆ. ಅಂತವರನ್ನು ಈ ಬಾರಿ ಸೋಲಿಸಿ ಪ್ರಿಯಾಂಕಾ ಜಾರಕಿಹೊಳಿಯನ್ನು ಆಯ್ಕೆಗೊಳಿಸಬೇಕು ಎಂದು ಮನವಿ ಮಾಡಿದರು.

ಉದ್ಯಮಿ ಸದಾಶಿವ ಬುಟಾಳಿ, ವಿನಾಯಕ ದೇಸಾಯಿ ಮಾತನಾಡಿದರು. ಡಾ.ಸವಿತಾ ಪೂಜಾರಿ, ಮುಖಂಡರಾದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ಧ ಖೋಬ್ರಿ, ರಾವಸಾಬ್‌ ಐಹೊಳಿ, ರಮೇಶ ಸಿಂದಗಿ, ಅರ್ಜುನ ಪೂಜಾರಿ, ಶಿವರುದ್ದಪ್ಪ ಗೂಳಪ್ಪನವರ, ಈಸಾಕ್ ನದಾಫ್, ಅನಿಲ ಸುಣಡೊಳಿ, ಅಣ್ಣಪ್ಪ ಖೋತ, ರಮೇಶ ಅಂಬಾಜಿ, ಅಶೋಕ ಮಗದುಮ್, ಅಪ್ಪುಗೌಡ ನೇಮಗೌಡ ಸೇರಿದಂತೆ ಹಲವರು ಇದ್ದರು.ಬಾಕ್ಸ್...

ಪ್ರಿಯಾಂಕಾ ಜಾರಕಿಹೊಳಿಯವರು ಕೊರೋನಾ ಸಂದರ್ಭದಲ್ಲಿ ಅಥಣಿ ಕ್ಷೇತ್ರಕ್ಕೆ ಸ್ಯಾನಿಟೈಸರ್‌, ಮಾಸ್ಕ್‌, ಆಕ್ಸಿಜನ್ ಪೂರೈಸುವ ಕೆಲಸವನ್ನು ಮಾಡಿದ್ದಾರೆ. ಪ್ರವಾಹ ಬಂದಾಗ ಪ್ರವಾಹ ಪಿಡಿತ ಜನರಿಗೆ ಸಹಾಯ ಮಾಡಿದ ಪ್ರಿಯಾಂಕಾ ಅವರನ್ನು ಈ ಬಾರಿ ಆಯ್ಕೆಗೊಳಿಸೋಣ. ಇದಕ್ಕೆ ತಾವೆಲ್ಲರೂ ಕೈ ಜೋಡಿಸಬೇಕು.

-ಗಜಾನನ ಮಂಗಸೂಳಿ, ಕಾಂಗ್ರೆಸ್ ಮುಖಂಡರು.

Share this article